ಹೈದರಾಬಾದ್: ಉತ್ತರಾಖಂಡದ ಜೋಶಿಮಠದ ಭೂಕುಸಿತದ ಅಧ್ಯಯನ ನಡೆಸಲು ಹೈದರಾಬಾದ್ನ ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ನ (ಎನ್ಜಿಆರ್ಐ) ತಜ್ಞರ ತಂಡ ತೆರಳಲಿದೆ ಎಂದು ವಿಜ್ಞಾನಿ ಆನಂದ್ ಕೆ. ಪಾಂಡೆ ತಿಳಿಸಿದ್ದಾರೆ.
ಎನ್ಜಿಆರ್ಐನ ವಿಜ್ಞಾನಿ ಆನಂದ್ ಕೆ. ಪಾಂಡೆ ನೇತೃತ್ವದ 10 ಮಂದಿಯ ತಜ್ಞರ ತಂಡವು ಜನವರಿ 13ರಂದು ಉತ್ತರಾಖಂಡಕ್ಕೆ ತಲುಪಲಿದ್ದು, ಮರುದಿನವೇ ಕೆಲಸ ಪ್ರಾರಂಭಿಸುವ ನಿರೀಕ್ಷೆಯಿದೆ.
ತಜ್ಞರ ತಂಡವು ಎರಡು ವಾರಗಳ ಕಾಲ ವಿಪತ್ತಿಗೆ ನಿಖರ ಕಾರಣವನ್ನು ಅಧ್ಯಯನ ನಡೆಸಲಿದೆ.