ವಿಜಯವಾಡದ ಸಿಂಗ್ ನಗರದ ವಿವೇಕಾನಂದ ಕಾಲೇಜು ಬಳಿ ಪ್ರಚಾರ ನಡೆಸುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಕಲ್ಲೆಸೆದಿದ್ದ. ಪರಿಣಾಮ ಅವರ ಎಡಹುಬ್ಬಿಗೆ ಗಾಯವಾಗಿತ್ತು.
ಕಡಪ ಜಿಲ್ಲೆಯ ಇಡುಪುಲಪಾಯದಿಂದ ಶ್ರೀಕಾಕುಳಂನ ಇಚ್ಚಾಪುರಂವರೆಗೆ ಚುನಾವಣಾ ಪ್ರಚಾರಾರ್ಥವಾಗಿ 21 ದಿನಗಳ ಬಸ್ ಯಾತ್ರೆಯನ್ನು ಜಗನ್ಮೋಹನ್ರೆಡ್ಡಿ ಹಮ್ಮಿಕೊಂಡಿದ್ದು, ಇಂದು ವೀರವಲ್ಲಿ ಕ್ರಾಸ್, ಹನುಮಾನ್ ಜಂಕ್ಷನ್ ಸೇರಿ ಹಲವು ಗ್ರಾಮಗಳಲ್ಲಿ ಸಂಚರಿಸಲಿವೆ.