‘ದೇಶದಲ್ಲಿ ಆಳ್ವಿಕೆ ನಡೆಸಿದ್ದ ಆಕ್ರಮಣಕಾರರು ಹೆಸರು ಬದಲಿಸಿರುವ ಪುರಾತನ, ಸಾಂಸ್ಕೃತಿಕ, ಧಾರ್ಮಿಕ ಸ್ಥಳಗಳಿಗೆ ಹಳೆಯ ಹೆಸರುಗಳನ್ನೇ ಇಡಲು ‘ಮರುನಾಮಕರಣ ಆಯೋಗ’ ರಚಿಸಬೇಕು’ ಎಂದು ಕೋರಿ ಉಪಾಧ್ಯಾಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಇದನ್ನು ವಜಾಗೊಳಿಸಿತು.