ಹಿಂದು ಮತ್ತು ಹಿಂದುತ್ವವಾದಿಗಳ ನಡುವೆ ವ್ಯತ್ಯಾಸವಿರುವುದಾಗಿ ರಾಹುಲ್ ಗಾಂಧೀಜಿ ಇತ್ತೀಚೆಗೆ ಪ್ರತಿಪಾದಿಸಲಾರಂಭಿಸಿದ್ದಾರೆ. ಗಾಂಧಿ ಹಿಂದು ಎಂದೂ, ಗೋಡ್ಸೆ ಹಿಂದುತ್ವವಾದಿ ಎಂದು ರಾಹುಲ್ ವಿಶ್ಲೇಷಿಸಿದ್ದಾರೆ. ಸದ್ಯ ದೇಶದ ಆಡಳಿತ ಹಿಂದುತ್ವವಾದಿಗಳ ಕೈಲಿದ್ದು, ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಹಿಂದುಗಳನ್ನು ಅಧಿಕಾರದಲ್ಲಿ ಕೂರಿಸಬೇಕು ಎಂದು ಅವರು ಇತ್ತೀಚೆಗೆ ಆಗ್ರಹಿಸಿದ್ದರು.