<p><strong>ಲಖನೌ:</strong> ಧಾರ್ಮಿಕ ನಗರಿ ಅಯೋಧ್ಯೆಯ ಸೌಂದರ್ಯವನ್ನು ಹೆಚ್ಚಿಸುವ ಕ್ರಮವಾಗಿ ಅಲ್ಲಿನ ರಾಮಪಥದಲ್ಲಿ ಅಳವಡಿಸಲಾಗಿದ್ದ ಸುಮಾರು 4 ಸಾವಿರ ಆಲಂಕಾರಿಕ ವಿದ್ಯುತ್ ದೀಪಗಳು ಕಳ್ಳತನವಾಗಿವೆ. </p><p>ಪೊಲೀಸ್ ಮೂಲಗಳ ಪ್ರಕಾರ, ಕಳ್ಳತನವಾಗಿರುವ ವಿದ್ಯುತ್ ದೀಪಗಳಲ್ಲಿ 3,800 ಬಾಂಬೂ ಲೈಟ್ಗಳು, 36 ಗೊಬೊ ಪ್ರಾಜೆಕ್ಟರ್ ಲೈಟ್ಗಳು ಸೇರಿವೆ.</p><p>ದೀಪ ಅಳವಡಿಸಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದಿದ್ದ ನಿರ್ವಹಣಾ ಸಂಸ್ಥೆಯು ಈ ಸಂಬಂಧ ಪೊಲೀಸರಿಗೆ ದೂರು ನೀಡಿದೆ. </p><p>ದೀಪಗಳ ಪರಿಶೀಲನೆ ವೇಳೆ ಸಂದರ್ಭದಲ್ಲಿ ಈ ಕೃತ್ಯ ಗೊತ್ತಾಗಿದೆ. ದೊಡ್ಡ ಪ್ರಮಾಣದಲ್ಲಿ ಆಲಂಕಾರಿಕ ವಿದ್ಯುತ್ ದೀಪಗಳು ಕಳುವಾಗಿರುವುದು ಪಟ್ಟಣದ ಸಂತರು, ಸ್ವಾಮೀಜಿಗಳಿಗೂ ಆತಂಕ ಮೂಡಿಸಿದೆ. ಪೊಲೀಸರ ಕರ್ತವ್ಯಬದ್ಧತೆಯನ್ನೇ ಪ್ರಶ್ನಿಸುವಂತಾಗಿದೆ.</p><p>ಈ ಮಾರ್ಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅಸಂಖ್ಯ ಸಂಖ್ಯೆಯಲ್ಲಿ ಪೊಲೀಸರ ಉಪಸ್ಥಿತಿ ಇದೆ. ಆದರೂ ಕಳ್ಳತನ ಆಗಿದೆ. ಈ ಕುರಿತು ಸಮಗ್ರ ತನಿಖೆ ಅಗತ್ಯ ಎಂದು ಸ್ವಾಮೀಜಿಯೊಬ್ಬರು ಪ್ರತಿಕ್ರಿಯಿಸಿದರು.</p><p>ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸಂಸ್ಥೆ ನೀಡಿರುವ ದೂರು ಆಧರಿಸಿ ತನಿಖೆ ನಡೆಯುತ್ತಿದೆ. ಒಂದು ವೇಳೆ ನೀಡಲಾಗಿರುವ ದೂರು ಸುಳ್ಳು ಎಂದು ದೃಢಪಟ್ಟಲ್ಲಿ ಸಂಸ್ಥೆಯ ವಿರುದ್ಧವೇ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.</p><p>ನೂತನ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆ ನಗರದ ಸೌಂದರ್ಯೀಕರಣ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. </p><p>ಅಯೋಧ್ಯೆ ನಗರದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆಗಳು ಇತ್ತೀಚೆಗೆ ಹಾನಿಗೊಂಡಿದ್ದವು. ಅಲ್ಲದೆ, ಭಾರಿ ಮಳೆಯಾದ ಹಿಂದೆಯೆ ನೂತನ ರಾಮಮಂದಿರದಲ್ಲಿಯೂ ಸೋರಿಕೆ ಉಂಟಾಗಿತ್ತು. ಈ ಬೆಳವಣಿಗೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಧಾರ್ಮಿಕ ನಗರಿ ಅಯೋಧ್ಯೆಯ ಸೌಂದರ್ಯವನ್ನು ಹೆಚ್ಚಿಸುವ ಕ್ರಮವಾಗಿ ಅಲ್ಲಿನ ರಾಮಪಥದಲ್ಲಿ ಅಳವಡಿಸಲಾಗಿದ್ದ ಸುಮಾರು 4 ಸಾವಿರ ಆಲಂಕಾರಿಕ ವಿದ್ಯುತ್ ದೀಪಗಳು ಕಳ್ಳತನವಾಗಿವೆ. </p><p>ಪೊಲೀಸ್ ಮೂಲಗಳ ಪ್ರಕಾರ, ಕಳ್ಳತನವಾಗಿರುವ ವಿದ್ಯುತ್ ದೀಪಗಳಲ್ಲಿ 3,800 ಬಾಂಬೂ ಲೈಟ್ಗಳು, 36 ಗೊಬೊ ಪ್ರಾಜೆಕ್ಟರ್ ಲೈಟ್ಗಳು ಸೇರಿವೆ.</p><p>ದೀಪ ಅಳವಡಿಸಲು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಗುತ್ತಿಗೆ ಪಡೆದಿದ್ದ ನಿರ್ವಹಣಾ ಸಂಸ್ಥೆಯು ಈ ಸಂಬಂಧ ಪೊಲೀಸರಿಗೆ ದೂರು ನೀಡಿದೆ. </p><p>ದೀಪಗಳ ಪರಿಶೀಲನೆ ವೇಳೆ ಸಂದರ್ಭದಲ್ಲಿ ಈ ಕೃತ್ಯ ಗೊತ್ತಾಗಿದೆ. ದೊಡ್ಡ ಪ್ರಮಾಣದಲ್ಲಿ ಆಲಂಕಾರಿಕ ವಿದ್ಯುತ್ ದೀಪಗಳು ಕಳುವಾಗಿರುವುದು ಪಟ್ಟಣದ ಸಂತರು, ಸ್ವಾಮೀಜಿಗಳಿಗೂ ಆತಂಕ ಮೂಡಿಸಿದೆ. ಪೊಲೀಸರ ಕರ್ತವ್ಯಬದ್ಧತೆಯನ್ನೇ ಪ್ರಶ್ನಿಸುವಂತಾಗಿದೆ.</p><p>ಈ ಮಾರ್ಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅಸಂಖ್ಯ ಸಂಖ್ಯೆಯಲ್ಲಿ ಪೊಲೀಸರ ಉಪಸ್ಥಿತಿ ಇದೆ. ಆದರೂ ಕಳ್ಳತನ ಆಗಿದೆ. ಈ ಕುರಿತು ಸಮಗ್ರ ತನಿಖೆ ಅಗತ್ಯ ಎಂದು ಸ್ವಾಮೀಜಿಯೊಬ್ಬರು ಪ್ರತಿಕ್ರಿಯಿಸಿದರು.</p><p>ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸಂಸ್ಥೆ ನೀಡಿರುವ ದೂರು ಆಧರಿಸಿ ತನಿಖೆ ನಡೆಯುತ್ತಿದೆ. ಒಂದು ವೇಳೆ ನೀಡಲಾಗಿರುವ ದೂರು ಸುಳ್ಳು ಎಂದು ದೃಢಪಟ್ಟಲ್ಲಿ ಸಂಸ್ಥೆಯ ವಿರುದ್ಧವೇ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.</p><p>ನೂತನ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆ ನಗರದ ಸೌಂದರ್ಯೀಕರಣ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. </p><p>ಅಯೋಧ್ಯೆ ನಗರದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗಿದ್ದ ರಸ್ತೆಗಳು ಇತ್ತೀಚೆಗೆ ಹಾನಿಗೊಂಡಿದ್ದವು. ಅಲ್ಲದೆ, ಭಾರಿ ಮಳೆಯಾದ ಹಿಂದೆಯೆ ನೂತನ ರಾಮಮಂದಿರದಲ್ಲಿಯೂ ಸೋರಿಕೆ ಉಂಟಾಗಿತ್ತು. ಈ ಬೆಳವಣಿಗೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>