<p><strong>ಹೈದರಾಬಾದ್: </strong>ಹೈದರಾಬಾದ್ ನಗರದಲ್ಲಿ ಮೆಟ್ರೊ ರೈಲು ಯೋಜನೆ ಭಾರಿ ನಷ್ಟದಲ್ಲಿದ್ದು, ಅದರ ಸಾಧಕ–ಬಾಧಕಗಳನ್ನು ಪರಿಶೀಲಿಸಲು ತೆಲಂಗಾಣ ಸರ್ಕಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.</p>.<p>ಕೋವಿಡ್ ಪಿಡುಗು ಹಾಗೂ ಲಾಕ್ಡೌನ್ ಕಾರಣದಿಂದಾಗಿ ಮೆಟ್ರೊ ರೈಲು ಕಾರ್ಯನಿರ್ವಹಣೆಯಲ್ಲಿ ಭಾರಿ ನಷ್ಟವಾಗಿದೆ. ಈ ಸಂಬಂಧ ನೆರವು ನೀಡುವಂತೆ ಕೋರಿ ಹೈದರಾಬಾದ್ ಮೆಟ್ರೊ ರೈಲು ಕಾರ್ಯಾಚರಣೆ ನಿರ್ವಹಿಸುತ್ತಿರುವ ಎಲ್ ಅಂಡ್ ಟಿ ಕಂಪನಿ ಸಲ್ಲಿಸಿರುವ ಮನವಿ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.</p>.<p>ಎಲ್ ಅಂಡ್ ಟಿ ಮೆಟ್ರೊ ರೈಲು ಕಂಪನಿಯ ವಾರ್ಷಿಕ ವರದಿಯ ಪಕ್ರಾರ, ‘ಕಳೆದ ಆರ್ಥಿಕ ವರ್ಷದಲ್ಲಿ ಮೆಟ್ರೊ ರೈಲು ಕಾರ್ಯಾಚರಣೆ ಮತ್ತು ಇತರೆ ಮೂಲಗಳಿಂದ ಬರುವ ಆದಾಯ (ಇದರಲ್ಲಿ ಟಿಕೆಟ್ ದರ ಮತ್ತು ತೆರಿಗೆಯೇತರ ದರ ಸೇರಿದೆ) ₹228 ಕೋಟಿ. ಆದರೆ, ಹಿಂದಿನ ವರ್ಷದ ಈ ಆದಾಯ ₹598 ಕೋಟಿ ಇತ್ತು.</p>.<p>ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ, ರಿಯಲ್ ಎಸ್ಟೇಟ್ ಚಟುವಟಿಕೆಗಳು ಭಾರಿ ಕುಸಿತ ಕಂಡಿದ್ದರ ಪರಿಣಾಮವಾಗಿ ಪ್ರಸಕ್ತ ವರ್ಷ ಕಂಪನಿಗೆ ₹1,767 ಕೋಟಿ ನಷ್ಟವಾಗಿದೆ. ಹಿಂದಿನ ವರ್ಷ ₹382 ಕೋಟಿಯಷ್ಟು ನಷ್ಟವಾಗಿತ್ತು ಎಂಬ ಅಂಶ ವರದಿಯಲ್ಲಿದೆ.</p>.<p>ಮೆಟ್ರೊ ರೈಲು ಕಾರ್ಯನಿರ್ವಹಣೆಯಲ್ಲಿ ನಷ್ಟವಾಗುತ್ತಿದ್ದು, ಈ ಸಂಬಂಧ ಸರ್ಕಾರ ನೆರವು ನೀಡಬೇಕೆಂದು ಕಂಪನಿ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು, ಎಲ್ ಅಂಡ್ ಟಿ ಮೆಟ್ರೊ ರೈಲು ಕಾರ್ಯನಿರ್ವಹಣೆ ವಿಭಾಗ, ಸಚಿವರು ಹಾಗೂ ಸರ್ಕಾರದ ಅಧಿಕಾರಿಗೊಳೊಂದಿಗೆ ಸಭೆ ನಡೆಸಿ, ಮೆಟ್ರೊ ರೈಲು ಯೋಜನೆಯನ್ನು ಬೆಂಬಲಿಸುವ ಜೊತೆಗೆ, ಪುನಶ್ಚೇತನಕ್ಕೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.</p>.<p>ಇದಕ್ಕೂ ಮೊದಲು, ಮೆಟ್ರೊ ರೈಲು ಕಾರ್ಯನಿರ್ವಹಣೆಯ ಸಾಧಕ ಬಾಧಕ ಕುರಿತು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. ಆ ಸಮಿತಿಯಲ್ಲಿ ಪೌರಾಡಳಿತ ಸಚಿವ ಕೆ.ಟಿ.ರಾಮರಾವ್ ಮತ್ತು ಸಚಿವ ವೇಮುಲಾ ಪ್ರಶಾಂತ್ ರೆಡ್ಡಿ, ಇತರ ಹಿರಿಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.</p>.<p>ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಹೈದರಾಬಾದ್ ಮೆಟ್ರೋವನ್ನು ನಷ್ಟದಿಂದ ಹೇಗೆ ಪಾರುಮಾಡುವುದು ಎಂಬುದರ ಕುರಿತು ವರದಿಯಲ್ಲಿ ತಿಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/india-news/pm-narendra-modi-greets-engineers-on-engineers-day-866749.html" target="_blank">Engineers Day | ಎಂಜಿನಿಯರ್ಗಳಿಗೆ ಅಭಿನಂದಿಸಲು ಶಬ್ದಗಳೇ ಸಾಲುತ್ತಿಲ್ಲ: ಮೋದಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್: </strong>ಹೈದರಾಬಾದ್ ನಗರದಲ್ಲಿ ಮೆಟ್ರೊ ರೈಲು ಯೋಜನೆ ಭಾರಿ ನಷ್ಟದಲ್ಲಿದ್ದು, ಅದರ ಸಾಧಕ–ಬಾಧಕಗಳನ್ನು ಪರಿಶೀಲಿಸಲು ತೆಲಂಗಾಣ ಸರ್ಕಾರ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.</p>.<p>ಕೋವಿಡ್ ಪಿಡುಗು ಹಾಗೂ ಲಾಕ್ಡೌನ್ ಕಾರಣದಿಂದಾಗಿ ಮೆಟ್ರೊ ರೈಲು ಕಾರ್ಯನಿರ್ವಹಣೆಯಲ್ಲಿ ಭಾರಿ ನಷ್ಟವಾಗಿದೆ. ಈ ಸಂಬಂಧ ನೆರವು ನೀಡುವಂತೆ ಕೋರಿ ಹೈದರಾಬಾದ್ ಮೆಟ್ರೊ ರೈಲು ಕಾರ್ಯಾಚರಣೆ ನಿರ್ವಹಿಸುತ್ತಿರುವ ಎಲ್ ಅಂಡ್ ಟಿ ಕಂಪನಿ ಸಲ್ಲಿಸಿರುವ ಮನವಿ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.</p>.<p>ಎಲ್ ಅಂಡ್ ಟಿ ಮೆಟ್ರೊ ರೈಲು ಕಂಪನಿಯ ವಾರ್ಷಿಕ ವರದಿಯ ಪಕ್ರಾರ, ‘ಕಳೆದ ಆರ್ಥಿಕ ವರ್ಷದಲ್ಲಿ ಮೆಟ್ರೊ ರೈಲು ಕಾರ್ಯಾಚರಣೆ ಮತ್ತು ಇತರೆ ಮೂಲಗಳಿಂದ ಬರುವ ಆದಾಯ (ಇದರಲ್ಲಿ ಟಿಕೆಟ್ ದರ ಮತ್ತು ತೆರಿಗೆಯೇತರ ದರ ಸೇರಿದೆ) ₹228 ಕೋಟಿ. ಆದರೆ, ಹಿಂದಿನ ವರ್ಷದ ಈ ಆದಾಯ ₹598 ಕೋಟಿ ಇತ್ತು.</p>.<p>ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ, ರಿಯಲ್ ಎಸ್ಟೇಟ್ ಚಟುವಟಿಕೆಗಳು ಭಾರಿ ಕುಸಿತ ಕಂಡಿದ್ದರ ಪರಿಣಾಮವಾಗಿ ಪ್ರಸಕ್ತ ವರ್ಷ ಕಂಪನಿಗೆ ₹1,767 ಕೋಟಿ ನಷ್ಟವಾಗಿದೆ. ಹಿಂದಿನ ವರ್ಷ ₹382 ಕೋಟಿಯಷ್ಟು ನಷ್ಟವಾಗಿತ್ತು ಎಂಬ ಅಂಶ ವರದಿಯಲ್ಲಿದೆ.</p>.<p>ಮೆಟ್ರೊ ರೈಲು ಕಾರ್ಯನಿರ್ವಹಣೆಯಲ್ಲಿ ನಷ್ಟವಾಗುತ್ತಿದ್ದು, ಈ ಸಂಬಂಧ ಸರ್ಕಾರ ನೆರವು ನೀಡಬೇಕೆಂದು ಕಂಪನಿ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು, ಎಲ್ ಅಂಡ್ ಟಿ ಮೆಟ್ರೊ ರೈಲು ಕಾರ್ಯನಿರ್ವಹಣೆ ವಿಭಾಗ, ಸಚಿವರು ಹಾಗೂ ಸರ್ಕಾರದ ಅಧಿಕಾರಿಗೊಳೊಂದಿಗೆ ಸಭೆ ನಡೆಸಿ, ಮೆಟ್ರೊ ರೈಲು ಯೋಜನೆಯನ್ನು ಬೆಂಬಲಿಸುವ ಜೊತೆಗೆ, ಪುನಶ್ಚೇತನಕ್ಕೂ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.</p>.<p>ಇದಕ್ಕೂ ಮೊದಲು, ಮೆಟ್ರೊ ರೈಲು ಕಾರ್ಯನಿರ್ವಹಣೆಯ ಸಾಧಕ ಬಾಧಕ ಕುರಿತು ಅಧ್ಯಯನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. ಆ ಸಮಿತಿಯಲ್ಲಿ ಪೌರಾಡಳಿತ ಸಚಿವ ಕೆ.ಟಿ.ರಾಮರಾವ್ ಮತ್ತು ಸಚಿವ ವೇಮುಲಾ ಪ್ರಶಾಂತ್ ರೆಡ್ಡಿ, ಇತರ ಹಿರಿಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ.</p>.<p>ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಹೈದರಾಬಾದ್ ಮೆಟ್ರೋವನ್ನು ನಷ್ಟದಿಂದ ಹೇಗೆ ಪಾರುಮಾಡುವುದು ಎಂಬುದರ ಕುರಿತು ವರದಿಯಲ್ಲಿ ತಿಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/india-news/pm-narendra-modi-greets-engineers-on-engineers-day-866749.html" target="_blank">Engineers Day | ಎಂಜಿನಿಯರ್ಗಳಿಗೆ ಅಭಿನಂದಿಸಲು ಶಬ್ದಗಳೇ ಸಾಲುತ್ತಿಲ್ಲ: ಮೋದಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>