<p>ನವದೆಹಲಿ(ಪಿಟಿಐ): ಹಣಕಾಸು ವಿಚಾರಕ್ಕೆ ಸಂಬಂಧಿಸಿ ಪತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿ ಮೇಲೆ ಅಧಿಕಾರ ಚಲಾಯಿಸಿದರೆ ಅಥವಾ ಪ್ರಾಬಲ್ಯ ಪ್ರದರ್ಶಿಸಿದರೆ ಅದನ್ನು ಕ್ರೌರ್ಯ ಎಂಬುದಾಗಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>‘ಒಡಕು ಮೂಡಿರುವ ವೈವಾಹಿಕ ಸಂಬಂಧಗಳಲ್ಲಿ, ಕ್ರಿಮಿನಲ್ ಮೊಕದ್ದಮೆ ಎಂಬುದು ಪ್ರತೀಕಾರ ತೀರಿಸಿಕೊಳ್ಳಲು ಹಾಗೂ ವೈಯಕ್ತಿಕ ದ್ವೇಷ ಸಾಧಿಸಲು ಅಸ್ತ್ರವಾಗಬಾರದು’ ಎಂದೂ ಹೇಳಿದೆ.</p>.<p>ಪರಿತ್ಯಕ್ತ ಪತಿ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.</p>.<p>‘ಪತಿ ತನಗೆ ಚಿತ್ರಹಿಂಸೆ ಹಾಗೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ’ ಎಂದು ಆರೋಪಿಸಿ ಮಹಿಳೆ ಪ್ರಕರಣ ದಾಖಲಿಸಿದ್ದರು.</p>.<p>ಈ ಕುರಿತ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಆರ್.ಮಹದೇವನ್ ಅವರು ಇದ್ದ ನ್ಯಾಯಪೀಠವು ಪತಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದತಿಗೆ ನಿರಾಕರಿಸಿ ತೆಲಂಗಾಣ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಕೂಡ ರದ್ದುಪಡಿಸಿದೆ.</p>.<p>‘ಪ್ರತಿವಾದಿ ಆರೋಪಿಸಿರುವಂತೆ, ಮೇಲ್ಮನವಿದಾರ(ಪತಿ) ಹಣಕಾಸು ವಿಚಾರದಲ್ಲಿ ತೋರಿದ್ದಾನೆ ಎನ್ನಲಾದ ಪ್ರಾಬಲ್ಯವನ್ನು ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಅದರಲ್ಲೂ, ವಾಸ್ತವಿಕವಾದ ಮಾನಸಿಕ ಅಥವಾ ದೈಹಿಕ ಹಿಂಸೆ ಇರದಿದ್ದಾಗ ಇಂತಹ ನಡೆಯನ್ನು ಕ್ರೌರ್ಯ ಎನ್ನಲಾಗದು’ ಎಂದು ನ್ಯಾಯಪೀಠ ಹೇಳಿದೆ.</p>.<p>‘ಈ ಪ್ರಕರಣವು ಭಾರತೀಯ ಸಮಾಜದ ಪ್ರತಿಬಿಂಬವಾಗಿದೆ. ಮನೆಯಲ್ಲಿ ಮಹಿಳೆಯ ಹಣಕಾಸು ಅಗತ್ಯಗಳನ್ನು ಪುರುಷರೇ ನೋಡಿಕೊಳ್ಳುವುದು ನಮ್ಮ ಸಮಾಜದಲ್ಲಿ ಸಾಮಾನ್ಯ. ಆದರೆ, ಇಂತಹ ವಿಚಾರಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದನ್ನು ಪ್ರತೀಕಾರದ ಅಸ್ತ್ರವನ್ನಾಗಿ ಮಾಡಿಕೊಳ್ಳಬಾರದು’ ಎಂದು ಅಭಿಪ್ರಾಯಪಟ್ಟಿದೆ.</p>.<div><blockquote>ಪರಿತ್ಯಕ್ತ ಪತಿಯು ತಾನು ಕಳುಹಿಸಿದ ಹಣವನ್ನು ಖರ್ಚು ಮಾಡಿದ್ದರ ಕುರಿತು ಪರಿತ್ಯಕ್ತ ಪತ್ನಿಯಿಂದ ವಿವರ ಕೇಳುವುದು ಕ್ರೌರ್ಯ ಎನಿಸುವುದಿಲ್ಲ. </blockquote><span class="attribution">- ನ್ಯಾಯಮೂರ್ತಿ ನಾಗರತ್ನ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ(ಪಿಟಿಐ): ಹಣಕಾಸು ವಿಚಾರಕ್ಕೆ ಸಂಬಂಧಿಸಿ ಪತಿಯೊಬ್ಬ ತನ್ನ ಪರಿತ್ಯಕ್ತ ಪತ್ನಿ ಮೇಲೆ ಅಧಿಕಾರ ಚಲಾಯಿಸಿದರೆ ಅಥವಾ ಪ್ರಾಬಲ್ಯ ಪ್ರದರ್ಶಿಸಿದರೆ ಅದನ್ನು ಕ್ರೌರ್ಯ ಎಂಬುದಾಗಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>‘ಒಡಕು ಮೂಡಿರುವ ವೈವಾಹಿಕ ಸಂಬಂಧಗಳಲ್ಲಿ, ಕ್ರಿಮಿನಲ್ ಮೊಕದ್ದಮೆ ಎಂಬುದು ಪ್ರತೀಕಾರ ತೀರಿಸಿಕೊಳ್ಳಲು ಹಾಗೂ ವೈಯಕ್ತಿಕ ದ್ವೇಷ ಸಾಧಿಸಲು ಅಸ್ತ್ರವಾಗಬಾರದು’ ಎಂದೂ ಹೇಳಿದೆ.</p>.<p>ಪರಿತ್ಯಕ್ತ ಪತಿ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.</p>.<p>‘ಪತಿ ತನಗೆ ಚಿತ್ರಹಿಂಸೆ ಹಾಗೂ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ’ ಎಂದು ಆರೋಪಿಸಿ ಮಹಿಳೆ ಪ್ರಕರಣ ದಾಖಲಿಸಿದ್ದರು.</p>.<p>ಈ ಕುರಿತ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಹಾಗೂ ಆರ್.ಮಹದೇವನ್ ಅವರು ಇದ್ದ ನ್ಯಾಯಪೀಠವು ಪತಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದತಿಗೆ ನಿರಾಕರಿಸಿ ತೆಲಂಗಾಣ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಕೂಡ ರದ್ದುಪಡಿಸಿದೆ.</p>.<p>‘ಪ್ರತಿವಾದಿ ಆರೋಪಿಸಿರುವಂತೆ, ಮೇಲ್ಮನವಿದಾರ(ಪತಿ) ಹಣಕಾಸು ವಿಚಾರದಲ್ಲಿ ತೋರಿದ್ದಾನೆ ಎನ್ನಲಾದ ಪ್ರಾಬಲ್ಯವನ್ನು ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಅದರಲ್ಲೂ, ವಾಸ್ತವಿಕವಾದ ಮಾನಸಿಕ ಅಥವಾ ದೈಹಿಕ ಹಿಂಸೆ ಇರದಿದ್ದಾಗ ಇಂತಹ ನಡೆಯನ್ನು ಕ್ರೌರ್ಯ ಎನ್ನಲಾಗದು’ ಎಂದು ನ್ಯಾಯಪೀಠ ಹೇಳಿದೆ.</p>.<p>‘ಈ ಪ್ರಕರಣವು ಭಾರತೀಯ ಸಮಾಜದ ಪ್ರತಿಬಿಂಬವಾಗಿದೆ. ಮನೆಯಲ್ಲಿ ಮಹಿಳೆಯ ಹಣಕಾಸು ಅಗತ್ಯಗಳನ್ನು ಪುರುಷರೇ ನೋಡಿಕೊಳ್ಳುವುದು ನಮ್ಮ ಸಮಾಜದಲ್ಲಿ ಸಾಮಾನ್ಯ. ಆದರೆ, ಇಂತಹ ವಿಚಾರಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವುದನ್ನು ಪ್ರತೀಕಾರದ ಅಸ್ತ್ರವನ್ನಾಗಿ ಮಾಡಿಕೊಳ್ಳಬಾರದು’ ಎಂದು ಅಭಿಪ್ರಾಯಪಟ್ಟಿದೆ.</p>.<div><blockquote>ಪರಿತ್ಯಕ್ತ ಪತಿಯು ತಾನು ಕಳುಹಿಸಿದ ಹಣವನ್ನು ಖರ್ಚು ಮಾಡಿದ್ದರ ಕುರಿತು ಪರಿತ್ಯಕ್ತ ಪತ್ನಿಯಿಂದ ವಿವರ ಕೇಳುವುದು ಕ್ರೌರ್ಯ ಎನಿಸುವುದಿಲ್ಲ. </blockquote><span class="attribution">- ನ್ಯಾಯಮೂರ್ತಿ ನಾಗರತ್ನ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>