<p><strong>ಲಾಹೋರ್</strong>: ಅಫ್ಗಾನಿಸ್ತಾನದ ಮೂವರು ಯುವ ಕ್ರಿಕೆಟಿಗರ ಸಾವಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೀಡಿರುವ ಹೇಳಿಕೆಯು ‘ನಿರ್ದಿಷ್ಟ ಆಯ್ಕೆ’ ಮತ್ತು ‘ಪಕ್ಷಪಾತ’ದ ಸ್ವರೂಪದಿಂದ ಕೂಡಿದೆ ಎಂದು ಪಾಕಿಸ್ತಾನದ ಸಚಿವ ಅತಾ ತರಾರ್ ಹೇಳಿದ್ದಾರೆ.</p>.<p>ಪಾಕಿಸ್ತಾನವು, ಅಫ್ಗಾನಿಸ್ತಾನ ಗಡಿಯ ಪಕ್ತಿಕಾ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಈ ಮೂವರು ಸೇರಿ ಎಂಟು ಮಂದಿ ಸಾವಿಗೀಡಾಗಿದ್ದರು. ವೈಮಾನಿಕ ದಾಳಿಯಲ್ಲಿ ಕ್ರಿಕೆಟಿಗರ ಸಾವಿಗೆ ಸಂತಾಪ ಸೂಚಿಸಿ, ಅಫ್ಗನ್ ಕ್ರಿಕೆಟ್ ಮಂಡಳಿ ಜೊತೆ ನಿಲ್ಲುವುದಾಗಿ ಶನಿವಾರ ಐಸಿಸಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿಕೆಗಳನ್ನು ನೀಡಿದ್ದವು. ಆದರೆ ಪಾಕಿಸ್ತಾನದ ಹೆಸರು ಉಲ್ಲೇಖಿಸಿರಲಿಲ್ಲ.</p>.<p>ದಾಳಿಯಿಂದಲೇ ಆಟಗಾರರು ಸತ್ತಿದ್ದಾರೆನ್ನುವ ಅಫ್ಗಾನಿಸ್ತಾನ ಮಂಡಳಿಯ ಹೇಳಿಕೆ ಖಚಿತಪಡಿಸುವ ಗೋಜಿಗೂ ಐಸಿಸಿ ಮುಂದಾಗಲಿಲ್ಲ ಎಂದು ತರಾರ್ ಭಾನುವಾರ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನವೇ ವರ್ಷಗಳಿಂದ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್</strong>: ಅಫ್ಗಾನಿಸ್ತಾನದ ಮೂವರು ಯುವ ಕ್ರಿಕೆಟಿಗರ ಸಾವಿಗೆ ಸಂಬಂಧಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ನೀಡಿರುವ ಹೇಳಿಕೆಯು ‘ನಿರ್ದಿಷ್ಟ ಆಯ್ಕೆ’ ಮತ್ತು ‘ಪಕ್ಷಪಾತ’ದ ಸ್ವರೂಪದಿಂದ ಕೂಡಿದೆ ಎಂದು ಪಾಕಿಸ್ತಾನದ ಸಚಿವ ಅತಾ ತರಾರ್ ಹೇಳಿದ್ದಾರೆ.</p>.<p>ಪಾಕಿಸ್ತಾನವು, ಅಫ್ಗಾನಿಸ್ತಾನ ಗಡಿಯ ಪಕ್ತಿಕಾ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಈ ಮೂವರು ಸೇರಿ ಎಂಟು ಮಂದಿ ಸಾವಿಗೀಡಾಗಿದ್ದರು. ವೈಮಾನಿಕ ದಾಳಿಯಲ್ಲಿ ಕ್ರಿಕೆಟಿಗರ ಸಾವಿಗೆ ಸಂತಾಪ ಸೂಚಿಸಿ, ಅಫ್ಗನ್ ಕ್ರಿಕೆಟ್ ಮಂಡಳಿ ಜೊತೆ ನಿಲ್ಲುವುದಾಗಿ ಶನಿವಾರ ಐಸಿಸಿ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿಕೆಗಳನ್ನು ನೀಡಿದ್ದವು. ಆದರೆ ಪಾಕಿಸ್ತಾನದ ಹೆಸರು ಉಲ್ಲೇಖಿಸಿರಲಿಲ್ಲ.</p>.<p>ದಾಳಿಯಿಂದಲೇ ಆಟಗಾರರು ಸತ್ತಿದ್ದಾರೆನ್ನುವ ಅಫ್ಗಾನಿಸ್ತಾನ ಮಂಡಳಿಯ ಹೇಳಿಕೆ ಖಚಿತಪಡಿಸುವ ಗೋಜಿಗೂ ಐಸಿಸಿ ಮುಂದಾಗಲಿಲ್ಲ ಎಂದು ತರಾರ್ ಭಾನುವಾರ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನವೇ ವರ್ಷಗಳಿಂದ ಭಯೋತ್ಪಾದನೆಯ ಬಲಿಪಶುವಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>