<p><strong>ಮುಂಬೈ</strong>: ‘ಭಾರತವು ವಿವಿಧತೆಯನ್ನು ಆಚರಿಸುವ ದೇಶವಾಗಿದೆ. ನಾವು ಯಾರನ್ನೂ ಹೊರಗಿಡುವುದಿಲ್ಲ. ನಮ್ಮ ರಾಷ್ಟ್ರಧ್ವಜದ ಚಕ್ರವು ವಾಸ್ತವದಲ್ಲಿ ಧರ್ಮ ಚಕ್ರವಾಗಿದೆ. ಇದು ಸಮಾಜದ ಎಲ್ಲವನ್ನು ಬೆಸೆಯುವ ಮೂಲಭೂತ ತತ್ವದ ಪ್ರತಿಬಿಂಬ’ ಎಂದು ಆರ್ಎಸ್ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಹೇಳಿದರು.</p>.<p>ಬುಧವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತವನ್ನು ವೈವಿಧ್ಯಮಯ ಸಂಸ್ಕೃತಿಗಳ ದೇಶವೆಂದು ವರ್ಣಿಸಲಾಗಿದೆ. ಆದರೆ, ಅದು ತಪ್ಪು. ನಾವು ವಿಭಿನ್ನ ಸಂಸ್ಕೃತಿಗಳನ್ನು ಹೊಂದಿಲ್ಲ, ನಮ್ಮಲ್ಲಿ ಇರುವುದು ಏಕ ಸಂಸ್ಕೃತಿ. ಆದರೆ, ಇದರ ಆಚರಣೆಯಷ್ಟೇ ವಿವಿಧತೆಯಿಂದ ಕೂಡಿದೆ’ ಎಂದು ಹೇಳಿದರು.</p>.<p>‘ಸಮಾಜದಲ್ಲಿ ಅನೇಕ ವ್ಯವಸ್ಥೆಗಳು ಸಮಾಜದ ನಿಯಮಗಳಾನುಸಾರ ಕಾರ್ಯನಿರ್ವಹಿಸುತ್ತವೆ. ಹಾಗಾಗಿಯೇ ನಮ್ಮ ಸಮಾಜವು ಧರ್ಮಧಿಷ್ಟ (ಧರ್ಮದ ಮೇಲೆ ಸ್ಥಾಪಿತವಾದ) ಸಮಾಜವೆನಿಸಿದೆ. ಆದರೆ, ಈ ಧರ್ಮನಿರಪೇಕ್ಷ (ಜಾತ್ಯತೀತ) ಎಂಬ ಪದವು ಎಲ್ಲಿಂದ ಬಂದಿದೆಯೋ ತಿಳಿಯದು’ ಎಂದು ವೈದ್ಯ ಹೇಳಿದರು.</p>.<p>‘ಪ್ರತಿ ಆತ್ಮವೂ ದೈವಿಕವಾದುದು. ಇದು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ. ಇದರಲ್ಲಿ ನಮ್ಮ ದೇಶ ಮಾತ್ರ ನಂಬಿಕೆ ಇರಿಸಿದೆ. ಬೇರೆ ಯಾವ ದೇಶವೂ ಈ ರೀತಿ ನಂಬಿಕೆ ಇರಿಸಿಲ್ಲ. ಅಮೆರಿಕದಂತಹ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಅಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆಯಲು ಸಾಕಷ್ಟು ಹೋರಾಟ ನಡೆಸಬೇಕಾಯಿತು’ ಎಂದು ಅವರು ಹೇಳಿದರು.</p>.<p>ಸ್ವಾತಂತ್ರ್ಯ ಹೋರಾಟಗಾರ ವಿನೋಬಾ ಭಾವೆ ಅವರನ್ನು ಸ್ಮರಿಸಿದ ವೈದ್ಯ, ‘ನಾವು ಗುಲಾಮರಾಗಿದ್ದಾಗ ಸ್ವರಾಜ್ಯವು ಮುಖ್ಯವಾಗಿತ್ತು. ಈಗ ನಾವು ಸ್ವರಾಜ್ಯವನ್ನು ಸಾಧಿಸಿದ್ದೇವೆ; ನಾವು ಜನರಿಗೆ ಈಗ ಅವರ ಶಕ್ತಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಮಾಜವು ಸರ್ಕಾರದ ಮೇಲೆ ಹೆಚ್ಚು ಅವಲಂಬಿತವಾದಾಗ, ಅದು ದುರ್ಬಲವಾಗುತ್ತದೆ. ಸರ್ಕಾರದ ಮೇಲೆ ಕಡಿಮೆ ಅವಲಂಬಿತವಾಗಿರುವ ಸಮಾಜ ‘ಸ್ವದೇಶಿ’ ಸಮಾಜ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ‘ಭಾರತವು ವಿವಿಧತೆಯನ್ನು ಆಚರಿಸುವ ದೇಶವಾಗಿದೆ. ನಾವು ಯಾರನ್ನೂ ಹೊರಗಿಡುವುದಿಲ್ಲ. ನಮ್ಮ ರಾಷ್ಟ್ರಧ್ವಜದ ಚಕ್ರವು ವಾಸ್ತವದಲ್ಲಿ ಧರ್ಮ ಚಕ್ರವಾಗಿದೆ. ಇದು ಸಮಾಜದ ಎಲ್ಲವನ್ನು ಬೆಸೆಯುವ ಮೂಲಭೂತ ತತ್ವದ ಪ್ರತಿಬಿಂಬ’ ಎಂದು ಆರ್ಎಸ್ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಹೇಳಿದರು.</p>.<p>ಬುಧವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತವನ್ನು ವೈವಿಧ್ಯಮಯ ಸಂಸ್ಕೃತಿಗಳ ದೇಶವೆಂದು ವರ್ಣಿಸಲಾಗಿದೆ. ಆದರೆ, ಅದು ತಪ್ಪು. ನಾವು ವಿಭಿನ್ನ ಸಂಸ್ಕೃತಿಗಳನ್ನು ಹೊಂದಿಲ್ಲ, ನಮ್ಮಲ್ಲಿ ಇರುವುದು ಏಕ ಸಂಸ್ಕೃತಿ. ಆದರೆ, ಇದರ ಆಚರಣೆಯಷ್ಟೇ ವಿವಿಧತೆಯಿಂದ ಕೂಡಿದೆ’ ಎಂದು ಹೇಳಿದರು.</p>.<p>‘ಸಮಾಜದಲ್ಲಿ ಅನೇಕ ವ್ಯವಸ್ಥೆಗಳು ಸಮಾಜದ ನಿಯಮಗಳಾನುಸಾರ ಕಾರ್ಯನಿರ್ವಹಿಸುತ್ತವೆ. ಹಾಗಾಗಿಯೇ ನಮ್ಮ ಸಮಾಜವು ಧರ್ಮಧಿಷ್ಟ (ಧರ್ಮದ ಮೇಲೆ ಸ್ಥಾಪಿತವಾದ) ಸಮಾಜವೆನಿಸಿದೆ. ಆದರೆ, ಈ ಧರ್ಮನಿರಪೇಕ್ಷ (ಜಾತ್ಯತೀತ) ಎಂಬ ಪದವು ಎಲ್ಲಿಂದ ಬಂದಿದೆಯೋ ತಿಳಿಯದು’ ಎಂದು ವೈದ್ಯ ಹೇಳಿದರು.</p>.<p>‘ಪ್ರತಿ ಆತ್ಮವೂ ದೈವಿಕವಾದುದು. ಇದು ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಅನ್ವಯಿಸುತ್ತದೆ. ಇದರಲ್ಲಿ ನಮ್ಮ ದೇಶ ಮಾತ್ರ ನಂಬಿಕೆ ಇರಿಸಿದೆ. ಬೇರೆ ಯಾವ ದೇಶವೂ ಈ ರೀತಿ ನಂಬಿಕೆ ಇರಿಸಿಲ್ಲ. ಅಮೆರಿಕದಂತಹ ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಅಲ್ಲಿ ಮಹಿಳೆಯರು ಮತದಾನದ ಹಕ್ಕು ಪಡೆಯಲು ಸಾಕಷ್ಟು ಹೋರಾಟ ನಡೆಸಬೇಕಾಯಿತು’ ಎಂದು ಅವರು ಹೇಳಿದರು.</p>.<p>ಸ್ವಾತಂತ್ರ್ಯ ಹೋರಾಟಗಾರ ವಿನೋಬಾ ಭಾವೆ ಅವರನ್ನು ಸ್ಮರಿಸಿದ ವೈದ್ಯ, ‘ನಾವು ಗುಲಾಮರಾಗಿದ್ದಾಗ ಸ್ವರಾಜ್ಯವು ಮುಖ್ಯವಾಗಿತ್ತು. ಈಗ ನಾವು ಸ್ವರಾಜ್ಯವನ್ನು ಸಾಧಿಸಿದ್ದೇವೆ; ನಾವು ಜನರಿಗೆ ಈಗ ಅವರ ಶಕ್ತಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಮಾಜವು ಸರ್ಕಾರದ ಮೇಲೆ ಹೆಚ್ಚು ಅವಲಂಬಿತವಾದಾಗ, ಅದು ದುರ್ಬಲವಾಗುತ್ತದೆ. ಸರ್ಕಾರದ ಮೇಲೆ ಕಡಿಮೆ ಅವಲಂಬಿತವಾಗಿರುವ ಸಮಾಜ ‘ಸ್ವದೇಶಿ’ ಸಮಾಜ’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>