<p><strong>ಲಖನೌ:</strong> ಕಳೆದ ವರ್ಷ ಉತ್ತರ ಪ್ರದೇಶದ ಸಂಭಲ್ ನಗರದಲ್ಲಿ ನಡೆದ ಹಿಂಸಾಚಾರ ಘಟನೆಯ ಕುರಿತ ತನಿಖೆಗೆ ರಚನೆಯಾಗಿದ್ದ ನ್ಯಾಯಾಂಗ ಆಯೋಗವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ವರದಿಯನ್ನು ಗುರುವಾರ ಸಲ್ಲಿಸಿದೆ.</p>.<p>ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು.</p>.<p>ನಗರದ ಕೋಮು ಗಲಭೆಯ ಇತಿಹಾಸ, ಸ್ವಾತಂತ್ರ್ಯಾ ನಂತರ ಜನಸಂಖ್ಯಾ ಸ್ವರೂಪದಲ್ಲಾದ ಬದಲಾವಣೆ ಮತ್ತು ಮಸೀದಿ ಇದ್ದ ಸ್ಥಳದಲ್ಲಿ ಹಿಂದೂ ದೇಗುಲ ಇತ್ತು ಎಂಬುದಕ್ಕೆ ಲಭ್ಯವಿರುವ ಸಾಕ್ಷ್ಯಗಳ ಕುರಿತ ಮಾಹಿತಿಯು 400 ಪುಟಗಳ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.</p>.<p>1947ರಿಂದ ಈವರೆಗೆ ಸಂಭಲ್ ನಗರದಲ್ಲಿ ಹಿಂದೂಗಳ ಜನಸಂಖ್ಯೆ ಶೇ 45ರಿಂದ ಶೇ 15ಕ್ಕೆ ಕುಸಿದಿದೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆಯು ಶೇ 55ರಿಂದ ಶೇ 85ಕ್ಕೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ರಾಜಕೀಯ ಓಲೈಕೆ, ಯೋಜಿತ ಕೋಮು ಗಲಭೆಗಳು, ಭಯದ ವಾತಾವರಣದ ಸೃಷ್ಟಿಯೇ ಜನಸಂಖ್ಯಾ ಸ್ವರೂಪ ಮತ್ತು ಪದೇ ಪದೇ ಕೋಮು ಗಲಭೆಗಳು ನಡೆಯಲು ಕಾರಣ ಎಂದು ಸಮಿತಿಯು ವಿವರಿಸಿದೆ.</p>.<p><strong>ಸಮಿತಿ ಹೇಳಿದ್ದು...</strong> </p><p>*ಮಸೀದಿ ಸಮೀಕ್ಷೆ ಕುರಿತ ಮಾಹಿತಿ ಸೋರಿಕೆಯಾಗಿತ್ತು. ಹೀಗಾಗಿ ತಂಡವು ಸಮೀಕ್ಷೆಗೆ ತೆರಳಿದ್ದಾಗ ಜನದಟ್ಟಣೆ ಉಂಟಾಗಿತ್ತು </p><p>*ಸಂಭಲ್, ಹಲವು ಭಯೋತ್ಪಾದಕ ಸಂಘಟನೆಗಳ ತಾಣ ಆಗುತ್ತಿದೆ </p><p>*ಕೋಮು ಗಲಭೆಗೆ ವಿದೇಶಿ ಶಶ್ತ್ರಾಸ್ತ್ರಗಳು ಬಳಕೆಯಾಗುತ್ತಿವೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಕಳೆದ ವರ್ಷ ಉತ್ತರ ಪ್ರದೇಶದ ಸಂಭಲ್ ನಗರದಲ್ಲಿ ನಡೆದ ಹಿಂಸಾಚಾರ ಘಟನೆಯ ಕುರಿತ ತನಿಖೆಗೆ ರಚನೆಯಾಗಿದ್ದ ನ್ಯಾಯಾಂಗ ಆಯೋಗವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ವರದಿಯನ್ನು ಗುರುವಾರ ಸಲ್ಲಿಸಿದೆ.</p>.<p>ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು ಮತ್ತು ಹಲವರು ಗಾಯಗೊಂಡಿದ್ದರು.</p>.<p>ನಗರದ ಕೋಮು ಗಲಭೆಯ ಇತಿಹಾಸ, ಸ್ವಾತಂತ್ರ್ಯಾ ನಂತರ ಜನಸಂಖ್ಯಾ ಸ್ವರೂಪದಲ್ಲಾದ ಬದಲಾವಣೆ ಮತ್ತು ಮಸೀದಿ ಇದ್ದ ಸ್ಥಳದಲ್ಲಿ ಹಿಂದೂ ದೇಗುಲ ಇತ್ತು ಎಂಬುದಕ್ಕೆ ಲಭ್ಯವಿರುವ ಸಾಕ್ಷ್ಯಗಳ ಕುರಿತ ಮಾಹಿತಿಯು 400 ಪುಟಗಳ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.</p>.<p>1947ರಿಂದ ಈವರೆಗೆ ಸಂಭಲ್ ನಗರದಲ್ಲಿ ಹಿಂದೂಗಳ ಜನಸಂಖ್ಯೆ ಶೇ 45ರಿಂದ ಶೇ 15ಕ್ಕೆ ಕುಸಿದಿದೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆಯು ಶೇ 55ರಿಂದ ಶೇ 85ಕ್ಕೆ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ರಾಜಕೀಯ ಓಲೈಕೆ, ಯೋಜಿತ ಕೋಮು ಗಲಭೆಗಳು, ಭಯದ ವಾತಾವರಣದ ಸೃಷ್ಟಿಯೇ ಜನಸಂಖ್ಯಾ ಸ್ವರೂಪ ಮತ್ತು ಪದೇ ಪದೇ ಕೋಮು ಗಲಭೆಗಳು ನಡೆಯಲು ಕಾರಣ ಎಂದು ಸಮಿತಿಯು ವಿವರಿಸಿದೆ.</p>.<p><strong>ಸಮಿತಿ ಹೇಳಿದ್ದು...</strong> </p><p>*ಮಸೀದಿ ಸಮೀಕ್ಷೆ ಕುರಿತ ಮಾಹಿತಿ ಸೋರಿಕೆಯಾಗಿತ್ತು. ಹೀಗಾಗಿ ತಂಡವು ಸಮೀಕ್ಷೆಗೆ ತೆರಳಿದ್ದಾಗ ಜನದಟ್ಟಣೆ ಉಂಟಾಗಿತ್ತು </p><p>*ಸಂಭಲ್, ಹಲವು ಭಯೋತ್ಪಾದಕ ಸಂಘಟನೆಗಳ ತಾಣ ಆಗುತ್ತಿದೆ </p><p>*ಕೋಮು ಗಲಭೆಗೆ ವಿದೇಶಿ ಶಶ್ತ್ರಾಸ್ತ್ರಗಳು ಬಳಕೆಯಾಗುತ್ತಿವೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>