ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಪ್ರೋತ್ಸಾಹಿಸುತ್ತಿದ್ದ ರಿಯಾಜ್ನ್ನು 2016ರಲ್ಲಿ ಬಂಧಿಸಲಾಗಿತ್ತು.ಈ ಪ್ರಕರಣದಲ್ಲಿ ಜಾಮೀನು ಪಡೆದ ಬಂಧಮುಕ್ತನಾಗಿದ್ದ ಈತ ತಲೆಮರೆಸಿಕೊಂಡಿದ್ದ ಎಂದು ಮೂಲಗಳು ಹೇಳಿವೆ.
ರಿಯಾಜ್ ಎಕೆ ರೈಫಲ್ ಹಿಡಿದುಕೊಂಡು ನಿಂತಿರುವ ಹಲವಾರು ಚಿತ್ರಗಳು ಇತ್ತೀಚೆಗೆ ವೈರಲ್ ಆಗಿತ್ತು ಎಂದು ಕಿಶ್ತ್ವಾರ್ ನ ಹಿರಿಯ ಪೊಲೀಸ್ ಅಧಿಕಾರಿ ರಾಜೇಂದ್ರ ಗುಪ್ತಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.ಶ್ರೀನಗರದ ಪರಿಂಪೊರಾದಲ್ಲಿನ ಭಯೋತ್ಪಾದನಾ ಕೃತ್ಯದಲ್ಲಿಯೂ ರಿಯಾಜ್ ಭಾಗಿಯಾಗಿದ್ದನು ಎಂದಿದ್ದಾರೆ ಗುಪ್ತಾ.