‘ಚರ್ಚೆಯ ವೇಳೆ ಬ್ಯಾಂಕ್ಗಳಿಗೆ ಸಾಲ ತೀರಿಸದೇ ವಂಚನೆ ಎಸಗಿರುವ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವ ಕುರಿತು ಪಟೇಲ್ ಹಾಗೂ ದಕ್ಷಿಣ ಏಷ್ಯಾದ ವಿದೇಶಾಂಗ ಸಚಿವ ಲಾರ್ಡ್ ತಾರಿಖ್ ಅಹಮ್ಮದ್ ಅವರಿಗೆ ಮನವರಿಕೆ ಮಾಡಿದೆವು. ಬ್ರಿಟನ್ನಲ್ಲಿ ಮಲ್ಯ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿರುವುದರ ಕುರಿತೂ ಅವರಿಗೆ ಮಾಹಿತಿ ನೀಡಿದೆವು. ಜೊತೆಗೆ ನೀರವ್ ಮೋದಿ ಹಸ್ತಾಂತರದ ವಿಷಯವೂ ಚರ್ಚೆಯಾಯಿತು. ಈ ವಿಷಯವನ್ನು ಸೂಕ್ಷ್ಮವಾಗಿ ಹಾಗೂ ಗಂಭೀರವಾಗಿ ಇಬ್ಬರೂ ಪರಿಗಣಿಸಿದ್ದಾರೆ’ ಎಂದು ಶ್ರಿಂಗ್ಲಾ ತಿಳಿಸಿದರು.