ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ ಪೈಲಟ್‌ ಹೇಳಿಕೆ ‘ಹಾಸ್ಯ’ವಷ್ಟೇ: ಪವನ್‌ ಖೇರಾ

Published 10 ಮೇ 2023, 15:39 IST
Last Updated 10 ಮೇ 2023, 15:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರಿಗೆ ವಸುಂದರಾ ರಾಜೇ ಅವರೇ ನಾಯಕಿ ಹೊರತು ಸೋನಿಯಾ ಗಾಂಧಿ ಅಲ್ಲ’ ಎಂದು ಸಚಿನ್‌ ಪೈಲಟ್‌ ‘ಹಾಸ್ಯ’ ಮಾಡಿದ್ದಾರೆ. ಅದಕ್ಕೆ ‘ನಕ್ಕು’ ಬಿಡಬೇಕಷ್ಟೇ’ ಎಂದು ಪಕ್ಷದ ಮುಖಂಡ ಪವನ್‌ ಖೇರಾ ಅವರು ಬುಧವಾರ ಅಭಿಪ್ರಾಯಪಟ್ಟಿದ್ದಾರೆ.

‘ಹಾಸ್ಯಭರಿತವಾಗಿ ಅವರು ಏನೋ ಹೇಳಿರಬೇಕು’ ಎಂದು ಖೇರಾ ಹೇಳಿದರು. ಪೈಲಟ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ಇಲ್ಲವೆ ಎನ್ನುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರತೀ ರಾಜ್ಯಕ್ಕೂ ಪಕ್ಷದ ಉಸ್ತುವಾರಿ ಇರುತ್ತಾರೆ. ಅಂತೆಯೇ ರಾಜಸ್ಥಾನಕ್ಕೂ ಇದ್ದಾರೆ. ಅವರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷವು ತೆಗೆದುಕೊಂಡ ನಿರ್ಧಾರವನ್ನು ರಾಜಸ್ಥಾನದ ಪಕ್ಷದ ಉಸ್ತುವಾರಿ ಬಹಿರಂಗಪಡಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT