<p><strong>ಭುವನೇಶ್ವರ:</strong> ‘ನಾನು ಕೂಡ ಚಿಟ್ಫಂಡ್ ಹಗರಣಕ್ಕೆ ಬಲಿಪಶುವಾಗಿದ್ದು, ಎರಡು ಬಾರಿ ವಂಚನೆಗೊಳಗಾಗಿದ್ದೇನೆ. ಹಾಗಾಗಿ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸುವ ಬಗ್ಗೆ ಜಾಗೃತರಾಗಿರಬೇಕು’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.</p><p>ಭುವನೇಶ್ವರದಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.</p><p>‘ನಾನು ಕೂಡ ಚಿಟ್ಫಂಡ್ ಹಗರಣಗಳಿಗೆ ಬಲಿಪಶುವಾಗಿದ್ದೇನೆ. 1990 ಮತ್ತು 2002ರಲ್ಲಿ ಎರಡು ಸಂಸ್ಥೆಗಳು ನನ್ನನ್ನು ವಂಚಿಸಿದ್ದವು. ತಮ್ಮ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.</p><p>ಪೋಂಜಿ (ನಕಲಿ) ಸಂಸ್ಥೆಗಳ ಏಜೆಂಟ್ಗಳು ಹೇಳಿದ್ದ ಮಾತುಕತೆಗಳಿಂದ ಪ್ರಭಾವಿತನಾಗಿದ್ದೆ. ಕೆಲವು ಯೋಜನೆಗಳಲ್ಲಿ ಹಣ ಠೇವಣಿ ಇಡಲು ಹಣವನ್ನು ಹೊಂದಿಸಿದ್ದೆ ಎಂದು ಮಾಝಿ ವಿವರಿಸಿದ್ದಾರೆ.</p><p>ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಹಾಗಾಗಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಮಾಝಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ‘ನಾನು ಕೂಡ ಚಿಟ್ಫಂಡ್ ಹಗರಣಕ್ಕೆ ಬಲಿಪಶುವಾಗಿದ್ದು, ಎರಡು ಬಾರಿ ವಂಚನೆಗೊಳಗಾಗಿದ್ದೇನೆ. ಹಾಗಾಗಿ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸುವ ಬಗ್ಗೆ ಜಾಗೃತರಾಗಿರಬೇಕು’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.</p><p>ಭುವನೇಶ್ವರದಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.</p><p>‘ನಾನು ಕೂಡ ಚಿಟ್ಫಂಡ್ ಹಗರಣಗಳಿಗೆ ಬಲಿಪಶುವಾಗಿದ್ದೇನೆ. 1990 ಮತ್ತು 2002ರಲ್ಲಿ ಎರಡು ಸಂಸ್ಥೆಗಳು ನನ್ನನ್ನು ವಂಚಿಸಿದ್ದವು. ತಮ್ಮ ಹಣವನ್ನು ಸಂಪೂರ್ಣವಾಗಿ ಹಿಂಪಡೆಯಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.</p><p>ಪೋಂಜಿ (ನಕಲಿ) ಸಂಸ್ಥೆಗಳ ಏಜೆಂಟ್ಗಳು ಹೇಳಿದ್ದ ಮಾತುಕತೆಗಳಿಂದ ಪ್ರಭಾವಿತನಾಗಿದ್ದೆ. ಕೆಲವು ಯೋಜನೆಗಳಲ್ಲಿ ಹಣ ಠೇವಣಿ ಇಡಲು ಹಣವನ್ನು ಹೊಂದಿಸಿದ್ದೆ ಎಂದು ಮಾಝಿ ವಿವರಿಸಿದ್ದಾರೆ.</p><p>ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಹಾಗಾಗಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಮಾಝಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>