ಈ ಕುರಿತು ಮಾತನಾಡಿದ ಇರ್ಫಾನ್ ಖಾನ್, ‘ಶ್ರೀವಾಸ್ತವ್ ನಮ್ಮ ಜತೆ ಕಳೆದ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ನಮ್ಮ ಕುಟುಂಬದ ಸದಸ್ಯರಾಗಿಯೇ ಅವರು ಜತೆಗಿದ್ದರು. ಅಪರಕರ್ಮಕ್ಕೆ ನೆರೆಹೊರೆಯವರನ್ನು ಕರೆಯಲು ತೆರಳಿದ ಸಂದರ್ಭದಲ್ಲಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದರು. ಅಂದಾಜು 1 ಸಾವಿರ ಹಿಂದೂ, ಮುಸ್ಲಿಂ ಜನರು ಇದರಲ್ಲಿ ಭಾಗವಹಿಸಿದ್ದರು’ ಎಂದು ತಿಳಿಸಿದರು.