<p><strong>ಕಾನ್ಪುರ</strong><strong>: </strong>ವ್ಯಕ್ತಿಯೊಬ್ಬರು ಮೃತಪಟ್ಟು 18 ತಿಂಗಳು ಕಳೆದರೂ, ಅವರು ಕೋಮಾದಲ್ಲಿದ್ದಾರೆ ಎಂದು ಭಾವಿಸಿದ್ದ ಕುಟುಂಬದವರು ಕೊಳೆತ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ವಿಲಕ್ಷಣ ಪ್ರಕರಣ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ.</p>.<p>ಆದಾಯ ತೆರಿಗೆ ಇಲಾಖೆ ನೌಕರರಾಗಿದ್ದ ವಿಮಲೇಶ್ ದೀಕ್ಷಿತ್ ಮೃತಪಟ್ಟಿದ್ದವರು.</p>.<p>ದೀಕ್ಷಿತ್ ಅವರ ಪತ್ನಿ ಶವದ ಮೇಲೆ ನಿತ್ಯ 'ಗಂಗಾಜಲ' ಪ್ರೋಕ್ಷಣೆ ಮಾಡುತ್ತಿದ್ದರು. ಮಾನಸಿಕ ಸ್ಥಿರತೆ ಕಳೆದುಕೊಂಡಂತೆ ಕಂಡುಬಂದಿರುವ ಅವರು ತಮ್ಮ ಪತಿ ಕೋಮಾದಿಂದ ಹೊರಬರಲು'ಗಂಗಾಜಲ' ನೆರವಾಗಬಹುದು ಎಂದು ಭಾವಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ದೀಕ್ಷಿತ್ ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದಾರೆ ಎಂದುಖಾಸಗಿ ಆಸ್ಪತ್ರೆಯು 2021ರ ಏಪ್ರಿಲ್ 21ರಂದೇ ಮರಣ ಪ್ರಮಾಣಪತ್ರ ನೀಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ದೀಕ್ಷಿತ್ಕೋಮಾದಲ್ಲಿದ್ದಾರೆ ಎಂದು ಭಾವಿಸಿದ್ದ ಕುಟುಂಬ ಅಂತಿಮ ಸಂಸ್ಕಾರವನ್ನೂ ನೆರವೇರಿಸಿಲ್ಲ ಎಂದು ಮುಖ್ಯ ಆರೋಗ್ಯ ಅಧಿಕಾರಿ (ಸಿಎಂಒ) ಡಾ. ಅಲೋಕ್ ರಂಜನ್ ತಿಳಿಸಿದ್ದಾರೆ.</p>.<p>ದೀಕ್ಷಿತ್ ಕುಟುಂಬದ ಪಿಂಚಣಿಗೆ ಸಂಬಂಧಿಸಿದ ಕಡತಗಳು ವಿಲೇವಾರಿಯಾಗದ ಕಾರಣ ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿ, ತನಿಖೆ ನಡೆಸುವಂತೆ ಕೋರಿದ್ದರು. ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಅಧಿಕಾರಿಗಳ ತಂಡ ರಾವತ್ಪುರ ಪ್ರದೇಶದಲ್ಲಿರುವ ದೀಕ್ಷಿತ್ ಅವರ ಮನೆಗೆ ಭೇಟಿ ನೀಡಿದಾಗ ವಿಚಾರ ಗೊತ್ತಾಗಿದೆ. ಈ ವೇಳೆ ಕುಟುಂಬದವರು ದೀಕ್ಷಿತ್ ಜೀವಂತವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ಒತ್ತಾಯಪೂರ್ವಕವಾಗಿ ತಿಳಿಸಿದ್ದರು. ಆದಾಗ್ಯೂ, ಕುಟುಂಬದವರ ಮನವೊಲಿಸಿದಅಧಿಕಾರಿಗಳು ಶವವನ್ನು ಲಾಲಾ ಲಜಪತ್ ರಾಜ್ (ಎಲ್ಎಲ್ಆರ್) ಆಸ್ಪತ್ರೆಗೆ ತಂದು ವೈದ್ಯಕೀಯ ತಪಾಸಣೆ ನಡೆಸಿದರು. ಬಳಿಕ, ದೀಕ್ಷಿತ್ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಯಿತು ಎಂದುರಂಜನ್ ವಿವರಿಸಿದ್ದಾರೆ.</p>.<p>ಈ ಕುರಿತು ತ್ರಿ–ಸದಸ್ಯ ತಂಡವನ್ನು ರಚಿಸಲಾಗಿದೆ. ಕೂಲಂಕಷವಾಗಿ ಪರಿಶೀಲಿಸಿಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<p>ಕುಟುಂಬದವರು ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ನೆರೆಹೊರೆಯವರಿಗೂ ಹೇಳಿದ್ದರು.ದೀಕ್ಷಿತ್ ಅವರ ಪತ್ನಿ ಮಾನಸಿಕವಾಗಿ ಸ್ಥಿರತೆ ಕಳೆದುಕೊಂಡಿರುವಂತೆ ಕಂಡುಬಂದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ದೀಕ್ಷಿತ್ ಕುಟುಂಬ ಸದಸ್ಯರು ಆಮ್ಲಜನಕ ಸಿಲಿಂಡರ್ಗಳನ್ನುಆಗಾಗ್ಗೆ ಮನೆಗೆ ಕೊಂಡೊಯ್ಯುತ್ತಿದ್ದದ್ದನ್ನು ನೋಡಿದ್ದಾಗಿ ಅಕ್ಕಪಕ್ಕದವರು ಹೇಳಿಕೆ ನಿಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ</strong><strong>: </strong>ವ್ಯಕ್ತಿಯೊಬ್ಬರು ಮೃತಪಟ್ಟು 18 ತಿಂಗಳು ಕಳೆದರೂ, ಅವರು ಕೋಮಾದಲ್ಲಿದ್ದಾರೆ ಎಂದು ಭಾವಿಸಿದ್ದ ಕುಟುಂಬದವರು ಕೊಳೆತ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ವಿಲಕ್ಷಣ ಪ್ರಕರಣ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ.</p>.<p>ಆದಾಯ ತೆರಿಗೆ ಇಲಾಖೆ ನೌಕರರಾಗಿದ್ದ ವಿಮಲೇಶ್ ದೀಕ್ಷಿತ್ ಮೃತಪಟ್ಟಿದ್ದವರು.</p>.<p>ದೀಕ್ಷಿತ್ ಅವರ ಪತ್ನಿ ಶವದ ಮೇಲೆ ನಿತ್ಯ 'ಗಂಗಾಜಲ' ಪ್ರೋಕ್ಷಣೆ ಮಾಡುತ್ತಿದ್ದರು. ಮಾನಸಿಕ ಸ್ಥಿರತೆ ಕಳೆದುಕೊಂಡಂತೆ ಕಂಡುಬಂದಿರುವ ಅವರು ತಮ್ಮ ಪತಿ ಕೋಮಾದಿಂದ ಹೊರಬರಲು'ಗಂಗಾಜಲ' ನೆರವಾಗಬಹುದು ಎಂದು ಭಾವಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ದೀಕ್ಷಿತ್ ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದಾರೆ ಎಂದುಖಾಸಗಿ ಆಸ್ಪತ್ರೆಯು 2021ರ ಏಪ್ರಿಲ್ 21ರಂದೇ ಮರಣ ಪ್ರಮಾಣಪತ್ರ ನೀಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<p>ದೀಕ್ಷಿತ್ಕೋಮಾದಲ್ಲಿದ್ದಾರೆ ಎಂದು ಭಾವಿಸಿದ್ದ ಕುಟುಂಬ ಅಂತಿಮ ಸಂಸ್ಕಾರವನ್ನೂ ನೆರವೇರಿಸಿಲ್ಲ ಎಂದು ಮುಖ್ಯ ಆರೋಗ್ಯ ಅಧಿಕಾರಿ (ಸಿಎಂಒ) ಡಾ. ಅಲೋಕ್ ರಂಜನ್ ತಿಳಿಸಿದ್ದಾರೆ.</p>.<p>ದೀಕ್ಷಿತ್ ಕುಟುಂಬದ ಪಿಂಚಣಿಗೆ ಸಂಬಂಧಿಸಿದ ಕಡತಗಳು ವಿಲೇವಾರಿಯಾಗದ ಕಾರಣ ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿ, ತನಿಖೆ ನಡೆಸುವಂತೆ ಕೋರಿದ್ದರು. ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಅವರೊಂದಿಗೆ ಅಧಿಕಾರಿಗಳ ತಂಡ ರಾವತ್ಪುರ ಪ್ರದೇಶದಲ್ಲಿರುವ ದೀಕ್ಷಿತ್ ಅವರ ಮನೆಗೆ ಭೇಟಿ ನೀಡಿದಾಗ ವಿಚಾರ ಗೊತ್ತಾಗಿದೆ. ಈ ವೇಳೆ ಕುಟುಂಬದವರು ದೀಕ್ಷಿತ್ ಜೀವಂತವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ಒತ್ತಾಯಪೂರ್ವಕವಾಗಿ ತಿಳಿಸಿದ್ದರು. ಆದಾಗ್ಯೂ, ಕುಟುಂಬದವರ ಮನವೊಲಿಸಿದಅಧಿಕಾರಿಗಳು ಶವವನ್ನು ಲಾಲಾ ಲಜಪತ್ ರಾಜ್ (ಎಲ್ಎಲ್ಆರ್) ಆಸ್ಪತ್ರೆಗೆ ತಂದು ವೈದ್ಯಕೀಯ ತಪಾಸಣೆ ನಡೆಸಿದರು. ಬಳಿಕ, ದೀಕ್ಷಿತ್ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಯಿತು ಎಂದುರಂಜನ್ ವಿವರಿಸಿದ್ದಾರೆ.</p>.<p>ಈ ಕುರಿತು ತ್ರಿ–ಸದಸ್ಯ ತಂಡವನ್ನು ರಚಿಸಲಾಗಿದೆ. ಕೂಲಂಕಷವಾಗಿ ಪರಿಶೀಲಿಸಿಸಾಧ್ಯವಾದಷ್ಟು ಬೇಗ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<p>ಕುಟುಂಬದವರು ದೀಕ್ಷಿತ್ ಕೋಮಾದಲ್ಲಿದ್ದಾರೆ ಎಂದು ನೆರೆಹೊರೆಯವರಿಗೂ ಹೇಳಿದ್ದರು.ದೀಕ್ಷಿತ್ ಅವರ ಪತ್ನಿ ಮಾನಸಿಕವಾಗಿ ಸ್ಥಿರತೆ ಕಳೆದುಕೊಂಡಿರುವಂತೆ ಕಂಡುಬಂದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ದೀಕ್ಷಿತ್ ಕುಟುಂಬ ಸದಸ್ಯರು ಆಮ್ಲಜನಕ ಸಿಲಿಂಡರ್ಗಳನ್ನುಆಗಾಗ್ಗೆ ಮನೆಗೆ ಕೊಂಡೊಯ್ಯುತ್ತಿದ್ದದ್ದನ್ನು ನೋಡಿದ್ದಾಗಿ ಅಕ್ಕಪಕ್ಕದವರು ಹೇಳಿಕೆ ನಿಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>