ಚಂಡೀಗಢ: ಕಾಂಗ್ರೆಸ್ನ ಮಾಜಿ ಶಾಸಕ ಗುರುಪ್ರೀತ್ ಸಿಂಗ್ ಜಿ.ಪಿ ಶನಿವಾರ ಆಮ್ ಆದ್ಮಿ ಪಕ್ಷವನ್ನು ಸೇರಿದರು.
ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಸಚಿವ ಗುರ್ಮಿತ್ ಸಿಂಗ್ ಮತ್ತಿತರರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
‘ಪಕ್ಷದಲ್ಲಿ ಶಿಸ್ತು ಇಲ್ಲದಿರುವುದೇ ರಾಜೀನಾಮೆ ನೀಡಲು ಮುಖ್ಯ ಕಾರಣ. ಮುಖ್ಯಮಂತ್ರಿ ಮಾನ್ ಅವರ ಕಾರ್ಯವೈಖರಿ ಕಂಡು ಮನಸೋತಿದ್ದೇನೆ. ಹೀಗಾಗಿ ಎಎಪಿ ಸೇರಿದ್ದೇನೆ’ ಎಂದು ಅವರು ಹೇಳಿದರು.
ಗುರುಪ್ರೀತ್ ಸಿಂಗ್, 2017ರಲ್ಲಿ ಬಸ್ಸಿ ಪಠನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 2022ರಲ್ಲಿಯೂ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.