<p><strong>ನಾಗಪುರ:</strong> ಭಾರತವು ‘ಸೂಪರ್ ಪವರ್’ ಮತ್ತು ‘ವಿಶ್ವಗುರು’ ಎಂದು ಪುನರುಚ್ಛರಿಸಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ‘ದೇಶವು ಪ್ರತಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದು, ಇಡೀ ವಿಶ್ವವೇ ನಮ್ಮ ಧ್ವನಿಯನ್ನು ಆಲಿಸುತ್ತಿದೆ’ ಎಂದು ಹೇಳಿದ್ದಾರೆ. </p>.<p>ಗುರುವಾರ ಇಲ್ಲಿ ರಾಷ್ಟ್ರ ನಿರ್ಮಾಣ ಸಮಿತಿ ವತಿಯಿಂದ ನಡೆದ ‘ಅಖಂಡ ಭಾರತ ಸಂಕಲ್ಪ ದಿನ’ದಲ್ಲಿ ಅವರು ಮಾತನಾಡಿದರು. </p>.<p>‘ನಾವು ಎಲ್ಲ ಕ್ಷೇತ್ರಗಳಲ್ಲಿ ಪಾರಮ್ಯ ಸಾಧಿಸಿದರೆ ಇಡೀ ವಿಶ್ವವೇ ನಮ್ಮ ಧ್ವನಿ ಆಲಿಸುತ್ತದೆ’ ಎಂದ ಅವರು, ‘ಯಾವ ದೇಶವು ರಕ್ಷಣಾ ಕ್ಷೇತ್ರ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದೆಯೋ ಮತ್ತು ಯಾವ ದೇಶದ ಜನರು ದೇಶಭಕ್ತರು, ಸುಸಂಸ್ಕೃತರೂ ಆಗಿದ್ದಾರೋ ಆ ದೇಶವು ‘ವಿಶ್ವಗುರು’ ಎನಿಸಿಕೊಳ್ಳುತ್ತದೆ’ ಎಂದರು. </p>.<p>ಆ.14ರಂದು ದೇಶ ವಿಭಜನೆಯ ಕರಾಳ ನೆನಪಿನ ದಿನ ಆಚರಿಸಲಾಗುತ್ತದೆ. ಈ ವಿಭಜನೆ ಅಸ್ವಾಭಾವಿಕ. ಆದರೆ, ಈ ದಿನವು ದೇಶವನ್ನು ಒಗ್ಗೂಡಿಸಿದ ಅಖಂಡತೆಯ ದಿನವೂ ಆಗಿದೆ ಎಂದು ಗಡ್ಕರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ:</strong> ಭಾರತವು ‘ಸೂಪರ್ ಪವರ್’ ಮತ್ತು ‘ವಿಶ್ವಗುರು’ ಎಂದು ಪುನರುಚ್ಛರಿಸಿರುವ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ‘ದೇಶವು ಪ್ರತಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದು, ಇಡೀ ವಿಶ್ವವೇ ನಮ್ಮ ಧ್ವನಿಯನ್ನು ಆಲಿಸುತ್ತಿದೆ’ ಎಂದು ಹೇಳಿದ್ದಾರೆ. </p>.<p>ಗುರುವಾರ ಇಲ್ಲಿ ರಾಷ್ಟ್ರ ನಿರ್ಮಾಣ ಸಮಿತಿ ವತಿಯಿಂದ ನಡೆದ ‘ಅಖಂಡ ಭಾರತ ಸಂಕಲ್ಪ ದಿನ’ದಲ್ಲಿ ಅವರು ಮಾತನಾಡಿದರು. </p>.<p>‘ನಾವು ಎಲ್ಲ ಕ್ಷೇತ್ರಗಳಲ್ಲಿ ಪಾರಮ್ಯ ಸಾಧಿಸಿದರೆ ಇಡೀ ವಿಶ್ವವೇ ನಮ್ಮ ಧ್ವನಿ ಆಲಿಸುತ್ತದೆ’ ಎಂದ ಅವರು, ‘ಯಾವ ದೇಶವು ರಕ್ಷಣಾ ಕ್ಷೇತ್ರ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದೆಯೋ ಮತ್ತು ಯಾವ ದೇಶದ ಜನರು ದೇಶಭಕ್ತರು, ಸುಸಂಸ್ಕೃತರೂ ಆಗಿದ್ದಾರೋ ಆ ದೇಶವು ‘ವಿಶ್ವಗುರು’ ಎನಿಸಿಕೊಳ್ಳುತ್ತದೆ’ ಎಂದರು. </p>.<p>ಆ.14ರಂದು ದೇಶ ವಿಭಜನೆಯ ಕರಾಳ ನೆನಪಿನ ದಿನ ಆಚರಿಸಲಾಗುತ್ತದೆ. ಈ ವಿಭಜನೆ ಅಸ್ವಾಭಾವಿಕ. ಆದರೆ, ಈ ದಿನವು ದೇಶವನ್ನು ಒಗ್ಗೂಡಿಸಿದ ಅಖಂಡತೆಯ ದಿನವೂ ಆಗಿದೆ ಎಂದು ಗಡ್ಕರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>