ಇದೇ ವೇಳೆ, ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು. ಪ್ರಸ್ತುತ ಆಕ್ಷೇಪಾರ್ಹ ಆದೇಶಗಳು ಜಾರಿಯಲ್ಲಿಲ್ಲ. ಆರ್ಥಿಕತೆ ಬೆಳವಣಿಗೆಗೆ ಅಡ್ಡಿ ಪಡಿಸುವಂತಹ ಅಡೆತಡೆಗಳ ಹೇರಿಕೆಯಾಗುವುದಿಲ್ಲ ಎಂದು ಭಾವಿಸಿದ್ದೇವೆ. ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ, ಅವರ ಪತಿ ಸದಾನಂದ ಸುಳೆ, ಮಹಾರಾಷ್ಟ್ರ ಶಿಕ್ಷಣ ಮಂತ್ರಿ ವರ್ಷಾ ಗಾಯಕ್ವಾಡ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹಾಗಾಗಿ ಪ್ರತಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮಗಳಿಗೆ ತೆರಳುವಾಗ ಜಾಗರೂಕರಾಗಿರಬೇಕು ಎಂದು ರಾವುತ್ ಹೇಳಿದರು.