‘ನಿನ್ನೆಯ ಬೆಳವಣಿಗೆಗಳನ್ನು ಕಂಡು ನಮಗೆ ದಿಗ್ಭ್ರಮೆಯಾಗಿದೆ. ಗಂಭೀರ್ ಅವರು ಎರಡು ದಶಕಗಳಿಂದಲೂ ನಮಗೆ ಗೊತ್ತಿದ್ದಾರೆ. ಅವರ ವ್ಯಕ್ತಿತ್ವ, ಮಹಿಳೆಯರ ಬಗ್ಗೆ ಅವರಿಗಿರುವ ಗೌರವವನ್ನು ನಾವು ದೃಢಪಡಿಸುತ್ತೇವೆ’ ಎಂದು ಲಕ್ಷ್ಮಣ್ ಹೇಳಿದ್ದಾರೆ. ‘ಮಹಿಳೆಯರ ಬಗ್ಗೆಅವರು ಎಂದೂ ಹಗುರವಾಗಿ ಮಾತನಾಡಿಲ್ಲ. ಅವರು ಗೆಲ್ಲುತ್ತಾರೋ, ಸೋಲುತ್ತಾರೋ ಎಂಬುದು ಬೇರೆ ವಿಷಯ. ಆದರೆ, ವ್ಯಕ್ತಿ ಅದನ್ನು ಮೀರಿದವರು’ ಎಂದರು.