<p><strong>ಶಿಮ್ಲಾ:</strong> ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ತೀವ್ರವಾಗಿ ಹಾನಿಗೊಳಗಾದ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹2 ಕೋಟಿ ಮತ್ತು ರಸ್ತೆ, ಇತರ ಮೂಲಸೌಕರ್ಯಗಳ ಪುನಃಸ್ಥಾಪನೆಗಾಗಿ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹50 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.</p><p>ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.</p><p>ರಾಜ್ಯದಲ್ಲಿರುವ 68 ವಿಧಾನಸಭಾ ಕ್ಷೇತ್ರಗಳಲ್ಲಿ, ಮಂಡಿ ಅತಿಹೆಚ್ಚು ಬಾಧಿತವಾಗಿದೆ. ಮಂಡಿಯಲ್ಲಿ ಮಳೆಯಿಂದ ಹೆಚ್ಚು ವಿಪತ್ತುಗಳು ಸಂಭವಿಸಿವೆ.</p><p>ಜೂನ್ 20 ರಂದು ಮಾನ್ಸೂನ್ ಆರಂಭವಾದಾಗಿನಿಂದ ಜುಲೈ 11 ರವರೆಗೆ ಹಿಮಾಚಲ ಪ್ರದೇಶವು ಒಟ್ಟು ₹751 ಕೋಟಿಯಷ್ಟು ನಷ್ಟವನ್ನು ಅನುಭವಿಸಿದೆ.</p><p>31 ದಿಢೀರ್ ಪ್ರವಾಹಗಳು, 22 ಮೇಘಸ್ಫೋಟಗಳು ಮತ್ತು 17 ಭೂಕುಸಿತಗಳನ್ನು ರಾಜ್ಯ ಈ ಬಾರಿ ಕಂಡಿದೆ. ರಾಜ್ಯದಲ್ಲಿ 90 ಕ್ಕೂ ಹೆಚ್ಚು ಜನರು ಮೃತಪಟ್ಟರೆ, ಅದರಲ್ಲಿ 56 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.</p>.ಹಿಮಾಚಲ: ಪ್ರವಾಹ ಪರಿಹಾರಕ್ಕೆ ನನ್ನ ಬಳಿ ದುಡ್ಡಿಲ್ಲ; ಕಂಗನಾ ಹೇಳಿಕೆಗೆ ಭಾರಿ ಟೀಕೆ.ಹಿಮಾಚಲ ಪ್ರದೇಶದಲ್ಲಿ ಭೀಕರ ಪ್ರವಾಹ, ಭೂಕುಸಿತ: 60 ಜನರ ಪ್ರಾಣ ಉಳಿಸಿದ ಸಾಕು ನಾಯಿ.ಹಿಮಾಚಲ ಪ್ರದೇಶ | ಮುಂದುವರಿದ ಭಾರಿ ಮಳೆ; 7 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ.Monsoon Ravages | ಹಿಮಾಚಲ ಪ್ರದೇಶ: ಎರಡು ವಾರದ ಮಳೆಗೆ 43 ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ:</strong> ಹಿಮಾಚಲ ಪ್ರದೇಶದಲ್ಲಿ ಮಳೆಯಿಂದ ತೀವ್ರವಾಗಿ ಹಾನಿಗೊಳಗಾದ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹2 ಕೋಟಿ ಮತ್ತು ರಸ್ತೆ, ಇತರ ಮೂಲಸೌಕರ್ಯಗಳ ಪುನಃಸ್ಥಾಪನೆಗಾಗಿ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹50 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.</p><p>ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.</p><p>ರಾಜ್ಯದಲ್ಲಿರುವ 68 ವಿಧಾನಸಭಾ ಕ್ಷೇತ್ರಗಳಲ್ಲಿ, ಮಂಡಿ ಅತಿಹೆಚ್ಚು ಬಾಧಿತವಾಗಿದೆ. ಮಂಡಿಯಲ್ಲಿ ಮಳೆಯಿಂದ ಹೆಚ್ಚು ವಿಪತ್ತುಗಳು ಸಂಭವಿಸಿವೆ.</p><p>ಜೂನ್ 20 ರಂದು ಮಾನ್ಸೂನ್ ಆರಂಭವಾದಾಗಿನಿಂದ ಜುಲೈ 11 ರವರೆಗೆ ಹಿಮಾಚಲ ಪ್ರದೇಶವು ಒಟ್ಟು ₹751 ಕೋಟಿಯಷ್ಟು ನಷ್ಟವನ್ನು ಅನುಭವಿಸಿದೆ.</p><p>31 ದಿಢೀರ್ ಪ್ರವಾಹಗಳು, 22 ಮೇಘಸ್ಫೋಟಗಳು ಮತ್ತು 17 ಭೂಕುಸಿತಗಳನ್ನು ರಾಜ್ಯ ಈ ಬಾರಿ ಕಂಡಿದೆ. ರಾಜ್ಯದಲ್ಲಿ 90 ಕ್ಕೂ ಹೆಚ್ಚು ಜನರು ಮೃತಪಟ್ಟರೆ, ಅದರಲ್ಲಿ 56 ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.</p>.ಹಿಮಾಚಲ: ಪ್ರವಾಹ ಪರಿಹಾರಕ್ಕೆ ನನ್ನ ಬಳಿ ದುಡ್ಡಿಲ್ಲ; ಕಂಗನಾ ಹೇಳಿಕೆಗೆ ಭಾರಿ ಟೀಕೆ.ಹಿಮಾಚಲ ಪ್ರದೇಶದಲ್ಲಿ ಭೀಕರ ಪ್ರವಾಹ, ಭೂಕುಸಿತ: 60 ಜನರ ಪ್ರಾಣ ಉಳಿಸಿದ ಸಾಕು ನಾಯಿ.ಹಿಮಾಚಲ ಪ್ರದೇಶ | ಮುಂದುವರಿದ ಭಾರಿ ಮಳೆ; 7 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ.Monsoon Ravages | ಹಿಮಾಚಲ ಪ್ರದೇಶ: ಎರಡು ವಾರದ ಮಳೆಗೆ 43 ಸಾವು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>