<p><strong>ಸತ್ನಾ:</strong> ಮಧ್ಯಪ್ರದೇಶ ಸತ್ನಾ ಜಿಲ್ಲೆಯ ರೈತನೊಬ್ಬನ ವಾರ್ಷಿಕ ಆದಾಯವು ಕೇವಲ ₹3 ಎಂದು ದಾಖಲಾಗಿರುವ ಪ್ರಮಾಣಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.</p><p>ಜಿಲ್ಲೆಯ ನಾಯಗಾಂವ ಗ್ರಾಮದ ನಿವಾಸಿ, 45 ವರ್ಷದ ರಾಮಸ್ವರೂಪ ಎಂಬವರ ಆದಾಯ ಪ್ರಮಾಣಪತ್ರ ಇದಾಗಿದೆ. ಪ್ರಮಾಣಪತ್ರಕ್ಕೆ ತಹಶೀಲ್ದಾರ್ ಸೌರಭ್ ದ್ವಿವೇದಿ ಸಹಿ ಹಾಕಿದ್ದಾರೆ.</p><p>ಈ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ರೈತ ರಾಮಸ್ವರೂಪ ಅವರನ್ನು ‘ದೇಶದ ಅತ್ಯಂತ ಬಡ ವ್ಯಕ್ತಿ’ ಎಂದು ಕರೆದಿದ್ದಾರೆ.</p>.<p>ಸುದ್ದಿ ವ್ಯಾಪಕವಾಗಿ ಹರಿದಾಡಿದ ಬಳಿಕ ಎಚ್ಚೆತ್ತ ಆಡಳಿತವು, ಸರಿಯಾದ ಮಾಹಿತಿಯೊಂದಿಗಿನ ಹೊಸ ಪತ್ರವನ್ನು ಜುಲೈ 25ರಂದು ರೈತನಿಗೆ ವಿತರಿಸಿದೆ. </p><p>‘ಬರವಣಿಗೆ ವೇಳೆ ಉಂಟಾದ ದೋಷದಿಂದ ₹30 ಸಾವಿರ ಎಂದು ಇರಬೇಕಿದ್ದ ಪತ್ರದಲ್ಲಿ ₹3 ಎಂದು ನಮೂದು ಮಾಡಲಾಗಿದೆ. ತಕ್ಷಣ ಅದನ್ನು ಸರಿಪಡಿಸಿ ಹೊಸ ಪತ್ರವನ್ನು ರೈತನಿಗೆ ವಿತರಿಸಲಾಗಿದೆ’ ಎಂದು ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.</p><p>ಏತನ್ಮಧ್ಯೆ, ಇದೇ ವಿಚಾರವನ್ನು ಇಟ್ಟುಕೊಂಡು ಸರ್ಕಾರವನ್ನು ಟೀಕಿಸಿರುವ ರಾಜ್ಯ ಕಾಂಗ್ರೆಸ್ ಘಟಕ, ‘ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಆಳ್ವಿಕೆಯಲ್ಲಿ ನಾವು ದೇಶದ ಅತ್ಯಂತ ಬಡ ವ್ಯಕ್ತಿಯನ್ನು ಕಂಡುಕೊಂಡೆವು’ ಎಂದು ಲೇವಡಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸತ್ನಾ:</strong> ಮಧ್ಯಪ್ರದೇಶ ಸತ್ನಾ ಜಿಲ್ಲೆಯ ರೈತನೊಬ್ಬನ ವಾರ್ಷಿಕ ಆದಾಯವು ಕೇವಲ ₹3 ಎಂದು ದಾಖಲಾಗಿರುವ ಪ್ರಮಾಣಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.</p><p>ಜಿಲ್ಲೆಯ ನಾಯಗಾಂವ ಗ್ರಾಮದ ನಿವಾಸಿ, 45 ವರ್ಷದ ರಾಮಸ್ವರೂಪ ಎಂಬವರ ಆದಾಯ ಪ್ರಮಾಣಪತ್ರ ಇದಾಗಿದೆ. ಪ್ರಮಾಣಪತ್ರಕ್ಕೆ ತಹಶೀಲ್ದಾರ್ ಸೌರಭ್ ದ್ವಿವೇದಿ ಸಹಿ ಹಾಕಿದ್ದಾರೆ.</p><p>ಈ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು, ರೈತ ರಾಮಸ್ವರೂಪ ಅವರನ್ನು ‘ದೇಶದ ಅತ್ಯಂತ ಬಡ ವ್ಯಕ್ತಿ’ ಎಂದು ಕರೆದಿದ್ದಾರೆ.</p>.<p>ಸುದ್ದಿ ವ್ಯಾಪಕವಾಗಿ ಹರಿದಾಡಿದ ಬಳಿಕ ಎಚ್ಚೆತ್ತ ಆಡಳಿತವು, ಸರಿಯಾದ ಮಾಹಿತಿಯೊಂದಿಗಿನ ಹೊಸ ಪತ್ರವನ್ನು ಜುಲೈ 25ರಂದು ರೈತನಿಗೆ ವಿತರಿಸಿದೆ. </p><p>‘ಬರವಣಿಗೆ ವೇಳೆ ಉಂಟಾದ ದೋಷದಿಂದ ₹30 ಸಾವಿರ ಎಂದು ಇರಬೇಕಿದ್ದ ಪತ್ರದಲ್ಲಿ ₹3 ಎಂದು ನಮೂದು ಮಾಡಲಾಗಿದೆ. ತಕ್ಷಣ ಅದನ್ನು ಸರಿಪಡಿಸಿ ಹೊಸ ಪತ್ರವನ್ನು ರೈತನಿಗೆ ವಿತರಿಸಲಾಗಿದೆ’ ಎಂದು ದ್ವಿವೇದಿ ಸ್ಪಷ್ಟಪಡಿಸಿದ್ದಾರೆ.</p><p>ಏತನ್ಮಧ್ಯೆ, ಇದೇ ವಿಚಾರವನ್ನು ಇಟ್ಟುಕೊಂಡು ಸರ್ಕಾರವನ್ನು ಟೀಕಿಸಿರುವ ರಾಜ್ಯ ಕಾಂಗ್ರೆಸ್ ಘಟಕ, ‘ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಆಳ್ವಿಕೆಯಲ್ಲಿ ನಾವು ದೇಶದ ಅತ್ಯಂತ ಬಡ ವ್ಯಕ್ತಿಯನ್ನು ಕಂಡುಕೊಂಡೆವು’ ಎಂದು ಲೇವಡಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>