‘ಅಮ್ರೇಲಿ, ಜುನಾಗಡ, ಗಿರ್ ಸೋಮನಾಥ್ ಮತ್ತು ದಹೋದ್ ಜಿಲ್ಲೆಗಳಲ್ಲೇ ಚಿರತೆ ಹಾವಳಿ ಅಧಿಕವಾಗಿದೆ. ಒಟ್ಟು ಮೃತರಲ್ಲಿ 55 ಮಂದಿ ಈ ನಾಲ್ಕು ಜಿಲ್ಲೆಗಳಲ್ಲೇ ಸಂಭವಿಸಿದೆ. 2016ರ ಗಣತಿಯಂತೆ, ರಾಜ್ಯದಲ್ಲಿ 1,395 ಚಿರತೆಗಳಿವೆ. ಚಿರತೆಗಳ ಸಂಖ್ಯೆಯನ್ನು ನಿಯಂತ್ರಿಸಲು ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಅನುಮತಿ ನೀಡಬೇಕು ಎಂದು ರಾಜ್ಯವು ಕೇಂದ್ರವನ್ನು ಕೋರಿದೆ, ಆದರೆ ಅದಕ್ಕೆ ಇನ್ನೂ ಒಪ್ಪಿಗೆ ದೊರೆತಿಲ್ಲ’ ಎಂದು ಸಚಿವರು ಹೇಳಿದ್ದರು.