<p><strong>ಹೈದರಾಬಾದ್:</strong> ಇಡೀ ದೇಶದ ಗಮನ ಸೆಳೆದಿದ್ದ ಶ್ರದ್ಧಾ ವಾಲಕರ್ ಹಾಗೂ ನಿಕ್ಕಿ ಯಾದವ್ ಭೀಕರ ಕೊಲೆಯನ್ನು ಹೋಲುವ ಪ್ರಕರಣ ಹೈದರಾಬಾದ್ನಲ್ಲಿ ನಡೆದಿದೆ. </p><p>ವ್ಯಕ್ತಿಯೊಬ್ಬ ತನ್ನ ಸಹಜೀವನ ಸಂಗಾತಿಯನ್ನು ಕೊಲೆ ಮಾಡಿ, ದೇಹದ ಭಾಗಗಳನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇರಿಸಿದ್ದಾರೆ.</p><p>ಮೇ 17 ರಂದು ಹೈದರಾಬಾದ್ನ ಮುಸಿ ನದಿ ಬಳಿ ರುಂಡವೊಂದು ಪತ್ತೆಯಾಗಿದ್ದು, ತನಿಖೆ ಮಾಡಿದಾಗ ಪೊಲೀಸರಿಗೆ ವಿಷಯ ಗೊತ್ತಾಗಿದೆ.</p>.<p>ಘಟನೆ ಸಂಬಂಧ ಬಿ. ಚಂದ್ರಮೋಹನ್ (48) ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.</p><p> ಸ್ಟಾಕ್ ಮಾರುಕಟ್ಟೆಯಲ್ಲಿ ಆನ್ಲೈನ್ ಟ್ರೇಡಿಂಗ್ ನಡೆಸುತ್ತಿದ್ದ ಈತನಿಗೆ 55 ವರ್ಷದ ಯರ್ರಂ ಅನುರಾಧ ರೆಡ್ಡಿ ಎಂಬರ ಜತೆ ಕಳೆದ 15 ವರ್ಷಗಳಿಂದ ಅನೈತಿಕ ಸಂಬಂಧ ಇತ್ತು. ಗಂಡನಿಂದ ಬೇರೆಯಾಗಿದ್ದ ಅನುರಾಧ ಆರೋಪಿ ಚಂದ್ರಮೋಹನ್ ಜತೆಗೆ ದಿಲ್ಖುಷ್ ನಗರದಲ್ಲಿರುವ ಚೈತನ್ಯಪುರಿ ಕಾಲೋನಿಯಲ್ಲಿ ವಾಸವಾಗಿದ್ದರು.</p><p>ಬಡ್ಡಿಗೆ ಹಣ ನೀಡುತ್ತಿದ್ದ ಅನುರಾಧ, ಮೋಹನ್ಗೂ 7 ಲಕ್ಷ ಸಾಲ ನೀಡಿದ್ದರು. ಈ ನಡುವೆ ಹಣ ಹಿಂದಿರುಗಿಸಲು ಒತ್ತಾಯಿಸಿದ್ದಾರೆ. ಈ ವೇಳೆ ಅವರನ್ನು ಕೊಲೆ ಮಾಡಲು ಚಂದ್ರಮೋಹನ್ ಯೋಜನೆ ಹಾಕಿಕೊಂಡಿದ್ದಾನೆ.</p>.<p>ಮೇ 12 ರಂದು ಇವರಿಬ್ಬರ ನಡುವೆ ಮನೆಯಲ್ಲಿಯೇ ಜಗಳ ನಡೆದಿದ್ದು, ಈ ವೇಳೆ ಆರೋಪಿ, ಅನುರಾಧ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಎದೆ ಹಾಗೂ ಹೊಟ್ಟೆಗೆ ಗಂಭೀರ ಗಾಯ ಉಂಟಾಗಿ ಅನುರಾಧ ಸಾವಿಗೀಡಾಗಿದ್ದಾರೆ.</p><p>ಕೊಲೆ ಮಾಡಿದ ಬಳಿಕ ಆತ, ಸಣ್ಣ ಕಲ್ಲು ತುಂಡರಿಸುವ ಯಂತ್ರ ತಂದು, ದೇಹವನ್ನು ತುಂಡು ತುಂಡು ಮಾಡಿದ್ದಾನೆ. ರುಂಡವನ್ನು ಕತ್ತರಿಸಿ ಪಾಲಿಥಿನ್ ಚೀಲದಲ್ಲಿ ಸುತ್ತಿಟ್ಟಿದ್ದಾನೆ. ಕೈ, ಕಾಲುಗಳನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇರಿಸಿದ್ದಾನೆ.</p>.<p>ಮೇ 15 ರಂದು ಆಟೋ ರಿಕ್ಷಾವೊಂದರಲ್ಲಿ ತೆರಳಿ ರುಂಡವನ್ನು ಮುಸಿ ನದಿ ಬಳಿ ಎಸೆದಿದ್ದಾನೆ. ಈ ನಡುವೆ ಪಿನಾಯಿಲ್, ಕರ್ಪೂರ, ಆಗರಬತ್ತಿಗಳನ್ನು ತಂದು ದೇಹದ ಭಾಗಗಳಿಗೆ ಸಿಂಪಡಿಸಿ, ದುರ್ನಾತ ಬೀರದಂತೆ ನೋಡಿಕೊಂಡಿದ್ದಾನೆ. ತುಂಡು ಮಾಡಿರುವ ದೇಹದ ಭಾಗಗಳನ್ನು ವಿಲೇವಾರಿ ಮಾಡುವ ಬಗ್ಗೆ ಯೂಟ್ಯೂಬ್ನಲ್ಲಿ ವಿಡಿಯೊ ನೋಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.</p><p>ಇದೇ ವೇಳೆ ಅನುರಾಧ ಇನ್ನೂ ಬದುಕಿದ್ದಾರೆ ಎಂದು ನಂಬಿಸಲು, ಅವರ ಪರಿಚಯಸ್ಥರಿಗೆ ಆಗಾಗ್ಗೆ ಮೆಸೇಜ್ ಕೂಡ ಮಾಡುತ್ತಿದ್ದ.</p>.<p>ಮೇ 17 ರಂದು ಮುಸಿ ನದಿ ಬಳಿಕ ಕಸ ವಿಲೇವಾರಿ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ರುಂಡ ಕಂಡು ಬಂದಿದೆ. ಅವರು ನೀಡಿದ ಮಾಹಿತಿ ಅನ್ವಯ ಮಾಲಕ್ಪೇಟ್ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.</p><p>ಹಲವು ಸಿಸಿಟಿವಿ ದೃಶ್ಯಾವಳಿಗಳು, ತಂತ್ರಜ್ಞಾನಗಳ ಮೊರೆ ಹೋದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೊಲೀಸರು ಸಂತ್ರಸ್ತೆ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಇಡೀ ದೇಶದ ಗಮನ ಸೆಳೆದಿದ್ದ ಶ್ರದ್ಧಾ ವಾಲಕರ್ ಹಾಗೂ ನಿಕ್ಕಿ ಯಾದವ್ ಭೀಕರ ಕೊಲೆಯನ್ನು ಹೋಲುವ ಪ್ರಕರಣ ಹೈದರಾಬಾದ್ನಲ್ಲಿ ನಡೆದಿದೆ. </p><p>ವ್ಯಕ್ತಿಯೊಬ್ಬ ತನ್ನ ಸಹಜೀವನ ಸಂಗಾತಿಯನ್ನು ಕೊಲೆ ಮಾಡಿ, ದೇಹದ ಭಾಗಗಳನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇರಿಸಿದ್ದಾರೆ.</p><p>ಮೇ 17 ರಂದು ಹೈದರಾಬಾದ್ನ ಮುಸಿ ನದಿ ಬಳಿ ರುಂಡವೊಂದು ಪತ್ತೆಯಾಗಿದ್ದು, ತನಿಖೆ ಮಾಡಿದಾಗ ಪೊಲೀಸರಿಗೆ ವಿಷಯ ಗೊತ್ತಾಗಿದೆ.</p>.<p>ಘಟನೆ ಸಂಬಂಧ ಬಿ. ಚಂದ್ರಮೋಹನ್ (48) ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.</p><p> ಸ್ಟಾಕ್ ಮಾರುಕಟ್ಟೆಯಲ್ಲಿ ಆನ್ಲೈನ್ ಟ್ರೇಡಿಂಗ್ ನಡೆಸುತ್ತಿದ್ದ ಈತನಿಗೆ 55 ವರ್ಷದ ಯರ್ರಂ ಅನುರಾಧ ರೆಡ್ಡಿ ಎಂಬರ ಜತೆ ಕಳೆದ 15 ವರ್ಷಗಳಿಂದ ಅನೈತಿಕ ಸಂಬಂಧ ಇತ್ತು. ಗಂಡನಿಂದ ಬೇರೆಯಾಗಿದ್ದ ಅನುರಾಧ ಆರೋಪಿ ಚಂದ್ರಮೋಹನ್ ಜತೆಗೆ ದಿಲ್ಖುಷ್ ನಗರದಲ್ಲಿರುವ ಚೈತನ್ಯಪುರಿ ಕಾಲೋನಿಯಲ್ಲಿ ವಾಸವಾಗಿದ್ದರು.</p><p>ಬಡ್ಡಿಗೆ ಹಣ ನೀಡುತ್ತಿದ್ದ ಅನುರಾಧ, ಮೋಹನ್ಗೂ 7 ಲಕ್ಷ ಸಾಲ ನೀಡಿದ್ದರು. ಈ ನಡುವೆ ಹಣ ಹಿಂದಿರುಗಿಸಲು ಒತ್ತಾಯಿಸಿದ್ದಾರೆ. ಈ ವೇಳೆ ಅವರನ್ನು ಕೊಲೆ ಮಾಡಲು ಚಂದ್ರಮೋಹನ್ ಯೋಜನೆ ಹಾಕಿಕೊಂಡಿದ್ದಾನೆ.</p>.<p>ಮೇ 12 ರಂದು ಇವರಿಬ್ಬರ ನಡುವೆ ಮನೆಯಲ್ಲಿಯೇ ಜಗಳ ನಡೆದಿದ್ದು, ಈ ವೇಳೆ ಆರೋಪಿ, ಅನುರಾಧ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಎದೆ ಹಾಗೂ ಹೊಟ್ಟೆಗೆ ಗಂಭೀರ ಗಾಯ ಉಂಟಾಗಿ ಅನುರಾಧ ಸಾವಿಗೀಡಾಗಿದ್ದಾರೆ.</p><p>ಕೊಲೆ ಮಾಡಿದ ಬಳಿಕ ಆತ, ಸಣ್ಣ ಕಲ್ಲು ತುಂಡರಿಸುವ ಯಂತ್ರ ತಂದು, ದೇಹವನ್ನು ತುಂಡು ತುಂಡು ಮಾಡಿದ್ದಾನೆ. ರುಂಡವನ್ನು ಕತ್ತರಿಸಿ ಪಾಲಿಥಿನ್ ಚೀಲದಲ್ಲಿ ಸುತ್ತಿಟ್ಟಿದ್ದಾನೆ. ಕೈ, ಕಾಲುಗಳನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ಇರಿಸಿದ್ದಾನೆ.</p>.<p>ಮೇ 15 ರಂದು ಆಟೋ ರಿಕ್ಷಾವೊಂದರಲ್ಲಿ ತೆರಳಿ ರುಂಡವನ್ನು ಮುಸಿ ನದಿ ಬಳಿ ಎಸೆದಿದ್ದಾನೆ. ಈ ನಡುವೆ ಪಿನಾಯಿಲ್, ಕರ್ಪೂರ, ಆಗರಬತ್ತಿಗಳನ್ನು ತಂದು ದೇಹದ ಭಾಗಗಳಿಗೆ ಸಿಂಪಡಿಸಿ, ದುರ್ನಾತ ಬೀರದಂತೆ ನೋಡಿಕೊಂಡಿದ್ದಾನೆ. ತುಂಡು ಮಾಡಿರುವ ದೇಹದ ಭಾಗಗಳನ್ನು ವಿಲೇವಾರಿ ಮಾಡುವ ಬಗ್ಗೆ ಯೂಟ್ಯೂಬ್ನಲ್ಲಿ ವಿಡಿಯೊ ನೋಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.</p><p>ಇದೇ ವೇಳೆ ಅನುರಾಧ ಇನ್ನೂ ಬದುಕಿದ್ದಾರೆ ಎಂದು ನಂಬಿಸಲು, ಅವರ ಪರಿಚಯಸ್ಥರಿಗೆ ಆಗಾಗ್ಗೆ ಮೆಸೇಜ್ ಕೂಡ ಮಾಡುತ್ತಿದ್ದ.</p>.<p>ಮೇ 17 ರಂದು ಮುಸಿ ನದಿ ಬಳಿಕ ಕಸ ವಿಲೇವಾರಿ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ರುಂಡ ಕಂಡು ಬಂದಿದೆ. ಅವರು ನೀಡಿದ ಮಾಹಿತಿ ಅನ್ವಯ ಮಾಲಕ್ಪೇಟ್ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.</p><p>ಹಲವು ಸಿಸಿಟಿವಿ ದೃಶ್ಯಾವಳಿಗಳು, ತಂತ್ರಜ್ಞಾನಗಳ ಮೊರೆ ಹೋದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದು, ಪೊಲೀಸರು ಸಂತ್ರಸ್ತೆ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>