<p><strong>ಭೂಪಾಲ್: ‘</strong>ಕುರಾನ್ನೊಂದಿಗೆ ಭಗವದ್ಗೀತೆಯನ್ನೂ ಓದುವುದರಿಂದ ಜ್ಞಾನೋದಯಕ್ಕೆ ಸಹಕಾರಿಯಾಗಲಿದೆ’ ಎಂದು ಹೆಚ್ಚುವರಿ ಡಿಜಿಪಿ (ತರಬೇತಿ) ರಾಜಾ ಬಾಬು ಸಿಂಗ್ ಅಭಿಪ್ರಾಯಪಟ್ಟರು.</p>.<p>ಮದರಸಾವೊಂದರಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಈ ಬಗ್ಗೆ ರಾಜಾ ಬಾಬು ಅವರು ‘ಪಿಟಿಐ’ ಸುದ್ದಿ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಂಡರು. ‘ಇಲ್ಲಿನ ಮೌಲಾನಾ ನನ್ನ ಹಳೆಯ ಮಿತ್ರರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಂತೆ ಅವರು ಮನವಿ ಮಾಡಿದ್ದರು’ ಎಂದರು.</p>.<p class="bodytext">‘ಕಾರ್ಯಕ್ರಮದಲ್ಲಿ ಮಾತನಾಡಿದ ನಾನು, ‘ಭಗವದ್ಗೀತೆಯು ಇಡೀ ಮಾನವಕುಲವನ್ನು ಶತಮಾನಗಳಿಂದ ಜ್ಞಾನ ನೀಡುತ್ತಲೇ ಬಂದಿದೆ. ಆದ್ದರಿಂದ, ಕುರಾನ್ನೊಂದಿಗೆ ಭಗವದ್ಗೀತೆಯನ್ನೂ ಓದಿ. ಇದೊಂದು ದೊಡ್ಡ ದೇಶ. ಇಲ್ಲಿನ ಏಕತೆ, ಸಮಗ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದೆ’ ಎಂದರು.</p>.<p>‘ರಾಜ್ಯದಲ್ಲಿರುವ ಎಲ್ಲ ಪೊಲೀಸ್ ತರಬೇತಿ ಕೇಂದ್ರಗಳಲ್ಲಿಯೂ ಭಗವದ್ಗೀತೆ ಮತ್ತು ರಾಮಚರಿತ ಮಾನಸ ಕೃತಿಗಳನ್ನು ಓದುವ ಸಮಯವನ್ನು ನಿಗದಿ ಮಾಡಬೇಕು. ಇದರಿಂದ ತರಬೇತಿ ಪಡೆಯುತ್ತಿರುವವರು ನೀತಿ ಮಾರ್ಗದಲ್ಲಿ ಸಾಗಬಹುದು’ ಎಂದು ರಾಜಾ ಬಾಬು ಸಿಂಗ್ ಅವರು ಈ ಹಿಂದೆ ಹೇಳಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೂಪಾಲ್: ‘</strong>ಕುರಾನ್ನೊಂದಿಗೆ ಭಗವದ್ಗೀತೆಯನ್ನೂ ಓದುವುದರಿಂದ ಜ್ಞಾನೋದಯಕ್ಕೆ ಸಹಕಾರಿಯಾಗಲಿದೆ’ ಎಂದು ಹೆಚ್ಚುವರಿ ಡಿಜಿಪಿ (ತರಬೇತಿ) ರಾಜಾ ಬಾಬು ಸಿಂಗ್ ಅಭಿಪ್ರಾಯಪಟ್ಟರು.</p>.<p>ಮದರಸಾವೊಂದರಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಈ ಬಗ್ಗೆ ರಾಜಾ ಬಾಬು ಅವರು ‘ಪಿಟಿಐ’ ಸುದ್ದಿ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಂಡರು. ‘ಇಲ್ಲಿನ ಮೌಲಾನಾ ನನ್ನ ಹಳೆಯ ಮಿತ್ರರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಂತೆ ಅವರು ಮನವಿ ಮಾಡಿದ್ದರು’ ಎಂದರು.</p>.<p class="bodytext">‘ಕಾರ್ಯಕ್ರಮದಲ್ಲಿ ಮಾತನಾಡಿದ ನಾನು, ‘ಭಗವದ್ಗೀತೆಯು ಇಡೀ ಮಾನವಕುಲವನ್ನು ಶತಮಾನಗಳಿಂದ ಜ್ಞಾನ ನೀಡುತ್ತಲೇ ಬಂದಿದೆ. ಆದ್ದರಿಂದ, ಕುರಾನ್ನೊಂದಿಗೆ ಭಗವದ್ಗೀತೆಯನ್ನೂ ಓದಿ. ಇದೊಂದು ದೊಡ್ಡ ದೇಶ. ಇಲ್ಲಿನ ಏಕತೆ, ಸಮಗ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದೆ’ ಎಂದರು.</p>.<p>‘ರಾಜ್ಯದಲ್ಲಿರುವ ಎಲ್ಲ ಪೊಲೀಸ್ ತರಬೇತಿ ಕೇಂದ್ರಗಳಲ್ಲಿಯೂ ಭಗವದ್ಗೀತೆ ಮತ್ತು ರಾಮಚರಿತ ಮಾನಸ ಕೃತಿಗಳನ್ನು ಓದುವ ಸಮಯವನ್ನು ನಿಗದಿ ಮಾಡಬೇಕು. ಇದರಿಂದ ತರಬೇತಿ ಪಡೆಯುತ್ತಿರುವವರು ನೀತಿ ಮಾರ್ಗದಲ್ಲಿ ಸಾಗಬಹುದು’ ಎಂದು ರಾಜಾ ಬಾಬು ಸಿಂಗ್ ಅವರು ಈ ಹಿಂದೆ ಹೇಳಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>