<p><strong>ನವದೆಹಲಿ (ಪಿಟಿಐ):</strong> ‘ನೀವು ಈ ಹಿಂದೆ ನನ್ನ ಸಲಹೆ ಕೇಳಿದ್ದರೆ ಇಂದು ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ’ ಎಂದು ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಜಗದಾಂಬಿಕಾ ಪಾಲ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬುಧವಾರ ಹೇಳಿದರು.</p>.<p>ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ರಾಹುಲ್ ಅವರು, ‘ನಮ್ಮ ಪಕ್ಷದ ಮಾಜಿ ನಾಯಕರಾದ ಜಗದಾಂಬಿಕಾ ಪಾಲ್ ಅವರು ಸ್ಪೀಕರ್ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೀಗಾಗಿ ಇಂದು ನಾನು ಹೆಚ್ಚು ಆಕ್ರಮಣಕಾರಿಯಾಗಿ ಮಾತನಾಡುವುದಿಲ್ಲ’ ಎಂದರು.</p>.<p>ಅದಕ್ಕೆ ಪಾಲ್ ಅವರು ಪ್ರತಿಕ್ರಿಯಿಸಿ, ‘ಬಜೆಟ್ಗೆ ಸಂಬಂಧಿಸದೇ ಇರುವ ವಿಷಯವನ್ನು ಎತ್ತಲು ಸಾಧ್ಯವಿಲ್ಲ. ಸರಿಯಾದ ಹಾದಿಯಲ್ಲಿದ್ದ ನೀವು ಏಕೆ ಹಳಿ ತಪ್ಪುತ್ತಿದ್ದೀರಿ’ ಎಂದು ರಾಹುಲ್ ಅವರನ್ನು ಪ್ರಸ್ನಿಸಿದರು. </p>.<p>ಅದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ‘ನಮಗೆ ನಿಮ್ಮ ಮೇಲೆ ಪ್ರೀತಿಯಿದೆ. ನೀವು ನಮ್ಮ ಪಕ್ಷದ ಮಾಜಿ ಸದಸ್ಯರು. ಹೀಗಾಗಿ ಇಂದು ನಾನು ಆಕ್ರಮಣಕಾರಿಯಾಗಿ ಮಾತನಾಡುವುದಿಲ್ಲ. ನಿಮ್ಮ ಹೃದಯ ಬಿಜೆಪಿಯಲ್ಲಿ ಇಲ್ಲ ಎಂಬುದು ನನಗೆ ತಿಳಿದಿದೆ ಸರ್’ ಎಂದರು. </p>.<p>‘ಈಗಲೂ ನಿಮಗೆ ಸಲಹೆ ನೀಡುತ್ತಿದ್ದೇನೆ. ನೀವು ಸರಿಯಾದ ಹಾದಿಯಲ್ಲಿ ಸಾಗಿ. ಇನ್ನೂ ಸಮಯವಿದೆ’ ಎಂದು ಪಾಲ್ ಹೇಳಿದರು. </p>.<p>2009ರಲ್ಲಿ 15ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾದ ಪಾಲ್ ಅವರು, 2014ರಲ್ಲಿ ಬಿಜೆಪಿ ಸೇರಿದ್ದರು. ಅಲ್ಲಿಂದ ಮೂರು ಬಾರಿ ಬಿಜೆಪಿಯಿಂದ ಲೋಕಸಭೆಗೆ ಮರು ಆಯ್ಕೆಯಾಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ‘ನೀವು ಈ ಹಿಂದೆ ನನ್ನ ಸಲಹೆ ಕೇಳಿದ್ದರೆ ಇಂದು ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ’ ಎಂದು ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ ಜಗದಾಂಬಿಕಾ ಪಾಲ್ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬುಧವಾರ ಹೇಳಿದರು.</p>.<p>ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಮಾತನಾಡಿದ ರಾಹುಲ್ ಅವರು, ‘ನಮ್ಮ ಪಕ್ಷದ ಮಾಜಿ ನಾಯಕರಾದ ಜಗದಾಂಬಿಕಾ ಪಾಲ್ ಅವರು ಸ್ಪೀಕರ್ ಕುರ್ಚಿಯಲ್ಲಿ ಕುಳಿತಿದ್ದಾರೆ. ಹೀಗಾಗಿ ಇಂದು ನಾನು ಹೆಚ್ಚು ಆಕ್ರಮಣಕಾರಿಯಾಗಿ ಮಾತನಾಡುವುದಿಲ್ಲ’ ಎಂದರು.</p>.<p>ಅದಕ್ಕೆ ಪಾಲ್ ಅವರು ಪ್ರತಿಕ್ರಿಯಿಸಿ, ‘ಬಜೆಟ್ಗೆ ಸಂಬಂಧಿಸದೇ ಇರುವ ವಿಷಯವನ್ನು ಎತ್ತಲು ಸಾಧ್ಯವಿಲ್ಲ. ಸರಿಯಾದ ಹಾದಿಯಲ್ಲಿದ್ದ ನೀವು ಏಕೆ ಹಳಿ ತಪ್ಪುತ್ತಿದ್ದೀರಿ’ ಎಂದು ರಾಹುಲ್ ಅವರನ್ನು ಪ್ರಸ್ನಿಸಿದರು. </p>.<p>ಅದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ‘ನಮಗೆ ನಿಮ್ಮ ಮೇಲೆ ಪ್ರೀತಿಯಿದೆ. ನೀವು ನಮ್ಮ ಪಕ್ಷದ ಮಾಜಿ ಸದಸ್ಯರು. ಹೀಗಾಗಿ ಇಂದು ನಾನು ಆಕ್ರಮಣಕಾರಿಯಾಗಿ ಮಾತನಾಡುವುದಿಲ್ಲ. ನಿಮ್ಮ ಹೃದಯ ಬಿಜೆಪಿಯಲ್ಲಿ ಇಲ್ಲ ಎಂಬುದು ನನಗೆ ತಿಳಿದಿದೆ ಸರ್’ ಎಂದರು. </p>.<p>‘ಈಗಲೂ ನಿಮಗೆ ಸಲಹೆ ನೀಡುತ್ತಿದ್ದೇನೆ. ನೀವು ಸರಿಯಾದ ಹಾದಿಯಲ್ಲಿ ಸಾಗಿ. ಇನ್ನೂ ಸಮಯವಿದೆ’ ಎಂದು ಪಾಲ್ ಹೇಳಿದರು. </p>.<p>2009ರಲ್ಲಿ 15ನೇ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾದ ಪಾಲ್ ಅವರು, 2014ರಲ್ಲಿ ಬಿಜೆಪಿ ಸೇರಿದ್ದರು. ಅಲ್ಲಿಂದ ಮೂರು ಬಾರಿ ಬಿಜೆಪಿಯಿಂದ ಲೋಕಸಭೆಗೆ ಮರು ಆಯ್ಕೆಯಾಗಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>