<p><strong>ಮುಂಬೈ:</strong> ’ನಮ್ಮ ಸರ್ಕಾರದ ನೂತನ ಕೃಷಿ ಮಸೂದೆಗಳು ರೈತರನ್ನು ’ಅನ್ನದಾತ’ನ ಪಾತ್ರದಿಂದ ಉದ್ಯಮಶೀಲತೆಯತ್ತ ಕೊಂಡೊಯ್ದು, ಅವರ ಆದಾಯವನ್ನು ಹೆಚ್ಚಿಸಲಿವೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.</p>.<p>ವಿಡಿಯೊ ಕಾನ್ಫರೆನ್ಸ್ ಮೂಲಕಮಂಗಳವಾರ ಕೇಂದ್ರದ ಮಾಜಿ ಸಚಿವ ಬಾಲಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆ ಬಿಡುಗಡೆಗೊಳಿಸಿ, ಅಹಮದ್ನಗರ ಜಿಲ್ಲೆಯ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿಗೆ ಮರುನಾಮಕರಣ ಮಾಡಿದ ನಂತರ ಅವರು ಮಾತನಾಡಿದರು.</p>.<p>’ಗುಜರಾತ್, ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು, ಸಕ್ಕರೆ ಮತ್ತು ಗೋಧಿ ಉತ್ಪಾದನೆ ಉಲ್ಲೇಖಿಸಿದ ಮೋದಿ ಅವರು, ’ ಇಂಥ ಸ್ಥಳೀಯ ಉದ್ಯಮ ಮಾದರಿಗಳು ದೇಶವನ್ನು ಮುಂದೆ ಕೊಂಡೊಯ್ಯುತ್ತವೆ’ ಎಂದು ಹೇಳಿದರು.</p>.<p>’ಸ್ವಾತಂತ್ರ್ಯದ ನಂತರ ದೇಶದಲ್ಲಿ ಸಾಕಷ್ಟು ಆಹಾರ ಸಂಗ್ರಹವಿರಲಿಲ್ಲ. ಆಗ ಸರ್ಕಾರ ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿತ್ತು. ಆ ಸಮಯದಲ್ಲಿ ರೈತರು ಆಹಾರ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಿದ್ದರು. ರೈತರು ಆಹಾರ ಉತ್ಪಾದನೆಯತ್ತ ಕಾಳಜಿವಹಿಸಿದ್ದಾಗ, ಸರ್ಕಾರಗಳು ರೈತರ ಆದಾಯ ಹೆಚ್ಚಿಸುವಂತಹ ನೀತಿ ರೂಪಿಸಲಿಲ್ಲ. ಜನರೂ, ರೈತರ ಆದಾಯದ ಬಗ್ಗೆ ಯೋಚಿಸುವುದನ್ನು ಮರೆತರು. ಮೊದಲ ಬಾರಿಗೆ ಈ ಆಲೋಚನೆಯನ್ನು ಬದಲಾಯಿಸಿದ್ದೇವೆ’ ಎಂದು ರೈತರ ಕಲ್ಯಾಣಕ್ಕಾಗಿ ಕೇಂದ್ರ ಕೈಗೊಂಡ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ’ನಮ್ಮ ಸರ್ಕಾರದ ನೂತನ ಕೃಷಿ ಮಸೂದೆಗಳು ರೈತರನ್ನು ’ಅನ್ನದಾತ’ನ ಪಾತ್ರದಿಂದ ಉದ್ಯಮಶೀಲತೆಯತ್ತ ಕೊಂಡೊಯ್ದು, ಅವರ ಆದಾಯವನ್ನು ಹೆಚ್ಚಿಸಲಿವೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.</p>.<p>ವಿಡಿಯೊ ಕಾನ್ಫರೆನ್ಸ್ ಮೂಲಕಮಂಗಳವಾರ ಕೇಂದ್ರದ ಮಾಜಿ ಸಚಿವ ಬಾಲಾಸಾಹೇಬ್ ವಿಖೆ ಪಾಟೀಲ್ ಅವರ ಆತ್ಮಚರಿತ್ರೆ ಬಿಡುಗಡೆಗೊಳಿಸಿ, ಅಹಮದ್ನಗರ ಜಿಲ್ಲೆಯ ಪ್ರವರ ಗ್ರಾಮೀಣ ಶಿಕ್ಷಣ ಸೊಸೈಟಿಗೆ ಮರುನಾಮಕರಣ ಮಾಡಿದ ನಂತರ ಅವರು ಮಾತನಾಡಿದರು.</p>.<p>’ಗುಜರಾತ್, ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು, ಸಕ್ಕರೆ ಮತ್ತು ಗೋಧಿ ಉತ್ಪಾದನೆ ಉಲ್ಲೇಖಿಸಿದ ಮೋದಿ ಅವರು, ’ ಇಂಥ ಸ್ಥಳೀಯ ಉದ್ಯಮ ಮಾದರಿಗಳು ದೇಶವನ್ನು ಮುಂದೆ ಕೊಂಡೊಯ್ಯುತ್ತವೆ’ ಎಂದು ಹೇಳಿದರು.</p>.<p>’ಸ್ವಾತಂತ್ರ್ಯದ ನಂತರ ದೇಶದಲ್ಲಿ ಸಾಕಷ್ಟು ಆಹಾರ ಸಂಗ್ರಹವಿರಲಿಲ್ಲ. ಆಗ ಸರ್ಕಾರ ಆಹಾರ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಿತ್ತು. ಆ ಸಮಯದಲ್ಲಿ ರೈತರು ಆಹಾರ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಿದ್ದರು. ರೈತರು ಆಹಾರ ಉತ್ಪಾದನೆಯತ್ತ ಕಾಳಜಿವಹಿಸಿದ್ದಾಗ, ಸರ್ಕಾರಗಳು ರೈತರ ಆದಾಯ ಹೆಚ್ಚಿಸುವಂತಹ ನೀತಿ ರೂಪಿಸಲಿಲ್ಲ. ಜನರೂ, ರೈತರ ಆದಾಯದ ಬಗ್ಗೆ ಯೋಚಿಸುವುದನ್ನು ಮರೆತರು. ಮೊದಲ ಬಾರಿಗೆ ಈ ಆಲೋಚನೆಯನ್ನು ಬದಲಾಯಿಸಿದ್ದೇವೆ’ ಎಂದು ರೈತರ ಕಲ್ಯಾಣಕ್ಕಾಗಿ ಕೇಂದ್ರ ಕೈಗೊಂಡ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>