<p><strong>ಹೈದರಾಬಾದ್</strong>: ನೀವು ನನ್ನನ್ನು ಗೌರವಿಸಿದರೆ ನಾನೂ ನಿಮ್ಮ ನಿಮ್ಮನ್ನು ಗೌರವಿಸುತ್ತೇನೆ. ನೀವು ಈ ರೀತಿ ಆಟವಾಡಿದರೆ, ನಾನಿದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.ಎಲ್ಲದಕ್ಕೂ ಅದರದ್ದೇ ಆದ ವ್ಯವಸ್ಥೆ ಇದೆ. ನೀವು ಸರ್ಕಾರಕ್ಕೆ ಆಜ್ಞಾಪಿಸುವಂತಿಲ್ಲ.ನಾನು ನಿಮಗೆ ಗೌರವ ಕೊಡಲು ಬಯಸಿದರೆ ನೀವು ವಿಧಾನಸೌಧಕ್ಕೆ ಬಂದು ನಿಮ್ಮ ಮನಬಂದಂತೆ ವರ್ತಿಸುತ್ತಿದ್ದೀರಿ.ಇನ್ನೊಂದು ಬಾರಿ ಈ ರೀತಿ ಮಾಡಿದರೆ ನಿಮ್ಮ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ"- ಆಂಧ್ರ ಪ್ರದೇಶದಲ್ಲಿ ಮುಷ್ಕರ ನಿರತ ಕ್ಷೌರಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದಾಗ ಅದಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ ರೀತಿ ಇದು.</p>.<p>ಅಮರಾವತಿಯಲ್ಲಿರುವ ವಿಧಾನಸೌಧದ ಮುಂದೆ ಪ್ರತಿಭಟನಾ ನಿರತರ ಮೇಲೆ ವಾಗ್ದಾಳಿ ನಡೆಸುತ್ತಿರುವ ನಾಯ್ಡು ಅವರ ವಿಡಿಯೊ ಇದೀಗ ವೈರಲ್ ಆಗಿದೆ.</p>.<p>ರಾಜ್ಯದಾದ್ಯಂತವಿರುವ ದೇವಾಲಯದಲ್ಲಿ ಕ್ಷೌರಿಕ ವೃತ್ತಿ ಮಾಡುವವರು ತಮಗೆ ನಿರ್ದಿಷ್ಟ ವೇತನ ನಿಗದಿ ಮಾಡಬೇಕೆಂದು ಒತ್ತಾಯಿಸಿ ಮುಷ್ಕರ ನಿರತರಾಗಿದ್ದಾರೆ.</p>.<p>ಉಪ ಮುಖ್ಯಮಂತ್ರಿ ಕೆಇ ಕೃಷ್ಣ ಮೂರ್ತಿ, ನಯೀ ಬ್ರಾಹ್ಮಿಣ್ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ನಾಯ್ಡು ಈ ರೀತಿ ಮುಷ್ಕರ ನಿರತರ ಮೇಲೆ ಹರಿಹಾಯ್ದಿದ್ದಾರೆ,<br />ದೇವಾಲಯದಲ್ಲಿ ಕೆಲಸ ಮಾಡುವ ಸಾವಿರದಷ್ಟು ನೌಕರರು ತಮಗೆ ₹13,000 ವೇತನ ನಿಗದಿ ಮಾಡಬೇಕೆಂದು ಮತ್ತು ಪ್ರೊವಿಡೆಂಟ್ ಫಂಡ್ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಮುಷ್ಕರ ಮಾಡುತ್ತಿದ್ದಾರೆ.</p>.<p>ಮಾಧ್ಯಮ ವರದಿಗಳ ಪ್ರಕಾರ ಕ್ಷೌರಿಕ ಸಮುದಾಯದವರು ವಿಧಾನಸೌಧಕ್ಕೆ ಬಂದಿದ್ದು, ಮುಖ್ಯಮಂತ್ರಿಯ ಬೆಂಗಾವಲು ಪಡೆ ಬರುತ್ತಿದ್ದಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.</p>.<p>ಇದನ್ನು ನೋಡಿಕಾರಿನಿಂದ ಇಳಿದ ನಾಯ್ಡು ಮುಷ್ಕರ ನಿರತರ ವಿರುದ್ಧ ಗರಂ ಆಗಿದ್ದಾರೆ. ಈ ವೇಳೆ ನಾಯ್ಡು ಅವರಿಗೆ ತಮ್ಮ ಉದ್ದೇಶವನ್ನು ಮನವರಿಕೆ ಮಾಡಲು ಕ್ಷೌರಿಕ ಸಂಘದ ಪ್ರತಿನಿಧಿಗಳು ಮುಂದಾಗಿದ್ದಾರೆ. ಆಗ ಮತ್ತಷ್ಚು ಕೋಪಗೊಂಡ ನಾಯ್ಡು, ನೀವೇನು ಹೇಳುತ್ತಿದ್ದೀರಾ? ನಿಮಗೆ ಮಾತನಾಡುವ ಅವಕಾಶವಿಲ್ಲ, ನೀವು ಯಾಕೆ ಈ ರೀತಿ ಗದ್ದಲವೆಬ್ಬಿಸುತ್ತಿದ್ದೀರಿ? ಇದೇನು ಮೀನು ಮಾರುಕಟ್ಟೆಯಾ? ಎಂದು ಗುಡುಗಿದ್ದಾರೆ.</p>.<p>ಪ್ರತಿಭಟನಾನಿರತರಲ್ಲಿ ಒಬ್ಬರು 'ಸರ್ ನೀವು ವಿಲೇಜ್ ರೆವೆನ್ಯೂ ಅಸಿಸ್ಟೆಂಟ್ ಮತ್ತು ಹೋಮ್ ಗಾರ್ಡ್ ಗಳಿಗೆ ವೇತನ ಹೆಚ್ಚಳ ಮಾಡಿದ್ದೀರಿ. ನಮಗೂ ವೇತನ ಹೆಚ್ಚಳ ಮಾಡಿ' ಎಂದು ಕೂಗಿದ್ದಾರೆ.<br />ಈ ಮಾತು ಕೇಳಿ ಕುಪಿತರಾದ ನಾಯ್ಡು, ಪ್ರತಿಭಟನಾಕಾರರತ್ತ ಬೆರಳು ತೋರಿಸಿ, ನೀವೇನು ಮಾಡಬೇಕೋ ಅದನ್ನು ಮಾಡಿ, ನಾನೇನೂ ಹೇಳಲಾರೆ. ನೀವು ಯಾರನ್ನು ಹೆದರಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.ನಾವು ಯಾರಿಗೂ ಬೆದರಿಕೆಯೊಡ್ಡುತ್ತಿಲ್ಲ ಎಂದು ಆ ವ್ಯಕ್ತಿ ಉತ್ತರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ನಾಯ್ಡು, ನೀವು ಯಾವ ಗ್ರಾಮದಿಂದ ಬಂದಿದ್ದೀರಿ? ನಾನು 9 ವರ್ಷಗಳ ಕಾಲ ಆಡಳಿತ ನಡೆಸಿದ್ದೀನಿ, ಒಬ್ಬನೇ ಒಬ್ಬ ವ್ಯಕ್ತಿ ಪ್ರತಿಭಟನೆ ಮಾಡಿಲ್ಲ. ನೀವು ಕೇಳುವುದರಲ್ಲಿ ನ್ಯಾಯ ಇದ್ದರೆ ನಿಮ್ಮನ್ನು ಹುಡುಕಿಕೊಂಡು ಬರುವೆ. ಆದರೆ ಯಾರಾದರೂ ನನಗೆ ಬೆದರಿಕೆಯೊಡ್ಡಿದರೆ ನಾನು ಅವರ ಬಾಲ ಕತ್ತರಿಸುವೆ ಎಂದಿದ್ದಾರೆ.</p>.<p>ನಾಯ್ಡು ಕೋಪದಿಂದ ಗುಡುಗುತ್ತಿದ್ದಂತೆ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ಗಳು ಪ್ರತಿಭಟನಾಕಾರರನ್ನು ಹಿಂದಕ್ಕೆ ತಳ್ಳಿ ಚದುರಿಸುವ ಯತ್ನ ಮಾಡಿದ್ದಾರೆ. ಆಗ ನಾಯ್ಡುಅವರನ್ನು ತಡೆಯಬೇಡಿ. ಅವರು ನಿರಾತಂಕವಾಗಿ ಮುಂದೆ ಬರಲಿ. ನಾನು ಅವರ ಜತೆ ಮಾತನಾಡುವೆ, ಅವರೇನು ಮಾಡುತ್ತಾರೆ ಎಂದು ನಾನೂ ನೋಡುತ್ತೇನೆ ಎಂದಿದ್ದಾರೆ.</p>.<p>ಆದಾಗ್ಯೂ, ಮುಖ್ಯಮಂತ್ರಿಯವರ ಈ ವರ್ತನೆ ಬಗ್ಗೆ ಜನರು ಅಸಮಧಾನ ವ್ಯಕ್ತಪಡಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ನೀವು ನನ್ನನ್ನು ಗೌರವಿಸಿದರೆ ನಾನೂ ನಿಮ್ಮ ನಿಮ್ಮನ್ನು ಗೌರವಿಸುತ್ತೇನೆ. ನೀವು ಈ ರೀತಿ ಆಟವಾಡಿದರೆ, ನಾನಿದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.ಎಲ್ಲದಕ್ಕೂ ಅದರದ್ದೇ ಆದ ವ್ಯವಸ್ಥೆ ಇದೆ. ನೀವು ಸರ್ಕಾರಕ್ಕೆ ಆಜ್ಞಾಪಿಸುವಂತಿಲ್ಲ.ನಾನು ನಿಮಗೆ ಗೌರವ ಕೊಡಲು ಬಯಸಿದರೆ ನೀವು ವಿಧಾನಸೌಧಕ್ಕೆ ಬಂದು ನಿಮ್ಮ ಮನಬಂದಂತೆ ವರ್ತಿಸುತ್ತಿದ್ದೀರಿ.ಇನ್ನೊಂದು ಬಾರಿ ಈ ರೀತಿ ಮಾಡಿದರೆ ನಿಮ್ಮ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ"- ಆಂಧ್ರ ಪ್ರದೇಶದಲ್ಲಿ ಮುಷ್ಕರ ನಿರತ ಕ್ಷೌರಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದಾಗ ಅದಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ ರೀತಿ ಇದು.</p>.<p>ಅಮರಾವತಿಯಲ್ಲಿರುವ ವಿಧಾನಸೌಧದ ಮುಂದೆ ಪ್ರತಿಭಟನಾ ನಿರತರ ಮೇಲೆ ವಾಗ್ದಾಳಿ ನಡೆಸುತ್ತಿರುವ ನಾಯ್ಡು ಅವರ ವಿಡಿಯೊ ಇದೀಗ ವೈರಲ್ ಆಗಿದೆ.</p>.<p>ರಾಜ್ಯದಾದ್ಯಂತವಿರುವ ದೇವಾಲಯದಲ್ಲಿ ಕ್ಷೌರಿಕ ವೃತ್ತಿ ಮಾಡುವವರು ತಮಗೆ ನಿರ್ದಿಷ್ಟ ವೇತನ ನಿಗದಿ ಮಾಡಬೇಕೆಂದು ಒತ್ತಾಯಿಸಿ ಮುಷ್ಕರ ನಿರತರಾಗಿದ್ದಾರೆ.</p>.<p>ಉಪ ಮುಖ್ಯಮಂತ್ರಿ ಕೆಇ ಕೃಷ್ಣ ಮೂರ್ತಿ, ನಯೀ ಬ್ರಾಹ್ಮಿಣ್ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ನಾಯ್ಡು ಈ ರೀತಿ ಮುಷ್ಕರ ನಿರತರ ಮೇಲೆ ಹರಿಹಾಯ್ದಿದ್ದಾರೆ,<br />ದೇವಾಲಯದಲ್ಲಿ ಕೆಲಸ ಮಾಡುವ ಸಾವಿರದಷ್ಟು ನೌಕರರು ತಮಗೆ ₹13,000 ವೇತನ ನಿಗದಿ ಮಾಡಬೇಕೆಂದು ಮತ್ತು ಪ್ರೊವಿಡೆಂಟ್ ಫಂಡ್ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಮುಷ್ಕರ ಮಾಡುತ್ತಿದ್ದಾರೆ.</p>.<p>ಮಾಧ್ಯಮ ವರದಿಗಳ ಪ್ರಕಾರ ಕ್ಷೌರಿಕ ಸಮುದಾಯದವರು ವಿಧಾನಸೌಧಕ್ಕೆ ಬಂದಿದ್ದು, ಮುಖ್ಯಮಂತ್ರಿಯ ಬೆಂಗಾವಲು ಪಡೆ ಬರುತ್ತಿದ್ದಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.</p>.<p>ಇದನ್ನು ನೋಡಿಕಾರಿನಿಂದ ಇಳಿದ ನಾಯ್ಡು ಮುಷ್ಕರ ನಿರತರ ವಿರುದ್ಧ ಗರಂ ಆಗಿದ್ದಾರೆ. ಈ ವೇಳೆ ನಾಯ್ಡು ಅವರಿಗೆ ತಮ್ಮ ಉದ್ದೇಶವನ್ನು ಮನವರಿಕೆ ಮಾಡಲು ಕ್ಷೌರಿಕ ಸಂಘದ ಪ್ರತಿನಿಧಿಗಳು ಮುಂದಾಗಿದ್ದಾರೆ. ಆಗ ಮತ್ತಷ್ಚು ಕೋಪಗೊಂಡ ನಾಯ್ಡು, ನೀವೇನು ಹೇಳುತ್ತಿದ್ದೀರಾ? ನಿಮಗೆ ಮಾತನಾಡುವ ಅವಕಾಶವಿಲ್ಲ, ನೀವು ಯಾಕೆ ಈ ರೀತಿ ಗದ್ದಲವೆಬ್ಬಿಸುತ್ತಿದ್ದೀರಿ? ಇದೇನು ಮೀನು ಮಾರುಕಟ್ಟೆಯಾ? ಎಂದು ಗುಡುಗಿದ್ದಾರೆ.</p>.<p>ಪ್ರತಿಭಟನಾನಿರತರಲ್ಲಿ ಒಬ್ಬರು 'ಸರ್ ನೀವು ವಿಲೇಜ್ ರೆವೆನ್ಯೂ ಅಸಿಸ್ಟೆಂಟ್ ಮತ್ತು ಹೋಮ್ ಗಾರ್ಡ್ ಗಳಿಗೆ ವೇತನ ಹೆಚ್ಚಳ ಮಾಡಿದ್ದೀರಿ. ನಮಗೂ ವೇತನ ಹೆಚ್ಚಳ ಮಾಡಿ' ಎಂದು ಕೂಗಿದ್ದಾರೆ.<br />ಈ ಮಾತು ಕೇಳಿ ಕುಪಿತರಾದ ನಾಯ್ಡು, ಪ್ರತಿಭಟನಾಕಾರರತ್ತ ಬೆರಳು ತೋರಿಸಿ, ನೀವೇನು ಮಾಡಬೇಕೋ ಅದನ್ನು ಮಾಡಿ, ನಾನೇನೂ ಹೇಳಲಾರೆ. ನೀವು ಯಾರನ್ನು ಹೆದರಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.ನಾವು ಯಾರಿಗೂ ಬೆದರಿಕೆಯೊಡ್ಡುತ್ತಿಲ್ಲ ಎಂದು ಆ ವ್ಯಕ್ತಿ ಉತ್ತರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ನಾಯ್ಡು, ನೀವು ಯಾವ ಗ್ರಾಮದಿಂದ ಬಂದಿದ್ದೀರಿ? ನಾನು 9 ವರ್ಷಗಳ ಕಾಲ ಆಡಳಿತ ನಡೆಸಿದ್ದೀನಿ, ಒಬ್ಬನೇ ಒಬ್ಬ ವ್ಯಕ್ತಿ ಪ್ರತಿಭಟನೆ ಮಾಡಿಲ್ಲ. ನೀವು ಕೇಳುವುದರಲ್ಲಿ ನ್ಯಾಯ ಇದ್ದರೆ ನಿಮ್ಮನ್ನು ಹುಡುಕಿಕೊಂಡು ಬರುವೆ. ಆದರೆ ಯಾರಾದರೂ ನನಗೆ ಬೆದರಿಕೆಯೊಡ್ಡಿದರೆ ನಾನು ಅವರ ಬಾಲ ಕತ್ತರಿಸುವೆ ಎಂದಿದ್ದಾರೆ.</p>.<p>ನಾಯ್ಡು ಕೋಪದಿಂದ ಗುಡುಗುತ್ತಿದ್ದಂತೆ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ಗಳು ಪ್ರತಿಭಟನಾಕಾರರನ್ನು ಹಿಂದಕ್ಕೆ ತಳ್ಳಿ ಚದುರಿಸುವ ಯತ್ನ ಮಾಡಿದ್ದಾರೆ. ಆಗ ನಾಯ್ಡುಅವರನ್ನು ತಡೆಯಬೇಡಿ. ಅವರು ನಿರಾತಂಕವಾಗಿ ಮುಂದೆ ಬರಲಿ. ನಾನು ಅವರ ಜತೆ ಮಾತನಾಡುವೆ, ಅವರೇನು ಮಾಡುತ್ತಾರೆ ಎಂದು ನಾನೂ ನೋಡುತ್ತೇನೆ ಎಂದಿದ್ದಾರೆ.</p>.<p>ಆದಾಗ್ಯೂ, ಮುಖ್ಯಮಂತ್ರಿಯವರ ಈ ವರ್ತನೆ ಬಗ್ಗೆ ಜನರು ಅಸಮಧಾನ ವ್ಯಕ್ತಪಡಿಸಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>