<p><strong>ಲಖನೌ:</strong> ಸಮಾಜದಲ್ಲಿನ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಶವೊಡ್ಡಿ ಮತಾಂತರ ದಂಧೆ ನಡೆಸುತ್ತಿರುವ ಬೃಹತ್ ಜಾಲವನ್ನು ಭೇದಿಸಿರುವ ಉತ್ತರ ಪ್ರದೇಶ ಪೊಲೀಸರು, ಆರು ರಾಜ್ಯಗಳ 10 ಜನರನ್ನು ಶನಿವಾರ ಬಂಧಿಸಿದ್ದಾರೆ.</p><p>‘33 ಹಾಗೂ 18 ವರ್ಷದ ಸೋದರಿಯರು ಆಗ್ರಾದಿಂದ ಕಳೆದ ಮಾರ್ಚ್ನಲ್ಲಿ ಕಾಣೆಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸಿದಾಗ, ಇವರನ್ನು ಅಕ್ರಮವಾಗಿ ಬೇರೆ ಧರ್ಮಕ್ಕೆ ಮತಾಂತರ ಮಾಡಿರುವುದು ಪತ್ತೆಯಾಯಿತು. ಇದರಲ್ಲಿ ಒಬ್ಬ ಮಹಿಳೆ ಎಕೆ–47 ಬಂದೂಕು ಹಿಡಿದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.</p>.ಮತಾಂತರ ದಂಧೆ: ರಾಜಕಾರಣಿಗಳಿಗೂ ಚಂಗೂರ್ ಬಾಬಾ ನೆರವು; ಏನಿದು ಕೆಂಪು ಡೈರಿಯ ರಹಸ್ಯ?.ಚಂಗೂರ್ ಬಾಬಾ ಮತಾಂತರ ಜಾಲ: ಉತ್ತರ ಪ್ರದೇಶ, ಮುಂಬೈನ ಹಲವೆಡೆ ED ದಾಳಿ.<p>‘ಲವ್ ಜಿಹಾದ್ ಮತ್ತು ತೀವ್ರವಾದಿಗಳ ಗುಂಪು ಈ ಸೋದರಿಯರನ್ನು ಮತಾಂತರಗೊಳಿಸಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇವರಿಗೆ ಅಮೆರಿಕ ಮತ್ತು ಕೆನಡಾದಿಂದ ಹಣ ಸಂದಾಯವಾಗಿದೆ. ಇಲ್ಲಿ ನಿಷೇಧಿತ ಐಎಸ್ಐಎಸ್ ಸಂಘಟನೆ ಕಟ್ಟುವ ಸಂಚು ಇರುವುದು ಪತ್ತೆಯಾಗಿದೆ’ ಎಂದು ಆಗಾ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ಹೇಳಿದ್ದಾರೆ.</p><p>‘'ಮಿಷನ್ ಅಸ್ಮಿತಾ’ ಎಂಬ ಈ ಕಾರ್ಯಾಚರಣೆಯಲ್ಲಿ ರಾಜಸ್ಥಾನದ ಮೂವರು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ತಲಾ ಇಬ್ಬರು ಹಾಗೂ ಗೋವಾ, ಉತ್ತರಾಖಂಡ ಮತ್ತು ದೆಹಲಿಯ ತಲಾ ಒಬ್ಬರನ್ನು ಬಂಧಿಸಲಾಗಿದೆ. ಎಸ್ಟಿಎಫ್ ಮತ್ತು ಭಯೋತ್ಪಾದನ ನಿಗ್ರಹ ದಳ ಈ ಕಾರ್ಯಾಚರಣೆ ನಡೆಸಿದೆ’ ಎಂದು ಡಿಜಿಪಿ ರಾಜೀವ್ ಕೃಷ್ಣ ತಿಳಿಸಿದ್ದಾರೆ.</p><p>‘ಲವ್ ಜಿಹಾದ್, ಅಕ್ರಮವಾಗಿ ಮತಾಂತರ ದಂಧೆ ನಡೆಸುವವರು, ತೀವ್ರವಾದಿಗಳು ಮತ್ತು ಜಾಗತಿಕ ಮಟ್ಟದಲ್ಲಿರುವ ಜಿಹಾದಿಗಳ ಜತೆಗೂಡಿ ರಾಷ್ಟ್ರದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಜಾಲದೊಂದಿಗೆ ಕೈಜೋಡಿಸಿದವರನ್ನು ಗುರಿಯಾಗಿಸಿ ‘ಮಿಷನ್ ಅಸ್ಮಿತಾ’ ಆರಂಭಿಸಲಾಗಿದೆ’ ಎಂದು ಅವರು ವಿವರಿಸಿದರು.</p>.ಮತಾಂತರ ನಿಷೇಧ ಕಾಯ್ದೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ .ಗದಗ: ಸಂಪ್ರದಾಯ ಹೆಸರಲ್ಲಿ ಮದುವೆ, ಮತಾಂತರ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಸಮಾಜದಲ್ಲಿನ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಶವೊಡ್ಡಿ ಮತಾಂತರ ದಂಧೆ ನಡೆಸುತ್ತಿರುವ ಬೃಹತ್ ಜಾಲವನ್ನು ಭೇದಿಸಿರುವ ಉತ್ತರ ಪ್ರದೇಶ ಪೊಲೀಸರು, ಆರು ರಾಜ್ಯಗಳ 10 ಜನರನ್ನು ಶನಿವಾರ ಬಂಧಿಸಿದ್ದಾರೆ.</p><p>‘33 ಹಾಗೂ 18 ವರ್ಷದ ಸೋದರಿಯರು ಆಗ್ರಾದಿಂದ ಕಳೆದ ಮಾರ್ಚ್ನಲ್ಲಿ ಕಾಣೆಯಾಗಿದ್ದರು. ಈ ಪ್ರಕರಣದ ತನಿಖೆ ನಡೆಸಿದಾಗ, ಇವರನ್ನು ಅಕ್ರಮವಾಗಿ ಬೇರೆ ಧರ್ಮಕ್ಕೆ ಮತಾಂತರ ಮಾಡಿರುವುದು ಪತ್ತೆಯಾಯಿತು. ಇದರಲ್ಲಿ ಒಬ್ಬ ಮಹಿಳೆ ಎಕೆ–47 ಬಂದೂಕು ಹಿಡಿದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.</p>.ಮತಾಂತರ ದಂಧೆ: ರಾಜಕಾರಣಿಗಳಿಗೂ ಚಂಗೂರ್ ಬಾಬಾ ನೆರವು; ಏನಿದು ಕೆಂಪು ಡೈರಿಯ ರಹಸ್ಯ?.ಚಂಗೂರ್ ಬಾಬಾ ಮತಾಂತರ ಜಾಲ: ಉತ್ತರ ಪ್ರದೇಶ, ಮುಂಬೈನ ಹಲವೆಡೆ ED ದಾಳಿ.<p>‘ಲವ್ ಜಿಹಾದ್ ಮತ್ತು ತೀವ್ರವಾದಿಗಳ ಗುಂಪು ಈ ಸೋದರಿಯರನ್ನು ಮತಾಂತರಗೊಳಿಸಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇವರಿಗೆ ಅಮೆರಿಕ ಮತ್ತು ಕೆನಡಾದಿಂದ ಹಣ ಸಂದಾಯವಾಗಿದೆ. ಇಲ್ಲಿ ನಿಷೇಧಿತ ಐಎಸ್ಐಎಸ್ ಸಂಘಟನೆ ಕಟ್ಟುವ ಸಂಚು ಇರುವುದು ಪತ್ತೆಯಾಗಿದೆ’ ಎಂದು ಆಗಾ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ಹೇಳಿದ್ದಾರೆ.</p><p>‘'ಮಿಷನ್ ಅಸ್ಮಿತಾ’ ಎಂಬ ಈ ಕಾರ್ಯಾಚರಣೆಯಲ್ಲಿ ರಾಜಸ್ಥಾನದ ಮೂವರು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ತಲಾ ಇಬ್ಬರು ಹಾಗೂ ಗೋವಾ, ಉತ್ತರಾಖಂಡ ಮತ್ತು ದೆಹಲಿಯ ತಲಾ ಒಬ್ಬರನ್ನು ಬಂಧಿಸಲಾಗಿದೆ. ಎಸ್ಟಿಎಫ್ ಮತ್ತು ಭಯೋತ್ಪಾದನ ನಿಗ್ರಹ ದಳ ಈ ಕಾರ್ಯಾಚರಣೆ ನಡೆಸಿದೆ’ ಎಂದು ಡಿಜಿಪಿ ರಾಜೀವ್ ಕೃಷ್ಣ ತಿಳಿಸಿದ್ದಾರೆ.</p><p>‘ಲವ್ ಜಿಹಾದ್, ಅಕ್ರಮವಾಗಿ ಮತಾಂತರ ದಂಧೆ ನಡೆಸುವವರು, ತೀವ್ರವಾದಿಗಳು ಮತ್ತು ಜಾಗತಿಕ ಮಟ್ಟದಲ್ಲಿರುವ ಜಿಹಾದಿಗಳ ಜತೆಗೂಡಿ ರಾಷ್ಟ್ರದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಜಾಲದೊಂದಿಗೆ ಕೈಜೋಡಿಸಿದವರನ್ನು ಗುರಿಯಾಗಿಸಿ ‘ಮಿಷನ್ ಅಸ್ಮಿತಾ’ ಆರಂಭಿಸಲಾಗಿದೆ’ ಎಂದು ಅವರು ವಿವರಿಸಿದರು.</p>.ಮತಾಂತರ ನಿಷೇಧ ಕಾಯ್ದೆ: ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ .ಗದಗ: ಸಂಪ್ರದಾಯ ಹೆಸರಲ್ಲಿ ಮದುವೆ, ಮತಾಂತರ ಆರೋಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>