‘ಹಾಸ್ಯಭರಿತವಾಗಿ ಅವರು ಏನೋ ಹೇಳಿರಬೇಕು’ ಎಂದು ಖೇರಾ ಹೇಳಿದರು. ಪೈಲಟ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ಇಲ್ಲವೆ ಎನ್ನುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರತೀ ರಾಜ್ಯಕ್ಕೂ ಪಕ್ಷದ ಉಸ್ತುವಾರಿ ಇರುತ್ತಾರೆ. ಅಂತೆಯೇ ರಾಜಸ್ಥಾನಕ್ಕೂ ಇದ್ದಾರೆ. ಅವರು ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷವು ತೆಗೆದುಕೊಂಡ ನಿರ್ಧಾರವನ್ನು ರಾಜಸ್ಥಾನದ ಪಕ್ಷದ ಉಸ್ತುವಾರಿ ಬಹಿರಂಗಪಡಿಸಲಿದ್ದಾರೆ’ ಎಂದರು.