<p><strong>ಚಂಡಿಗಡ: </strong>ಬಿಜೆಪಿಯ ಟಿಕೆಟ್ ವಂಚಿತರುನಿರಾಶರಾಗಬೇಕಿಲ್ಲ, ಅವರನ್ನು ಪಕ್ಷ ಮರೆಯುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ಲಾಲ್ಖಟ್ಟರ್ಮಂಗಳವಾರ ತಿಳಿಸಿದ್ದಾರೆ.</p>.<p>ಯಾವುದೇ ರಾಜಕೀಯ ಪಕ್ಷ ತಾಯಿ ಇದ್ದಂತೆ, ಬಿಜೆಪಿಯ ಟಿಕೆಟ್ ವಂಚಿತರು ಬೇರೆ ಪಕ್ಷಕ್ಕೆ ಹೋಗುವುದಿಲ್ಲಹಾಗೇಚುನಾವಣೆ ಬಳಿಕ ಪಕ್ಷ ಅವರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.</p>.<p><em><strong>ಇದನ್ನೂ ಓದಿ:</strong></em><a href="https://www.prajavani.net/stories/national/party-centre-invariably-wrests-668001.html"><em><strong>ಹರಿಯಾಣ: ಬಿಜೆಪಿ ಗೆಲ್ಲುವ ನೆಚ್ಚಿನ ಪಕ್ಷ</strong></em></a></p>.<p>ನಾಮಪತ್ರಸಲ್ಲಿಸುವುದಕ್ಕೂಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಟ್ಟರ್ ಟಿಕೆಟ್ ವಂಚಿತರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.</p>.<p>ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯ ಕಾವುರಂಗೇರುತ್ತಿದ್ದುಬಿಜೆಪಿಯು 78 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು ಇಬ್ಬರು ಸಚಿವರುಸೇರಿದಂತೆ7 ಜನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ.</p>.<p>ಸಚಿವರಾದ ವಿಪುಲ್ಗೋಯಲ್, ರಾವ್ನರ್ಬಿರ್ಸಿಂಗ್ ಹಾಗೂ ವಿಧಾನಸಭೆ ಉಪಾಧ್ಯಕ್ಷರಾದ ಸಂತೋಷ್ ಯಾದವ್ ಅವರಿಗೆ ಟಿಕೇಟ್ ನಿರಾಕರಿಸಲಾಗಿದೆ. ಇವರ ಜೊತೆಗೆ 7 ಜನ ಹಾಲಿ ಶಾಸಕರಿಗೂ ಟಿಕೆಟ್ ನೀಡಲಾಗಿಲ್ಲ.</p>.<p><em><strong>ಇದನ್ನೂ ಓದಿ:<a href="https://www.prajavani.net/stories/national/hariyana-bypoll-668710.html">ಹರಿಯಾಣ: ಕ್ರೀಡಾಳುಗಳಿಗೆ ಬಿಜೆಪಿ ಮಣೆ; ಯೋಗೇಶ್ವರ ದತ್, ಬಬಿತಾ ಪೋಗಟ್ಗೆ ಟಿಕೆಟ್</a></strong></em></p>.<p>90 ಸ್ಥಾನಗಳ ಪೈಕಿಬಿಜೆಪಿ78 ಸ್ಥಾನಗಳಿಗೆ ಅಭ್ಯರ್ಥಿಗಳನ್ನುಅಂತಿಮಗೊಳಿಸಿದೆ. ಒಂದೆರಡು ದಿನಗಳಲ್ಲಿ ಉಳಿದ 12 ಸ್ಥಾನಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದುಬಿಜೆಪಿಹಿರಿಯ ನಾಯಕರು ಹೇಳಿದ್ದಾರೆ.</p>.<p>ಈ ಸಲ ಮೂವರು ಒಲಿಂಪಿಕ್ ಕ್ರೀಡಾಪಟುಗಳಿಗೆಬಿಜೆಪಿಟಿಕೆಟ್ ನೀಡಿದ್ದು ಅವರುಗೆಲ್ಲಲಿದ್ದಾರೆಎಂಬ ವಿಶ್ವಾಸವನ್ನುಬಿಜೆಪಿನಾಯಕರು ವ್ಯಕ್ತಪಡಿಸಿದ್ದಾರೆ.</p>.<p>2014ರವಿಧಾನಸಭಾಚುನಾವಣೆಯಲ್ಲಿಬಿಜೆಪಿ47 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತವನ್ನು ಪಡೆದಿತ್ತು. ಆದರೆಈ ಬಾರಿ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನುಬಿಜೆಪಿಹೊಂದಿದೆ.</p>.<p><em><strong>ಇದನ್ನೂ ಓದಿ:<a href="https://www.prajavani.net/stories/national/old-punjab-allies-forge-new-667702.html">ಹರಿಯಾಣ: ಬಿಜೆಪಿ ಜತೆ ಎಸ್ಎಡಿ ಮೈತ್ರಿ ಇಲ್ಲ</a></strong></em></p>.<p>ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 21ರಂದು ನಡೆಯಲಿರುವ ಚುನಾವಣೆಯುಅಧಿಕಾರಾರೂಢಬಿಜೆಪಿಮತ್ತು ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಗಳ ಮೈತ್ರಿಯ ನಡುವಿನ ನೇರಹಣಾಹಣಿಯಾಗಲಿದೆ.</p>.<p>ಹರಿಯಾಣದಲ್ಲಿ ಕಾಂಗ್ರೆಸ್ಪಕ್ಷವು ಗಳಿಸುವ ಸ್ಥಾನಗಳ ಸಂಖ್ಯೆಇಳಿಮುಖವಾಗುತ್ತಿದ್ದರೂಕಳೆದ ಕೆಲವು ವರ್ಷಗಳಿಂದ ಪಕ್ಷದಮತಪ್ರಮಾಣವುಏರಿಕೆಯಾಗುತ್ತಲೇಇದೆ. 2014ರ ಲೋಕಸಭಾ ಚುನಾವಣೆಯಲ್ಲಿಶೇ22.99ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್, 2019ರ ಚುನಾವಣೆಯಲ್ಲಿ ಅದನ್ನುಶೇ29ಕ್ಕೆಏರಿಸಿಕೊಂಡಿತ್ತು. ಈ ಏರಿಕೆಯನ್ನು ಸ್ಥಾನಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಸಾಕಷ್ಟು ಪ್ರಯತ್ನ ಮಾಡುತ್ತಿದೆ.</p>.<p><em><strong>ಇದನ್ನೂ ಓದಿ:<a href="https://www.prajavani.net/stories/national/haryana-inld-survival-667518.html">ಹರಿಯಾಣ: ಐಎನ್ಎಲ್ಡಿ ಉಳಿವೇ ಕಷ್ಟ</a></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡಿಗಡ: </strong>ಬಿಜೆಪಿಯ ಟಿಕೆಟ್ ವಂಚಿತರುನಿರಾಶರಾಗಬೇಕಿಲ್ಲ, ಅವರನ್ನು ಪಕ್ಷ ಮರೆಯುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ಲಾಲ್ಖಟ್ಟರ್ಮಂಗಳವಾರ ತಿಳಿಸಿದ್ದಾರೆ.</p>.<p>ಯಾವುದೇ ರಾಜಕೀಯ ಪಕ್ಷ ತಾಯಿ ಇದ್ದಂತೆ, ಬಿಜೆಪಿಯ ಟಿಕೆಟ್ ವಂಚಿತರು ಬೇರೆ ಪಕ್ಷಕ್ಕೆ ಹೋಗುವುದಿಲ್ಲಹಾಗೇಚುನಾವಣೆ ಬಳಿಕ ಪಕ್ಷ ಅವರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.</p>.<p><em><strong>ಇದನ್ನೂ ಓದಿ:</strong></em><a href="https://www.prajavani.net/stories/national/party-centre-invariably-wrests-668001.html"><em><strong>ಹರಿಯಾಣ: ಬಿಜೆಪಿ ಗೆಲ್ಲುವ ನೆಚ್ಚಿನ ಪಕ್ಷ</strong></em></a></p>.<p>ನಾಮಪತ್ರಸಲ್ಲಿಸುವುದಕ್ಕೂಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಟ್ಟರ್ ಟಿಕೆಟ್ ವಂಚಿತರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.</p>.<p>ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯ ಕಾವುರಂಗೇರುತ್ತಿದ್ದುಬಿಜೆಪಿಯು 78 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು ಇಬ್ಬರು ಸಚಿವರುಸೇರಿದಂತೆ7 ಜನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ.</p>.<p>ಸಚಿವರಾದ ವಿಪುಲ್ಗೋಯಲ್, ರಾವ್ನರ್ಬಿರ್ಸಿಂಗ್ ಹಾಗೂ ವಿಧಾನಸಭೆ ಉಪಾಧ್ಯಕ್ಷರಾದ ಸಂತೋಷ್ ಯಾದವ್ ಅವರಿಗೆ ಟಿಕೇಟ್ ನಿರಾಕರಿಸಲಾಗಿದೆ. ಇವರ ಜೊತೆಗೆ 7 ಜನ ಹಾಲಿ ಶಾಸಕರಿಗೂ ಟಿಕೆಟ್ ನೀಡಲಾಗಿಲ್ಲ.</p>.<p><em><strong>ಇದನ್ನೂ ಓದಿ:<a href="https://www.prajavani.net/stories/national/hariyana-bypoll-668710.html">ಹರಿಯಾಣ: ಕ್ರೀಡಾಳುಗಳಿಗೆ ಬಿಜೆಪಿ ಮಣೆ; ಯೋಗೇಶ್ವರ ದತ್, ಬಬಿತಾ ಪೋಗಟ್ಗೆ ಟಿಕೆಟ್</a></strong></em></p>.<p>90 ಸ್ಥಾನಗಳ ಪೈಕಿಬಿಜೆಪಿ78 ಸ್ಥಾನಗಳಿಗೆ ಅಭ್ಯರ್ಥಿಗಳನ್ನುಅಂತಿಮಗೊಳಿಸಿದೆ. ಒಂದೆರಡು ದಿನಗಳಲ್ಲಿ ಉಳಿದ 12 ಸ್ಥಾನಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದುಬಿಜೆಪಿಹಿರಿಯ ನಾಯಕರು ಹೇಳಿದ್ದಾರೆ.</p>.<p>ಈ ಸಲ ಮೂವರು ಒಲಿಂಪಿಕ್ ಕ್ರೀಡಾಪಟುಗಳಿಗೆಬಿಜೆಪಿಟಿಕೆಟ್ ನೀಡಿದ್ದು ಅವರುಗೆಲ್ಲಲಿದ್ದಾರೆಎಂಬ ವಿಶ್ವಾಸವನ್ನುಬಿಜೆಪಿನಾಯಕರು ವ್ಯಕ್ತಪಡಿಸಿದ್ದಾರೆ.</p>.<p>2014ರವಿಧಾನಸಭಾಚುನಾವಣೆಯಲ್ಲಿಬಿಜೆಪಿ47 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತವನ್ನು ಪಡೆದಿತ್ತು. ಆದರೆಈ ಬಾರಿ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನುಬಿಜೆಪಿಹೊಂದಿದೆ.</p>.<p><em><strong>ಇದನ್ನೂ ಓದಿ:<a href="https://www.prajavani.net/stories/national/old-punjab-allies-forge-new-667702.html">ಹರಿಯಾಣ: ಬಿಜೆಪಿ ಜತೆ ಎಸ್ಎಡಿ ಮೈತ್ರಿ ಇಲ್ಲ</a></strong></em></p>.<p>ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 21ರಂದು ನಡೆಯಲಿರುವ ಚುನಾವಣೆಯುಅಧಿಕಾರಾರೂಢಬಿಜೆಪಿಮತ್ತು ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಗಳ ಮೈತ್ರಿಯ ನಡುವಿನ ನೇರಹಣಾಹಣಿಯಾಗಲಿದೆ.</p>.<p>ಹರಿಯಾಣದಲ್ಲಿ ಕಾಂಗ್ರೆಸ್ಪಕ್ಷವು ಗಳಿಸುವ ಸ್ಥಾನಗಳ ಸಂಖ್ಯೆಇಳಿಮುಖವಾಗುತ್ತಿದ್ದರೂಕಳೆದ ಕೆಲವು ವರ್ಷಗಳಿಂದ ಪಕ್ಷದಮತಪ್ರಮಾಣವುಏರಿಕೆಯಾಗುತ್ತಲೇಇದೆ. 2014ರ ಲೋಕಸಭಾ ಚುನಾವಣೆಯಲ್ಲಿಶೇ22.99ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್, 2019ರ ಚುನಾವಣೆಯಲ್ಲಿ ಅದನ್ನುಶೇ29ಕ್ಕೆಏರಿಸಿಕೊಂಡಿತ್ತು. ಈ ಏರಿಕೆಯನ್ನು ಸ್ಥಾನಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಸಾಕಷ್ಟು ಪ್ರಯತ್ನ ಮಾಡುತ್ತಿದೆ.</p>.<p><em><strong>ಇದನ್ನೂ ಓದಿ:<a href="https://www.prajavani.net/stories/national/haryana-inld-survival-667518.html">ಹರಿಯಾಣ: ಐಎನ್ಎಲ್ಡಿ ಉಳಿವೇ ಕಷ್ಟ</a></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>