<p><strong>ಹೈದರಾಬಾದ್</strong>: ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯ ಗ್ರಾನೈಟ್ ಕ್ವಾರಿಯಲ್ಲಿ ಭಾರಿ ಗಾತ್ರದ ಕಲ್ಲು ಕಾರ್ಮಿಕರ ಮೇಲೆ ಉರುಳಿಬಿದ್ದು ಒಡಿಶಾ ಮೂಲದ ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ.</p><p>‘ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಬಲ್ಲಿಕುರವ ಸಮೀಪದ ಸತ್ಯಕೃಷ್ಣ ಕ್ವಾರಿಯ ಒಂದು ಪಾರ್ಶ್ವ ನೀರು ಜಿನುಗಿದ ಕಾರಣ ಕುಸಿದು ಬಿದ್ದಿತ್ತು. ಈ ವೇಳೆ ಕೆಲಸ ಮಾಡುತ್ತಿದ್ದ 16 ಮಂದಿ ಮೇಲೆ ಬಂಡೆಗಲ್ಲು ಬಿದ್ದಿದ್ದವು. ಗಂಭೀರ ಗಾಯಗೊಂಡವರನ್ನು ನರಸರಾವ್ಪೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಯೋಗಿ, ಭಾಗವತ್, ರವಿಶಂಕರ್ ಹೆಸರು ಹೇಳುವಂತೆ ಚಿತ್ರಹಿಂಸೆ: ರಮೇಶ್ ಉಪಾಧ್ಯಾಯ.ರೈತರಿಗೆ ದ್ರೋಹ ಬಗೆದ ಆಂಧ್ರ ಸಿಎಂ ನಾಯ್ಡು; ಜಗನ್ ಮೋಹನ್ ರೆಡ್ಡಿ ಕಿಡಿ. <p>ಅವಶೇಷಗಳ ಅಡಿಯಿಂದ ಮೃತದೇಹ ಮೇಲಕ್ಕೆತ್ತಿ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಬಾಪಟ್ಲ ಜಿಲ್ಲಾಧಿಕಾರಿ ವೆಂಕಟ ಮುರಳಿ, ಎಸ್ಪಿ ತುಶಿರ್ ಡುಡಿ ತಿಳಿಸಿದ್ದಾರೆ. </p><p>ಘಟನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿ, ತನಿಖೆಗೆ ಆದೇಶಿಸಿದ್ದಾರೆ. ಕ್ವಾರಿಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. </p><p>'ತಮ್ಮ ಕುಟುಂಬಗಳಿಗಾಗಿ ಶ್ರಮಿಸುತ್ತಿದ್ದ ವಲಸೆ ಕಾರ್ಮಿಕರು ಈ ರೀತಿ ಮೃತಪಟ್ಟಿರುವುದು ನಿಜಕ್ಕೂ ಹೃದಯ ವಿದ್ರಾವಕ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ನೆರವು ಒದಗಿಸಬೇಕು ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು' ವೈಎಸ್ಆರ್ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಆಗ್ರಹಿಸಿದ್ದಾರೆ.</p>.ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: 307 ರಸ್ತೆಗಳು ಬಂದ್, ‘ಆರೆಂಜ್ ಅಲರ್ಟ್’ ಘೋಷಣೆ.ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ.ನಾನಾಗಿದ್ದರೆ ಆಕಾಶ್ ದೀಪ್ಗೆ ಗುದ್ದುತ್ತಿದ್ದೆ: ಪಾಂಟಿಂಗ್ ಹೀಗೆ ಹೇಳಿದ್ದೇಕೆ?.ಸೇನಾಧಿಕಾರಿಯಿಂದ ದಾಳಿ: ಸ್ಪೈಸ್ಜೆಟ್ ಸಿಬ್ಬಂದಿಗೆ ದವಡೆ, ಬೆನ್ನುಮೂಳೆ ಮುರಿತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯ ಗ್ರಾನೈಟ್ ಕ್ವಾರಿಯಲ್ಲಿ ಭಾರಿ ಗಾತ್ರದ ಕಲ್ಲು ಕಾರ್ಮಿಕರ ಮೇಲೆ ಉರುಳಿಬಿದ್ದು ಒಡಿಶಾ ಮೂಲದ ಆರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಎಂಟು ಮಂದಿಗೆ ಗಂಭೀರ ಗಾಯಗಳಾಗಿವೆ.</p><p>‘ಭಾನುವಾರ ಬೆಳಗ್ಗೆ 10.30ರ ಸುಮಾರಿಗೆ ಬಲ್ಲಿಕುರವ ಸಮೀಪದ ಸತ್ಯಕೃಷ್ಣ ಕ್ವಾರಿಯ ಒಂದು ಪಾರ್ಶ್ವ ನೀರು ಜಿನುಗಿದ ಕಾರಣ ಕುಸಿದು ಬಿದ್ದಿತ್ತು. ಈ ವೇಳೆ ಕೆಲಸ ಮಾಡುತ್ತಿದ್ದ 16 ಮಂದಿ ಮೇಲೆ ಬಂಡೆಗಲ್ಲು ಬಿದ್ದಿದ್ದವು. ಗಂಭೀರ ಗಾಯಗೊಂಡವರನ್ನು ನರಸರಾವ್ಪೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಯೋಗಿ, ಭಾಗವತ್, ರವಿಶಂಕರ್ ಹೆಸರು ಹೇಳುವಂತೆ ಚಿತ್ರಹಿಂಸೆ: ರಮೇಶ್ ಉಪಾಧ್ಯಾಯ.ರೈತರಿಗೆ ದ್ರೋಹ ಬಗೆದ ಆಂಧ್ರ ಸಿಎಂ ನಾಯ್ಡು; ಜಗನ್ ಮೋಹನ್ ರೆಡ್ಡಿ ಕಿಡಿ. <p>ಅವಶೇಷಗಳ ಅಡಿಯಿಂದ ಮೃತದೇಹ ಮೇಲಕ್ಕೆತ್ತಿ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಬಾಪಟ್ಲ ಜಿಲ್ಲಾಧಿಕಾರಿ ವೆಂಕಟ ಮುರಳಿ, ಎಸ್ಪಿ ತುಶಿರ್ ಡುಡಿ ತಿಳಿಸಿದ್ದಾರೆ. </p><p>ಘಟನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿ, ತನಿಖೆಗೆ ಆದೇಶಿಸಿದ್ದಾರೆ. ಕ್ವಾರಿಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. </p><p>'ತಮ್ಮ ಕುಟುಂಬಗಳಿಗಾಗಿ ಶ್ರಮಿಸುತ್ತಿದ್ದ ವಲಸೆ ಕಾರ್ಮಿಕರು ಈ ರೀತಿ ಮೃತಪಟ್ಟಿರುವುದು ನಿಜಕ್ಕೂ ಹೃದಯ ವಿದ್ರಾವಕ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ನೆರವು ಒದಗಿಸಬೇಕು ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು' ವೈಎಸ್ಆರ್ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಆಗ್ರಹಿಸಿದ್ದಾರೆ.</p>.ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: 307 ರಸ್ತೆಗಳು ಬಂದ್, ‘ಆರೆಂಜ್ ಅಲರ್ಟ್’ ಘೋಷಣೆ.ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ.ನಾನಾಗಿದ್ದರೆ ಆಕಾಶ್ ದೀಪ್ಗೆ ಗುದ್ದುತ್ತಿದ್ದೆ: ಪಾಂಟಿಂಗ್ ಹೀಗೆ ಹೇಳಿದ್ದೇಕೆ?.ಸೇನಾಧಿಕಾರಿಯಿಂದ ದಾಳಿ: ಸ್ಪೈಸ್ಜೆಟ್ ಸಿಬ್ಬಂದಿಗೆ ದವಡೆ, ಬೆನ್ನುಮೂಳೆ ಮುರಿತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>