<p><strong>ಚಾಯ್ಬಾಸಾ(ಜಾರ್ಖಂಡ್):</strong> ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚಾಯ್ಬಾಸಾ ರಕ್ತ ನಿಧಿಯ ಮೂವರು ದಾನಿಗಳು ಎಚ್ಐವಿ ಪಾಸಿಟಿವ್ ಎಂಬುದು ಪತ್ತೆಯಾಗಿದೆ ಎಂದು ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಗುರುವಾರ ತಿಳಿಸಿದ್ದಾರೆ.</p><p>2023 ಮತ್ತು 2025ರ ನಡುವೆ ಚಾಯ್ಬಾಸಾ ರಕ್ತ ನಿಧಿಯಲ್ಲಿ ಒಟ್ಟಾರೆಯಾಗಿ 259 ಜನರು ರಕ್ತದಾನ ಮಾಡಿದ್ದಾರೆ. ಜಿಲ್ಲಾಡಳಿತವು ಪ್ರತಿಯೊಬ್ಬ ದಾನಿಯನ್ನೂ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.</p><p>ಕಳೆದ ವಾರ ಥಲಸ್ಸೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಐವರು ಬಾಲಕರಿಗೆ ಎಚ್ಐವಿ ಪಾಸಿಟಿವ್ ಆಗಿರುವುದು ಪತ್ತೆಯಾದ ನಂತರ ರಕ್ತ ನಿಧಿಯನ್ನು ತನಿಖೆಗೊಳಪಡಿಸಿದ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ.</p><p> ರಕ್ತ ನಿಧಿಯು ತಮ್ಮ ಕುಟುಂಬ ಸದಸ್ಯನಿಗೆ ಎಚ್ಐವಿ ಸೋಂಕಿತ ರಕ್ತ ವರ್ಗಾವಣೆ ಮಾಡಿದೆ ಎಂದು ಥಲಸ್ಸೆಮಿಯಾ ರೋಗಿಗಳಲ್ಲಿ ಒಬ್ಬರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.</p><p>‘ರಕ್ತದಾನ ಮಾಡಿದ 259 ದಾನಿಗಳಲ್ಲಿ 44 ದಾನಿಗಳನ್ನು ಸಂಪರ್ಕಿಸಿದ್ದೇವೆ. ಪರೀಕ್ಷೆಯ ನಂತರ ಅವರಲ್ಲಿ ಮೂವರು ಎಚ್ಐವಿ ಪಾಸಿಟಿವ್ ಎಂದು ಕಂಡುಬಂದಿದೆ. ಇದಲ್ಲದೆ, ಒಬ್ಬ ದಾನಿಯ ಕುಟುಂಬದ ಐವರು ಸದಸ್ಯರು ಸಹ ಎಚ್ಐವಿ ಪೀಡಿತರಾಗಿದ್ದಾರೆ’ಎಂದು ಸಚಿವರು ತಿಳಿಸಿದ್ದಾರೆ.</p><p>ತನಿಖೆ ಪೂರ್ಣಗೊಂಡ ಬಳಿಕವಷ್ಟೇ ನಾವು ಈ ಬಗ್ಗೆ ಏನನ್ನಾದರೂ ಹೇಳಬಹುದು. ಇದಕ್ಕೆ ಕನಿಷ್ಠ ನಾಲ್ಕು ವಾರ ಬೇಕಾಗಬಹುದು ಎಂದಿದ್ದಾರೆ.</p><p>ಎಚ್ಐವಿ ಪೀಡಿತ ಥಲಸ್ಸೇಮಿಯಾ ಸಮಸ್ಯೆಯಿಂದ ಬಳಲುತ್ತಿರುವ ಬಾಲಕರು ಈ ರಕ್ತನಿಧಿಯಿಂದ ರಕ್ತ ಪಡೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದಿದ್ದಾರೆ.</p><p>ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದಾದ್ಯಂತ ರಕ್ತನಿಧಿಗಳ ಪರಿಶೀಲನೆಗೆ ಆದೇಶಿಸಿದೆ ಎಂದಿದ್ಧಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಯ್ಬಾಸಾ(ಜಾರ್ಖಂಡ್):</strong> ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಚಾಯ್ಬಾಸಾ ರಕ್ತ ನಿಧಿಯ ಮೂವರು ದಾನಿಗಳು ಎಚ್ಐವಿ ಪಾಸಿಟಿವ್ ಎಂಬುದು ಪತ್ತೆಯಾಗಿದೆ ಎಂದು ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಗುರುವಾರ ತಿಳಿಸಿದ್ದಾರೆ.</p><p>2023 ಮತ್ತು 2025ರ ನಡುವೆ ಚಾಯ್ಬಾಸಾ ರಕ್ತ ನಿಧಿಯಲ್ಲಿ ಒಟ್ಟಾರೆಯಾಗಿ 259 ಜನರು ರಕ್ತದಾನ ಮಾಡಿದ್ದಾರೆ. ಜಿಲ್ಲಾಡಳಿತವು ಪ್ರತಿಯೊಬ್ಬ ದಾನಿಯನ್ನೂ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.</p><p>ಕಳೆದ ವಾರ ಥಲಸ್ಸೆಮಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಐವರು ಬಾಲಕರಿಗೆ ಎಚ್ಐವಿ ಪಾಸಿಟಿವ್ ಆಗಿರುವುದು ಪತ್ತೆಯಾದ ನಂತರ ರಕ್ತ ನಿಧಿಯನ್ನು ತನಿಖೆಗೊಳಪಡಿಸಿದ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ.</p><p> ರಕ್ತ ನಿಧಿಯು ತಮ್ಮ ಕುಟುಂಬ ಸದಸ್ಯನಿಗೆ ಎಚ್ಐವಿ ಸೋಂಕಿತ ರಕ್ತ ವರ್ಗಾವಣೆ ಮಾಡಿದೆ ಎಂದು ಥಲಸ್ಸೆಮಿಯಾ ರೋಗಿಗಳಲ್ಲಿ ಒಬ್ಬರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.</p><p>‘ರಕ್ತದಾನ ಮಾಡಿದ 259 ದಾನಿಗಳಲ್ಲಿ 44 ದಾನಿಗಳನ್ನು ಸಂಪರ್ಕಿಸಿದ್ದೇವೆ. ಪರೀಕ್ಷೆಯ ನಂತರ ಅವರಲ್ಲಿ ಮೂವರು ಎಚ್ಐವಿ ಪಾಸಿಟಿವ್ ಎಂದು ಕಂಡುಬಂದಿದೆ. ಇದಲ್ಲದೆ, ಒಬ್ಬ ದಾನಿಯ ಕುಟುಂಬದ ಐವರು ಸದಸ್ಯರು ಸಹ ಎಚ್ಐವಿ ಪೀಡಿತರಾಗಿದ್ದಾರೆ’ಎಂದು ಸಚಿವರು ತಿಳಿಸಿದ್ದಾರೆ.</p><p>ತನಿಖೆ ಪೂರ್ಣಗೊಂಡ ಬಳಿಕವಷ್ಟೇ ನಾವು ಈ ಬಗ್ಗೆ ಏನನ್ನಾದರೂ ಹೇಳಬಹುದು. ಇದಕ್ಕೆ ಕನಿಷ್ಠ ನಾಲ್ಕು ವಾರ ಬೇಕಾಗಬಹುದು ಎಂದಿದ್ದಾರೆ.</p><p>ಎಚ್ಐವಿ ಪೀಡಿತ ಥಲಸ್ಸೇಮಿಯಾ ಸಮಸ್ಯೆಯಿಂದ ಬಳಲುತ್ತಿರುವ ಬಾಲಕರು ಈ ರಕ್ತನಿಧಿಯಿಂದ ರಕ್ತ ಪಡೆದಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದಿದ್ದಾರೆ.</p><p>ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದಾದ್ಯಂತ ರಕ್ತನಿಧಿಗಳ ಪರಿಶೀಲನೆಗೆ ಆದೇಶಿಸಿದೆ ಎಂದಿದ್ಧಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>