<p><strong>ಪಣಜಿ:</strong> ಉತ್ತರ ಗೋವಾದ ಬರ್ಚ್ ಬೈ ರೋಮಿಯೊ ಲೇನ್ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಸಹೋದರರನ್ನು ವಶಕ್ಕೆ ಪಡೆದಿರುವ ಗೋವಾ ಪೊಲೀಸರು ವಿಚಾರಣೆ ನಡೆಸಿದರು.</p><p>ಬುಧವಾರ ಬೆಳಿಗ್ಗೆ ಮಾಪುಸಾ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವಿಚಾರಣೆಗಾಗಿ ಅಂಜನಾ ಠಾಣೆಗೆ ಕರೆತಂದರು. </p>.ಗೋವಾ ಅಗ್ನಿ ಅವಘಡ: ಬರ್ಚ್ ಬೈ ನೈಟ್ಕ್ಲಬ್ ಮಾಲೀಕರ ಜಾಮೀನು ಅರ್ಜಿ ವಜಾ.ಗೋವಾ ನೈಟ್ಕ್ಲಬ್ ಅಗ್ನಿ ದುರಂತ: ಸಿವಿಲ್ ಅರ್ಜಿ ಪಿಐಎಲ್ ಆಗಿ ಪರಿವರ್ತನೆ.<p>ಡಿಸೆಂಬರ್ 6ರಂದು ನೈಟ್ಕ್ಲಬ್ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 25 ಮಂದಿ ಮೃತಪಟ್ಟಿದ್ದರು. ಘಟನೆ ಬೆನ್ನಲ್ಲೇ ಇಬ್ಬರು ಸಹೋದರರು ಥಾಯ್ಲೆಂಡ್ಗೆ ಪರಾರಿಯಾಗಿದ್ದರು. ಭಾರತದ ಮನವಿಯ ಮೇರೆಗೆ ಥಾಯ್ಲೆಂಡ್ ಪೊಲೀಸರು ಡಿ. 11ರಂದು ಫುಕೆಟ್ನಲ್ಲಿ ಆರೋಪಿಗಳನ್ನು ಬಂಧಿಸಿದ್ದರು.</p><p>ಥಾಯ್ಲೆಂಡ್ನಿಂದ ಭಾರತಕ್ಕೆ ಹಸ್ತಾಂತರಿಸಲಾದ ಲೂಥ್ರಾ ಸಹೋದರನ್ನು ಗೋವಾ ಪೊಲೀಸರು ಮಂಗಳವಾರ ದೆಹಲಿಯಲ್ಲಿ ಬಂಧಿಸಿ ಗೋವಾಕ್ಕೆ ಕರೆತಂದಿದ್ದರು. </p><p>‘ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲು ಆರೋಪಿಗಳನ್ನು ಮಾಪುಸಾ ಪಟ್ಟಣದ ಕೋರ್ಟ್ಗೆ ಹಾಜರುಪಡಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ. ಕೊಲೆ ಎಂದು ಪರಿಗಣಿಸಲಾಗದ ಮಾನವ ಹತ್ಯೆ ಸೇರಿದಂತೆ ವಿವಿಧ ಆರೋಪಗಳಡಿ ಅಂಜನಾ ಠಾಣೆಯಲ್ಲಿ ಲೂಥ್ರಾ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ. </p>.ಗೋವಾ ಅಗ್ನಿ ದುರಂತ: ಆರೋಪಿಗಳ ಬಂಧನಕ್ಕೆ ಬ್ಲ್ಯೂಕಾರ್ನರ್ ನೋಟಿಸ್.ಗೋವಾ ನೈಟ್ಕ್ಲಬ್ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ:</strong> ಉತ್ತರ ಗೋವಾದ ಬರ್ಚ್ ಬೈ ರೋಮಿಯೊ ಲೇನ್ ನೈಟ್ ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂಥ್ರಾ ಸಹೋದರರನ್ನು ವಶಕ್ಕೆ ಪಡೆದಿರುವ ಗೋವಾ ಪೊಲೀಸರು ವಿಚಾರಣೆ ನಡೆಸಿದರು.</p><p>ಬುಧವಾರ ಬೆಳಿಗ್ಗೆ ಮಾಪುಸಾ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವಿಚಾರಣೆಗಾಗಿ ಅಂಜನಾ ಠಾಣೆಗೆ ಕರೆತಂದರು. </p>.ಗೋವಾ ಅಗ್ನಿ ಅವಘಡ: ಬರ್ಚ್ ಬೈ ನೈಟ್ಕ್ಲಬ್ ಮಾಲೀಕರ ಜಾಮೀನು ಅರ್ಜಿ ವಜಾ.ಗೋವಾ ನೈಟ್ಕ್ಲಬ್ ಅಗ್ನಿ ದುರಂತ: ಸಿವಿಲ್ ಅರ್ಜಿ ಪಿಐಎಲ್ ಆಗಿ ಪರಿವರ್ತನೆ.<p>ಡಿಸೆಂಬರ್ 6ರಂದು ನೈಟ್ಕ್ಲಬ್ನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 25 ಮಂದಿ ಮೃತಪಟ್ಟಿದ್ದರು. ಘಟನೆ ಬೆನ್ನಲ್ಲೇ ಇಬ್ಬರು ಸಹೋದರರು ಥಾಯ್ಲೆಂಡ್ಗೆ ಪರಾರಿಯಾಗಿದ್ದರು. ಭಾರತದ ಮನವಿಯ ಮೇರೆಗೆ ಥಾಯ್ಲೆಂಡ್ ಪೊಲೀಸರು ಡಿ. 11ರಂದು ಫುಕೆಟ್ನಲ್ಲಿ ಆರೋಪಿಗಳನ್ನು ಬಂಧಿಸಿದ್ದರು.</p><p>ಥಾಯ್ಲೆಂಡ್ನಿಂದ ಭಾರತಕ್ಕೆ ಹಸ್ತಾಂತರಿಸಲಾದ ಲೂಥ್ರಾ ಸಹೋದರನ್ನು ಗೋವಾ ಪೊಲೀಸರು ಮಂಗಳವಾರ ದೆಹಲಿಯಲ್ಲಿ ಬಂಧಿಸಿ ಗೋವಾಕ್ಕೆ ಕರೆತಂದಿದ್ದರು. </p><p>‘ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲು ಆರೋಪಿಗಳನ್ನು ಮಾಪುಸಾ ಪಟ್ಟಣದ ಕೋರ್ಟ್ಗೆ ಹಾಜರುಪಡಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ. ಕೊಲೆ ಎಂದು ಪರಿಗಣಿಸಲಾಗದ ಮಾನವ ಹತ್ಯೆ ಸೇರಿದಂತೆ ವಿವಿಧ ಆರೋಪಗಳಡಿ ಅಂಜನಾ ಠಾಣೆಯಲ್ಲಿ ಲೂಥ್ರಾ ಸಹೋದರರ ವಿರುದ್ಧ ಪ್ರಕರಣ ದಾಖಲಾಗಿದೆ. </p>.ಗೋವಾ ಅಗ್ನಿ ದುರಂತ: ಆರೋಪಿಗಳ ಬಂಧನಕ್ಕೆ ಬ್ಲ್ಯೂಕಾರ್ನರ್ ನೋಟಿಸ್.ಗೋವಾ ನೈಟ್ಕ್ಲಬ್ ದುರಂತ: ನೋವು ವ್ಯಕ್ತಪಡಿಸಿದ ಲೂತ್ರಾ; ನೆರವಿನ ಭರವಸೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>