<p><strong>ನವದೆಹಲಿ:</strong> ಭಾರತ ಮತ್ತು ಬಾಂಗ್ಲಾದೇಶದ ಸಾಂಸ್ಕೃತಿಕ ಇತಿಹಾಸದ ಕೊಂಡಿಯಂತಿದ್ದ ಖ್ಯಾತ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ಅವರ ಶತಮಾನದಷ್ಟು ಹಳೆಯ ಅಜ್ಜನ ಮನೆಯನ್ನು ಬಾಂಗ್ಲಾದೇಶದ ಹಂಗಾಮಿ ಸರ್ಕಾರ ನೆಲಸಮ ಮಾಡಿದೆ. ಇಲ್ಲಿ ಅರೆ ಕಾಂಕ್ರೀಟ್ ಕಟ್ಟಡವೊಂದನ್ನು ಕಟ್ಟಲು ಸರ್ಕಾರ ಮುಂದಾಗಿದೆ.</p>.<p>ಮಧ್ಯಂತರ ಸರ್ಕಾರದ ಈ ಕ್ರಮವನ್ನು ಭಾರತವು ತೀವ್ರವಾಗಿ ಖಂಡಿಸಿದ್ದು, ಇದೊಂದು ‘ತೀವ್ರ ವಿಷಾದದ ವಿಚಾರ’ ಎಂದು ಬಣ್ಣಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದನ್ನು ವಿರೋಧಿಸಿದ್ದಾರೆ. ಎರಡೂ ದೇಶಗಳ ಬಾಂಧವ್ಯವು ಹದಗೆಟ್ಟಿರುವ ಈ ಹೊತ್ತಿನಲ್ಲಿ ಹಂಗಾಮಿ ಸರ್ಕಾರದ ಈ ಕ್ರಮವು ಬೇರೊಂದು ರೀತಿಯ ತಿಕ್ಕಾಟಕ್ಕೆ ನಾಂದಿಯಾಗಿದೆ.</p>.<p>ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಬಾಂಗ್ಲಾ ಸರ್ಕಾರದ ಕ್ರಮಕ್ಕೆ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದೇಶದೊಳಗಿರುವ ಎಲ್ಲ ಹಿಂದೂ ಬೇರುಗಳನ್ನು ಕಿತ್ತೆಸೆಯಲಾಗುತ್ತಿದೆ’ ಎಂದು ಕೆಲವು ಬಾಂಗ್ಲಾದೇಶದ ಧ್ವಜವಿರುವ ಖಾತೆಗಳು ಪೋಸ್ಟ್ ಹಂಚಿಕೊಂಡಿವೆ.</p>.<p class="Subhead">ಟ್ಯಾಗೋರ್ ಪೂರ್ವಜರ ಮನೆಯೂ ಧ್ವಂಸ: ಲೇಖಕ ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಮನೆಯು ಬಾಂಗ್ಲಾದ ಸಿರಾಜ್ಗಂಜ್ ಜಿಲ್ಲೆಯಲ್ಲಿದೆ. ಇದನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಸಿಬ್ಬಂದಿ ಹಾಗೂ ವೀಕ್ಷಕರೊಬ್ಬರ ಮಧ್ಯೆ ನಡೆದಿದ್ದ ಜಗಳದಲ್ಲಿ ವಸ್ತುಸಂಗ್ರಹಾಲಯಕ್ಕೆ ಜೂನ್ನಲ್ಲಿ ಹಾನಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತ ಮತ್ತು ಬಾಂಗ್ಲಾದೇಶದ ಸಾಂಸ್ಕೃತಿಕ ಇತಿಹಾಸದ ಕೊಂಡಿಯಂತಿದ್ದ ಖ್ಯಾತ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ಅವರ ಶತಮಾನದಷ್ಟು ಹಳೆಯ ಅಜ್ಜನ ಮನೆಯನ್ನು ಬಾಂಗ್ಲಾದೇಶದ ಹಂಗಾಮಿ ಸರ್ಕಾರ ನೆಲಸಮ ಮಾಡಿದೆ. ಇಲ್ಲಿ ಅರೆ ಕಾಂಕ್ರೀಟ್ ಕಟ್ಟಡವೊಂದನ್ನು ಕಟ್ಟಲು ಸರ್ಕಾರ ಮುಂದಾಗಿದೆ.</p>.<p>ಮಧ್ಯಂತರ ಸರ್ಕಾರದ ಈ ಕ್ರಮವನ್ನು ಭಾರತವು ತೀವ್ರವಾಗಿ ಖಂಡಿಸಿದ್ದು, ಇದೊಂದು ‘ತೀವ್ರ ವಿಷಾದದ ವಿಚಾರ’ ಎಂದು ಬಣ್ಣಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದನ್ನು ವಿರೋಧಿಸಿದ್ದಾರೆ. ಎರಡೂ ದೇಶಗಳ ಬಾಂಧವ್ಯವು ಹದಗೆಟ್ಟಿರುವ ಈ ಹೊತ್ತಿನಲ್ಲಿ ಹಂಗಾಮಿ ಸರ್ಕಾರದ ಈ ಕ್ರಮವು ಬೇರೊಂದು ರೀತಿಯ ತಿಕ್ಕಾಟಕ್ಕೆ ನಾಂದಿಯಾಗಿದೆ.</p>.<p>ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಬಾಂಗ್ಲಾ ಸರ್ಕಾರದ ಕ್ರಮಕ್ಕೆ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದೇಶದೊಳಗಿರುವ ಎಲ್ಲ ಹಿಂದೂ ಬೇರುಗಳನ್ನು ಕಿತ್ತೆಸೆಯಲಾಗುತ್ತಿದೆ’ ಎಂದು ಕೆಲವು ಬಾಂಗ್ಲಾದೇಶದ ಧ್ವಜವಿರುವ ಖಾತೆಗಳು ಪೋಸ್ಟ್ ಹಂಚಿಕೊಂಡಿವೆ.</p>.<p class="Subhead">ಟ್ಯಾಗೋರ್ ಪೂರ್ವಜರ ಮನೆಯೂ ಧ್ವಂಸ: ಲೇಖಕ ರವೀಂದ್ರನಾಥ ಟ್ಯಾಗೋರ್ ಅವರ ಪೂರ್ವಜರ ಮನೆಯು ಬಾಂಗ್ಲಾದ ಸಿರಾಜ್ಗಂಜ್ ಜಿಲ್ಲೆಯಲ್ಲಿದೆ. ಇದನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಸಿಬ್ಬಂದಿ ಹಾಗೂ ವೀಕ್ಷಕರೊಬ್ಬರ ಮಧ್ಯೆ ನಡೆದಿದ್ದ ಜಗಳದಲ್ಲಿ ವಸ್ತುಸಂಗ್ರಹಾಲಯಕ್ಕೆ ಜೂನ್ನಲ್ಲಿ ಹಾನಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>