<p><strong>ಎನ್ಟಿಆರ್ ಜಿಲ್ಲೆ (ಆಂಧ್ರಪ್ರದೇಶ):</strong> ಕಲ್ಲೇಟಿನಿಂದ ಗಾಯಗೊಂಡಿದ್ದ ವೈಎಸ್ಆರ್ಸಿಪಿ ಪಕ್ಷದ ಮುಖ್ಯಸ್ಥರೂ ಆಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಒಂದು ದಿನದ ವಿಶ್ರಾಂತಿ ಬಳಿಕ ಸೋಮವಾರದಿಂದ ಪ್ರಚಾರ ಪುನರಾರಂಭಿಸಿದ್ದಾರೆ. ಇಲ್ಲಿನ ಕೇಸರಪಲ್ಲಿಯಿಂದ ತಮ್ಮ ಬಸ್ ಯಾತ್ರೆಯನ್ನು ಮುಂದುವರಿಸಿದ್ದಾರೆ.</p>.ಕಲ್ಲು ಎಸೆತ: ಆಂಧ್ರ ಸಿ.ಎಂ ಜಗನ್ ಮೋಹನ್ ರೆಡ್ಡಿಗೆ ಗಾಯ.<p>ವಿಜಯವಾಡದ ಸಿಂಗ್ ನಗರದ ವಿವೇಕಾನಂದ ಕಾಲೇಜು ಬಳಿ ಪ್ರಚಾರ ನಡೆಸುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಕಲ್ಲೆಸೆದಿದ್ದ. ಪರಿಣಾಮ ಅವರ ಎಡಹುಬ್ಬಿಗೆ ಗಾಯವಾಗಿತ್ತು.</p><p>ಕಡಪ ಜಿಲ್ಲೆಯ ಇಡುಪುಲಪಾಯದಿಂದ ಶ್ರೀಕಾಕುಳಂನ ಇಚ್ಚಾಪುರಂವರೆಗೆ ಚುನಾವಣಾ ಪ್ರಚಾರಾರ್ಥವಾಗಿ 21 ದಿನಗಳ ಬಸ್ ಯಾತ್ರೆಯನ್ನು ಜಗನ್ಮೋಹನ್ರೆಡ್ಡಿ ಹಮ್ಮಿಕೊಂಡಿದ್ದು, ಇಂದು ವೀರವಲ್ಲಿ ಕ್ರಾಸ್, ಹನುಮಾನ್ ಜಂಕ್ಷನ್ ಸೇರಿ ಹಲವು ಗ್ರಾಮಗಳಲ್ಲಿ ಸಂಚರಿಸಲಿವೆ.</p>.ಆಂಧ್ರಪ್ರದೇಶವನ್ನು ಲೂಟಿ ಮಾಡುತ್ತಿರುವ ಸಿಎಂ ಜಗನ್ ಮೋಹನ್: ಚಂದ್ರಬಾಬು ನಾಯ್ಡು. <p>ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಮೇ 13ಕ್ಕೆ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ.</p> .ಜಗನ್ ನಾಶ ಮಾಡುತ್ತಿರುವ ಆಂಧ್ರವನ್ನು ಉಳಿಸಲು ಕೈಜೋಡಿಸಿದ್ದೇವೆ: ಪವನ್–ನಾಯ್ಡು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎನ್ಟಿಆರ್ ಜಿಲ್ಲೆ (ಆಂಧ್ರಪ್ರದೇಶ):</strong> ಕಲ್ಲೇಟಿನಿಂದ ಗಾಯಗೊಂಡಿದ್ದ ವೈಎಸ್ಆರ್ಸಿಪಿ ಪಕ್ಷದ ಮುಖ್ಯಸ್ಥರೂ ಆಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಒಂದು ದಿನದ ವಿಶ್ರಾಂತಿ ಬಳಿಕ ಸೋಮವಾರದಿಂದ ಪ್ರಚಾರ ಪುನರಾರಂಭಿಸಿದ್ದಾರೆ. ಇಲ್ಲಿನ ಕೇಸರಪಲ್ಲಿಯಿಂದ ತಮ್ಮ ಬಸ್ ಯಾತ್ರೆಯನ್ನು ಮುಂದುವರಿಸಿದ್ದಾರೆ.</p>.ಕಲ್ಲು ಎಸೆತ: ಆಂಧ್ರ ಸಿ.ಎಂ ಜಗನ್ ಮೋಹನ್ ರೆಡ್ಡಿಗೆ ಗಾಯ.<p>ವಿಜಯವಾಡದ ಸಿಂಗ್ ನಗರದ ವಿವೇಕಾನಂದ ಕಾಲೇಜು ಬಳಿ ಪ್ರಚಾರ ನಡೆಸುತ್ತಿದ್ದ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಕಲ್ಲೆಸೆದಿದ್ದ. ಪರಿಣಾಮ ಅವರ ಎಡಹುಬ್ಬಿಗೆ ಗಾಯವಾಗಿತ್ತು.</p><p>ಕಡಪ ಜಿಲ್ಲೆಯ ಇಡುಪುಲಪಾಯದಿಂದ ಶ್ರೀಕಾಕುಳಂನ ಇಚ್ಚಾಪುರಂವರೆಗೆ ಚುನಾವಣಾ ಪ್ರಚಾರಾರ್ಥವಾಗಿ 21 ದಿನಗಳ ಬಸ್ ಯಾತ್ರೆಯನ್ನು ಜಗನ್ಮೋಹನ್ರೆಡ್ಡಿ ಹಮ್ಮಿಕೊಂಡಿದ್ದು, ಇಂದು ವೀರವಲ್ಲಿ ಕ್ರಾಸ್, ಹನುಮಾನ್ ಜಂಕ್ಷನ್ ಸೇರಿ ಹಲವು ಗ್ರಾಮಗಳಲ್ಲಿ ಸಂಚರಿಸಲಿವೆ.</p>.ಆಂಧ್ರಪ್ರದೇಶವನ್ನು ಲೂಟಿ ಮಾಡುತ್ತಿರುವ ಸಿಎಂ ಜಗನ್ ಮೋಹನ್: ಚಂದ್ರಬಾಬು ನಾಯ್ಡು. <p>ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಮೇ 13ಕ್ಕೆ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ.</p> .ಜಗನ್ ನಾಶ ಮಾಡುತ್ತಿರುವ ಆಂಧ್ರವನ್ನು ಉಳಿಸಲು ಕೈಜೋಡಿಸಿದ್ದೇವೆ: ಪವನ್–ನಾಯ್ಡು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>