<p><strong>ಶ್ರೀನಗರ:</strong> ನುಸುಳುಕೋರರು ಅನುಸರಿಸುತ್ತಿರುವ ‘ಗೋಪ್ಯ ಬೆದರಿಕೆ’ ಭೇದಿಸುವುದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ನುಸುಳುಕೋರರು ‘ಸಂರಕ್ಷಣೆ ಮತ್ತು ಬಲವರ್ಧನೆಯ’ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ಕಠುವಾ ಜಿಲ್ಲೆಯಲ್ಲಿ ನಡೆದ ದಾಳಿ, ಚಕಮಕಿ ಸಂದರ್ಭಗಳು ನಿದರ್ಶನವಾಗಿವೆ.</p>.<p>ಭಯೋತ್ಪಾದಕರ ಜೊತೆಗಿನ ಚಕಮಕಿಯನ್ನು ವಿಶ್ಲೇಷಿಸಿರುವ, ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಅಧಿಕಾರಿಗಳ ಪ್ರಕಾರ, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಆದರೆ, ಕೆಳಹಂತದಲ್ಲಿ ಗುಪ್ತದಳ ಮತ್ತು ಕಣ್ಗಾವಲು ವ್ಯವಸ್ಥೆಯಲ್ಲಿನ ಲೋಪ ಒಟ್ಟು ಕಾರ್ಯಾಚರಣೆಗೆ ಅಡ್ಡಿಯಾಗಿದೆ.</p>.<p>ತಾಂತ್ರಿಕ ಜಾಣ್ಮೆಯ ಮೇಲಿನ ಅವಲಂಬನೆಯು ಹೆಚ್ಚೇನೂ ಉಪಯೋಗಕ್ಕೆ ಬಾರದು. ಏಕೆಂದರೆ ಅಧಿಕಾರಿಗಳ ದಾರಿ ತಪ್ಪಿಸಲು ಉಗ್ರರು ಆನ್ಲೈನ್ ಬಳಕೆ ಮಾಡುತ್ತಾರೆ. ಹೀಗಾಗಿ ಜಮ್ಮು ಪ್ರದೇಶದಲ್ಲಿ ಉಗ್ರರನ್ನು ಸದೆಬಡಿಯಲು ಕಣ್ಗಾವಲು ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಅವರು ಹೇಳಿದರು.</p>.<p>ಶಾಂತವಾಗಿದ್ದ ಪ್ರದೇಶದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಹೆಚ್ಚಾಗಿದೆ. ಅದರಲ್ಲೂ ಪೂಂಚ್, ರಜೌರಿ ಮತ್ತಿತರ ಕಡೆಗಳಲ್ಲಿ ಐಎಎಫ್ ಬೆಂಗಾವಲು ವಾಹನ, ಯಾತ್ರಾರ್ಥಿಗಳ ಬಸ್ ಮೇಲಿನ ದಾಳಿ ಹೆಚ್ಚಾಗಿದೆ. ಕಠುವಾದಲ್ಲಿ ಯೋಧರ ಹತ್ಯೆಯು ಭಯೋತ್ಪಾದಕ ಬೆದರಿಕೆ ಹೆಚ್ಚಾಗಿದೆ ಎಂಬುದಕ್ಕೆ ಸಾಕ್ಷಿ.</p>.<p>‘ಸಂರಕ್ಷಣೆ ಮತ್ತು ಬಲವರ್ಧನೆ ತಂತ್ರ’ದ ಮೂಲಕ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರವನ್ನು ನುಸುಳುತ್ತಿದ್ದಾರೆ. ಮೊದಲು ಶಾಂತವಾಗಿದ್ದು, ಸ್ಥಳೀಯರೊಂದಿಗೆ ಬೆರೆಯುತ್ತಾರೆ. ಯಾವುದೇ ದಾಳಿ ಕೈಗೊಳ್ಳುವ ಮುನ್ನ ಮುಖ್ಯಸ್ಥರ ನಿರ್ದೇಶನಕ್ಕಾಗಿ ಕಾಯುತ್ತಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ನುಸುಳುಕೋರರು ಅನುಸರಿಸುತ್ತಿರುವ ‘ಗೋಪ್ಯ ಬೆದರಿಕೆ’ ಭೇದಿಸುವುದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ. ನುಸುಳುಕೋರರು ‘ಸಂರಕ್ಷಣೆ ಮತ್ತು ಬಲವರ್ಧನೆಯ’ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ಕಠುವಾ ಜಿಲ್ಲೆಯಲ್ಲಿ ನಡೆದ ದಾಳಿ, ಚಕಮಕಿ ಸಂದರ್ಭಗಳು ನಿದರ್ಶನವಾಗಿವೆ.</p>.<p>ಭಯೋತ್ಪಾದಕರ ಜೊತೆಗಿನ ಚಕಮಕಿಯನ್ನು ವಿಶ್ಲೇಷಿಸಿರುವ, ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಅಧಿಕಾರಿಗಳ ಪ್ರಕಾರ, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಆದರೆ, ಕೆಳಹಂತದಲ್ಲಿ ಗುಪ್ತದಳ ಮತ್ತು ಕಣ್ಗಾವಲು ವ್ಯವಸ್ಥೆಯಲ್ಲಿನ ಲೋಪ ಒಟ್ಟು ಕಾರ್ಯಾಚರಣೆಗೆ ಅಡ್ಡಿಯಾಗಿದೆ.</p>.<p>ತಾಂತ್ರಿಕ ಜಾಣ್ಮೆಯ ಮೇಲಿನ ಅವಲಂಬನೆಯು ಹೆಚ್ಚೇನೂ ಉಪಯೋಗಕ್ಕೆ ಬಾರದು. ಏಕೆಂದರೆ ಅಧಿಕಾರಿಗಳ ದಾರಿ ತಪ್ಪಿಸಲು ಉಗ್ರರು ಆನ್ಲೈನ್ ಬಳಕೆ ಮಾಡುತ್ತಾರೆ. ಹೀಗಾಗಿ ಜಮ್ಮು ಪ್ರದೇಶದಲ್ಲಿ ಉಗ್ರರನ್ನು ಸದೆಬಡಿಯಲು ಕಣ್ಗಾವಲು ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಅವರು ಹೇಳಿದರು.</p>.<p>ಶಾಂತವಾಗಿದ್ದ ಪ್ರದೇಶದಲ್ಲಿ ಇತ್ತೀಚೆಗೆ ಉಗ್ರರ ಉಪಟಳ ಹೆಚ್ಚಾಗಿದೆ. ಅದರಲ್ಲೂ ಪೂಂಚ್, ರಜೌರಿ ಮತ್ತಿತರ ಕಡೆಗಳಲ್ಲಿ ಐಎಎಫ್ ಬೆಂಗಾವಲು ವಾಹನ, ಯಾತ್ರಾರ್ಥಿಗಳ ಬಸ್ ಮೇಲಿನ ದಾಳಿ ಹೆಚ್ಚಾಗಿದೆ. ಕಠುವಾದಲ್ಲಿ ಯೋಧರ ಹತ್ಯೆಯು ಭಯೋತ್ಪಾದಕ ಬೆದರಿಕೆ ಹೆಚ್ಚಾಗಿದೆ ಎಂಬುದಕ್ಕೆ ಸಾಕ್ಷಿ.</p>.<p>‘ಸಂರಕ್ಷಣೆ ಮತ್ತು ಬಲವರ್ಧನೆ ತಂತ್ರ’ದ ಮೂಲಕ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರವನ್ನು ನುಸುಳುತ್ತಿದ್ದಾರೆ. ಮೊದಲು ಶಾಂತವಾಗಿದ್ದು, ಸ್ಥಳೀಯರೊಂದಿಗೆ ಬೆರೆಯುತ್ತಾರೆ. ಯಾವುದೇ ದಾಳಿ ಕೈಗೊಳ್ಳುವ ಮುನ್ನ ಮುಖ್ಯಸ್ಥರ ನಿರ್ದೇಶನಕ್ಕಾಗಿ ಕಾಯುತ್ತಾರೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>