<p><strong>ಮಧುರೈ:</strong> ಸೆಪ್ಟೆಂಬರ್ 22ರಿಂದ ಜಾರಿಗೆ ಬರುವ ಪರಿಷ್ಕೃತ ಜಿಎಸ್ಟಿ ದರದಿಂದಾಗಿ ಜನರ ಬಳಿಯಲ್ಲಿ ₹ 2 ಲಕ್ಷ ಕೋಟಿ ಉಳಿಯುತ್ತದೆ, ಇದು ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.ತುಮಕೂರು| ಜಿಎಸ್ಟಿ ಪರಿಷ್ಕರಣೆಯಿಂದ ಜನರಿಗೆ ನೆರವು: ವಿ.ಸೋಮಣ್ಣ.<p>ಶುಕ್ರವಾರ ಇಲ್ಲಿ ನಡೆದ ತಮಿಳುನಾಡು ಆಹಾರ ಧಾನ್ಯ ವ್ಯಾಪಾರಿಗಳ ಸಂಘದ 80ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದ್ದಾರೆ.</p><p>‘ಪ್ರಸ್ತಾವಿತ ಜಿಎಸ್ಟಿ ಸುಧಾರಣೆಗಳೊಂದಿಗೆ, ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗುತ್ತದೆ. ಹಣಕಾಸು ಸಚಿವಾಲಯವು ಸಾರ್ವಜನಿಕರಿಂದ ₹ 2 ಲಕ್ಷ ಕೋಟಿನ್ನು ತೆರಿಗೆಯಾಗಿ ಸ್ವೀಕರಿಸುವುದಿಲ್ಲ. ಆದರೆ ಅದು ದೇಶಿಯ ಬೇಡಿಕೆ ಹೆಚ್ಚಾಗಿ ಮತ್ತೆ ಆರ್ಥಿಕತೆಗೆ ಮರಳುತ್ತದೆ’ ಎಂದು ಹೇಳಿದ್ದಾರೆ.</p>.ಜಿಎಸ್ಟಿ ಪರಿಷ್ಕರಣೆಯಿಂದಾಗಿ ಎಫ್ಎಂಸಿಜಿ ಉತ್ಪನ್ನಗಳ ಬೆಲೆ ಇಳಿಕೆ.<p>‘ಉದಾಹರಣೆಗೆ ನೀವು ಸಾಬೂನನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದರೆ, ತಯಾರಕರು ಉತ್ಪಾದನೆಯನ್ನು ಹೆಚ್ಚಿಸುತ್ತಾರೆ. ಉತ್ಪಾದನೆಯನ್ನು ಹೆಚ್ಚಿಸಲು, ಅವರು ಹೆಚ್ಚು ಜನರನ್ನು ನೇಮಿಸಿಕೊಳ್ಳುತ್ತಾರೆ. ಜನರು ಹೆಚ್ಚಾದಾಗ ಅವರು ಆದಾಯಕ್ಕೆ ತೆರಿಗೆ ಪಾವತಿಸುತ್ತಾರೆ. ಪರೋಕ್ಷ ತೆರಿಗೆಗಳ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತದೆ. ಈ ಚಕ್ರವು ನಿರಂತರವಾಗಿ ನಡೆಯುತ್ತಿರುತ್ತದೆ. ಇದು ಆರ್ಥಿಕತೆಗೆ ಒಳ್ಳೆಯದು’ ಎಂದು ಅವರು ಹೇಳಿದ್ದಾರೆ.</p><p>ಸರಳವಾಗಿ ಹೇಳುವುದಾದರೆ, ಸಾರ್ವಜನಿಕರು ಖರ್ಚು ಹೆಚ್ಚು ಮಾಡಿದಷ್ಟು, ಹೆಚ್ಚಿನ ಬೇಡಿಕೆ ಇರುತ್ತದೆ. ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಉತ್ಪಾದನೆ ಇದ್ದಾಗ, ಹೆಚ್ಚಿನ ಉದ್ಯೋಗಗಳು ಇರುತ್ತವೆ, ಹೆಚ್ಚಿನ ಉದ್ಯೋಗಗಳು ಇದ್ದಾಗ, ತೆರಿಗೆ ಸಂಗ್ರಹ ಹೆಚ್ಚಳವಾಗುತ್ತವೆ ಎಂದು ಹೇಳಿದ್ದಾರೆ.</p>.ಜಿಎಸ್ಟಿ ಇಳಿಕೆಯ ಮಾಹಿತಿ ಗ್ರಾಹಕರಿಗೆ ತಿಳಿಸಿ: ಕೇಂದ್ರ ಸೂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಧುರೈ:</strong> ಸೆಪ್ಟೆಂಬರ್ 22ರಿಂದ ಜಾರಿಗೆ ಬರುವ ಪರಿಷ್ಕೃತ ಜಿಎಸ್ಟಿ ದರದಿಂದಾಗಿ ಜನರ ಬಳಿಯಲ್ಲಿ ₹ 2 ಲಕ್ಷ ಕೋಟಿ ಉಳಿಯುತ್ತದೆ, ಇದು ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.ತುಮಕೂರು| ಜಿಎಸ್ಟಿ ಪರಿಷ್ಕರಣೆಯಿಂದ ಜನರಿಗೆ ನೆರವು: ವಿ.ಸೋಮಣ್ಣ.<p>ಶುಕ್ರವಾರ ಇಲ್ಲಿ ನಡೆದ ತಮಿಳುನಾಡು ಆಹಾರ ಧಾನ್ಯ ವ್ಯಾಪಾರಿಗಳ ಸಂಘದ 80ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದ್ದಾರೆ.</p><p>‘ಪ್ರಸ್ತಾವಿತ ಜಿಎಸ್ಟಿ ಸುಧಾರಣೆಗಳೊಂದಿಗೆ, ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗುತ್ತದೆ. ಹಣಕಾಸು ಸಚಿವಾಲಯವು ಸಾರ್ವಜನಿಕರಿಂದ ₹ 2 ಲಕ್ಷ ಕೋಟಿನ್ನು ತೆರಿಗೆಯಾಗಿ ಸ್ವೀಕರಿಸುವುದಿಲ್ಲ. ಆದರೆ ಅದು ದೇಶಿಯ ಬೇಡಿಕೆ ಹೆಚ್ಚಾಗಿ ಮತ್ತೆ ಆರ್ಥಿಕತೆಗೆ ಮರಳುತ್ತದೆ’ ಎಂದು ಹೇಳಿದ್ದಾರೆ.</p>.ಜಿಎಸ್ಟಿ ಪರಿಷ್ಕರಣೆಯಿಂದಾಗಿ ಎಫ್ಎಂಸಿಜಿ ಉತ್ಪನ್ನಗಳ ಬೆಲೆ ಇಳಿಕೆ.<p>‘ಉದಾಹರಣೆಗೆ ನೀವು ಸಾಬೂನನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದರೆ, ತಯಾರಕರು ಉತ್ಪಾದನೆಯನ್ನು ಹೆಚ್ಚಿಸುತ್ತಾರೆ. ಉತ್ಪಾದನೆಯನ್ನು ಹೆಚ್ಚಿಸಲು, ಅವರು ಹೆಚ್ಚು ಜನರನ್ನು ನೇಮಿಸಿಕೊಳ್ಳುತ್ತಾರೆ. ಜನರು ಹೆಚ್ಚಾದಾಗ ಅವರು ಆದಾಯಕ್ಕೆ ತೆರಿಗೆ ಪಾವತಿಸುತ್ತಾರೆ. ಪರೋಕ್ಷ ತೆರಿಗೆಗಳ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತದೆ. ಈ ಚಕ್ರವು ನಿರಂತರವಾಗಿ ನಡೆಯುತ್ತಿರುತ್ತದೆ. ಇದು ಆರ್ಥಿಕತೆಗೆ ಒಳ್ಳೆಯದು’ ಎಂದು ಅವರು ಹೇಳಿದ್ದಾರೆ.</p><p>ಸರಳವಾಗಿ ಹೇಳುವುದಾದರೆ, ಸಾರ್ವಜನಿಕರು ಖರ್ಚು ಹೆಚ್ಚು ಮಾಡಿದಷ್ಟು, ಹೆಚ್ಚಿನ ಬೇಡಿಕೆ ಇರುತ್ತದೆ. ಬೇಡಿಕೆಯನ್ನು ಪೂರೈಸಲು ಹೆಚ್ಚಿನ ಉತ್ಪಾದನೆ ಇದ್ದಾಗ, ಹೆಚ್ಚಿನ ಉದ್ಯೋಗಗಳು ಇರುತ್ತವೆ, ಹೆಚ್ಚಿನ ಉದ್ಯೋಗಗಳು ಇದ್ದಾಗ, ತೆರಿಗೆ ಸಂಗ್ರಹ ಹೆಚ್ಚಳವಾಗುತ್ತವೆ ಎಂದು ಹೇಳಿದ್ದಾರೆ.</p>.ಜಿಎಸ್ಟಿ ಇಳಿಕೆಯ ಮಾಹಿತಿ ಗ್ರಾಹಕರಿಗೆ ತಿಳಿಸಿ: ಕೇಂದ್ರ ಸೂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>