ನವಲಖಾ ಅವರ ಜಾಮೀನು ಅರ್ಜಿ ಸಂಬಂಧ ಕಳೆದ ತಿಂಗಳು ವಿಶೇಷ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದು ಮಾಡಿತ್ತು. ಜೊತೆಗೆ ನವಲಖಾ ಅವರ ಅರ್ಜಿಯನ್ನು ಮತ್ತೊಮ್ಮೆ ಆಲಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತ್ತು. ‘ವಿಶೇಷ ನ್ಯಾಯಾಲಯ ನೀಡಿದ ಆದೇಶದಲ್ಲಿ ಸಾಕ್ಷ್ಯಗಳ ಕುರಿತ ವಿಶ್ಲೇಷಣೆ ಸಮರ್ಪಕವಾಗಿಲ್ಲ’ ಎಂದೂ ಹೈಕೋರ್ಟ್ ಹೇಳಿತ್ತು.