<p><strong>ನವದೆಹಲಿ:</strong> ‘ಜೀವನದಲ್ಲಿ ಸವಾಲುಗಳು ಎದುರಾಗುತ್ತಿರುತ್ತವೆ. ಆ ಸವಾಲುಗಳನ್ನು ಧೈರ್ಯವಾಗಿ ಎದುರಿಸಿದರೆ ನಿಜವಾದ ಗೆಲುವು ನಿಮ್ಮದಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು, ವಾಕ್ ಮತ್ತು ಶ್ರವಣದೋಷವಿರುವ ಯುವತಿಯೊಬ್ಬರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.</p>.<p>ವಾಕ್ ಮತ್ತು ಶ್ರವಣದೋಷವಿರುವ ಗುಜರಾತ್ನ ಸೂರತ್ ನಗರದ 23ರ ಹರೆಯದ ವಂದನಾ, ದೀಪಾವಳಿ ಹಬ್ಬದ ಶುಭಾಶಯಕ್ಕಾಗಿ ರಂಗೋಲಿ ಚಿತ್ರವನ್ನು ಬಿಡಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದ್ದರು. ಆ ಶುಭಾಶಯ ಪತ್ರಕ್ಕೆ ಉತ್ತರಿಸಿದ ಪತ್ರದಲ್ಲಿ ಪ್ರಧಾನಿ ಈ ಮಾತುಗಳನ್ನು ಹೇಳಿದ್ದಾರೆ.</p>.<p>‘ಆ ಪತ್ರಕ್ಕೆ ಪ್ರಧಾನಿಯವರಿಂದ ಪ್ರತಿಕ್ರಿಯೆ ಬಂದ ಮೇಲೆ ಆಕೆ ತುಂಬಾ ಖುಷಿಯಾಗಿದ್ದಾರೆ ಮತ್ತು ಉತ್ತೇಜಿತಗೊಂಡಿದ್ದಾರೆ’ ಎಂದು ವಂದನಾ ಅವರ ಸಹೋದರ ಕಿಶನ್ಭಾಯ್ ಪಟೇಲ್ ಹೇಳಿದ್ದಾರೆ.</p>.<p>‘ಸಹೋದರಿಗೆ ಹುಟ್ಟಿದಾಗಿನಿಂದ ಕಿವಿ ಕೇಳುವುದಿಲ್ಲ. ಮಾತು ಬರುವುದಿಲ್ಲ. ಈ ನ್ಯೂನತೆಗಳ ನಡುವೆ ಕೋಚಿಂಗ್ ಸಂಸ್ಥೆಯಲ್ಲಿ ಕಲೆ ಕಲಿಯುತ್ತಿದ್ದಾರೆ’ ಎಂದು ಅವರು ಹೇಳಿದರು.</p>.<p>‘ಪ್ರಧಾನಿಯವರಂತೆ, ಅನೇಕರು ನನ್ನ ತಂಗಿ ಬಿಡಿಸಿದ್ದ ರಂಗೋಲಿಯನ್ನು ಮೆಚ್ಚಿದ್ದರು’ ಎಂದು ಅವರು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಜೀವನದಲ್ಲಿ ಸವಾಲುಗಳು ಎದುರಾಗುತ್ತಿರುತ್ತವೆ. ಆ ಸವಾಲುಗಳನ್ನು ಧೈರ್ಯವಾಗಿ ಎದುರಿಸಿದರೆ ನಿಜವಾದ ಗೆಲುವು ನಿಮ್ಮದಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು, ವಾಕ್ ಮತ್ತು ಶ್ರವಣದೋಷವಿರುವ ಯುವತಿಯೊಬ್ಬರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.</p>.<p>ವಾಕ್ ಮತ್ತು ಶ್ರವಣದೋಷವಿರುವ ಗುಜರಾತ್ನ ಸೂರತ್ ನಗರದ 23ರ ಹರೆಯದ ವಂದನಾ, ದೀಪಾವಳಿ ಹಬ್ಬದ ಶುಭಾಶಯಕ್ಕಾಗಿ ರಂಗೋಲಿ ಚಿತ್ರವನ್ನು ಬಿಡಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದ್ದರು. ಆ ಶುಭಾಶಯ ಪತ್ರಕ್ಕೆ ಉತ್ತರಿಸಿದ ಪತ್ರದಲ್ಲಿ ಪ್ರಧಾನಿ ಈ ಮಾತುಗಳನ್ನು ಹೇಳಿದ್ದಾರೆ.</p>.<p>‘ಆ ಪತ್ರಕ್ಕೆ ಪ್ರಧಾನಿಯವರಿಂದ ಪ್ರತಿಕ್ರಿಯೆ ಬಂದ ಮೇಲೆ ಆಕೆ ತುಂಬಾ ಖುಷಿಯಾಗಿದ್ದಾರೆ ಮತ್ತು ಉತ್ತೇಜಿತಗೊಂಡಿದ್ದಾರೆ’ ಎಂದು ವಂದನಾ ಅವರ ಸಹೋದರ ಕಿಶನ್ಭಾಯ್ ಪಟೇಲ್ ಹೇಳಿದ್ದಾರೆ.</p>.<p>‘ಸಹೋದರಿಗೆ ಹುಟ್ಟಿದಾಗಿನಿಂದ ಕಿವಿ ಕೇಳುವುದಿಲ್ಲ. ಮಾತು ಬರುವುದಿಲ್ಲ. ಈ ನ್ಯೂನತೆಗಳ ನಡುವೆ ಕೋಚಿಂಗ್ ಸಂಸ್ಥೆಯಲ್ಲಿ ಕಲೆ ಕಲಿಯುತ್ತಿದ್ದಾರೆ’ ಎಂದು ಅವರು ಹೇಳಿದರು.</p>.<p>‘ಪ್ರಧಾನಿಯವರಂತೆ, ಅನೇಕರು ನನ್ನ ತಂಗಿ ಬಿಡಿಸಿದ್ದ ರಂಗೋಲಿಯನ್ನು ಮೆಚ್ಚಿದ್ದರು’ ಎಂದು ಅವರು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>