ಮಾರುವೇಷದ ಕಾರ್ಯಾಚರಣೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮೇ 17ರಂದು ಈ ನಾಲ್ವರನ್ನು ಬಂಧಿಸಿತ್ತು. ಅದೇ ದಿನ ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಕೋಲ್ಕತ್ತ ಹೈಕೋರ್ಟ್ ಈ ಆದೇಶಕ್ಕೆ ತಡೆ ನೀಡಿ, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿತ್ತು. ಆದರೆ ಬಳಿಕ ಮೇ 28ರಂದು ಹೈಕೋರ್ಟ್ನ ಐವರು ಸದಸ್ಯರ ಪೀಠವು ನಾಲ್ವರಿಗೆ ಜಾಮೀನು ನೀಡಿತ್ತು.