ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೂಪ್ ಜೈರಾಮ್ ಭಂಭಾನಿ ಅವರು, ‘ಏಪ್ರಿಲ್ 18ರಂದು ವಿಚಾರಣಾ ನ್ಯಾಯಾಲಯವು ಛಡ್ಡಾ ಅವರನ್ನು ಸರ್ಕಾರಿ ನಿವಾಸದಿಂದ ತೆರವುಗೊಳಿಸದಂತೆ ರಾಜ್ಯಸಭಾ ಸಚಿವಾಲಯಕ್ಕೆ ನಿರ್ದೇಶನ ನೀಡಿ ಮಧ್ಯಂತರ ರಕ್ಷಣೆ ನೀಡಿತ್ತು. ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ಇತ್ಯರ್ಥಪಡಿಸುವವರೆಗೆ ಛಡ್ಡಾ ಅವರು ಆ ಬಂಗಲೆಯಲ್ಲಿ ಇರಬಹುದು’ ಎಂದು ಹೇಳಿದ್ದರು.