ಬೃಹನ್ ಮುಂಬೈ ಮಹಾನಗರಪಾಲಿಕೆ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಆದಿತ್ಯ ಠಾಕ್ರೆ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಎಂಸಿ ಆಡಳಿತದ ಅನುಮತಿ ಪಡೆಯದೆ ಆದಿತ್ಯ ಠಾಕ್ರೆ, ಉದ್ಧವ್ ಬಣದ ಶಾಸಕರಾದ ಸಚಿನ್ ಅಹಿರ್ ಮತ್ತು ಸುನಿಲ್ ಶಿಂದೆ, ಮಾಜಿ ಮೇಯರ್ಗಳಾದ ಕಿಶೋರಿ ಪೆಡ್ನೆಕರ್ ಮತ್ತು ಸ್ನೇಹಲ್ ಅಂಬೇಕರ್ ಹಾಗೂ ಇತರ 15–20 ಮಂದಿ ಮೇಲ್ಸೇತುವೆಯನ್ನು ಉದ್ಘಾಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.