<p class="bodytext"><strong>ಕೊಚ್ಚಿ</strong>: ಇಸ್ರೊ ಬೇಹುಗಾರಿಕೆ ಸಂಬಂಧ ವಿಜ್ಞಾನಿ ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ್ದ ಕ್ರಿಮಿನಲ್ ಸಂಚು, ಅಪಹರಣ, ಸಾಕ್ಷ್ಯ ತಿರುಚುವಿಕೆ ಕುರಿತ ದೂರಿಗೆ ಸಂಬಂಧಿಸಿಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸುವುದರ ವಿರುದ್ಧ ಕೇರಳ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.</p>.<p class="bodytext">ನಿರೀಕ್ಷಣಾ ಜಾಮೀನು ಕೋರಿ ಎಸ್.ವಿಜಯನ್ ಮತ್ತು ತಂಪಿ ಎಸ್.ದುರ್ಗ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿ ಅಶೋಕ್ ಮೋಹನ್ ಈ ಆದೇಶ ಹೊರಡಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.</p>.<p>ಸಿಬಿಐ ಪರ ವಕೀಲ ಸುವಿನ್ ಆರ್.ಮೆನನ್ ಅವರು, ಈ ಅಧಿಕಾರಿಗಳನ್ನು ಬಂಧಿಸಿದರೂ ₹ 50 ಸಾವಿರ ಮೌಲ್ಯದ ಬಾಂಡ್, ಇಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಆಧರಿಸಿ ಬಿಡುಗಡೆಗೆ ಸೂಚಿಸಿದೆ ಎಂದು ಹೇಳಿದರು.</p>.<p>ಬಂಧನದ ವಿರುದ್ಧದ ತಡೆಯಾಜ್ಞೆ ಆದೇಶದ ಅವಧಿಯು ಪ್ರಕರಣದ ಮುಂದಿನ ವಿಚಾರಣೆಯು ನಡೆಯಲಿರುವ ಆಗಸ್ಟ್ 2ರವರೆಗೂ ಚಾಲ್ತಿಯಲ್ಲಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ಕೊಚ್ಚಿ</strong>: ಇಸ್ರೊ ಬೇಹುಗಾರಿಕೆ ಸಂಬಂಧ ವಿಜ್ಞಾನಿ ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ್ದ ಕ್ರಿಮಿನಲ್ ಸಂಚು, ಅಪಹರಣ, ಸಾಕ್ಷ್ಯ ತಿರುಚುವಿಕೆ ಕುರಿತ ದೂರಿಗೆ ಸಂಬಂಧಿಸಿಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳನ್ನು ಬಂಧಿಸುವುದರ ವಿರುದ್ಧ ಕೇರಳ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.</p>.<p class="bodytext">ನಿರೀಕ್ಷಣಾ ಜಾಮೀನು ಕೋರಿ ಎಸ್.ವಿಜಯನ್ ಮತ್ತು ತಂಪಿ ಎಸ್.ದುರ್ಗ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾಯಮೂರ್ತಿ ಅಶೋಕ್ ಮೋಹನ್ ಈ ಆದೇಶ ಹೊರಡಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.</p>.<p>ಸಿಬಿಐ ಪರ ವಕೀಲ ಸುವಿನ್ ಆರ್.ಮೆನನ್ ಅವರು, ಈ ಅಧಿಕಾರಿಗಳನ್ನು ಬಂಧಿಸಿದರೂ ₹ 50 ಸಾವಿರ ಮೌಲ್ಯದ ಬಾಂಡ್, ಇಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಆಧರಿಸಿ ಬಿಡುಗಡೆಗೆ ಸೂಚಿಸಿದೆ ಎಂದು ಹೇಳಿದರು.</p>.<p>ಬಂಧನದ ವಿರುದ್ಧದ ತಡೆಯಾಜ್ಞೆ ಆದೇಶದ ಅವಧಿಯು ಪ್ರಕರಣದ ಮುಂದಿನ ವಿಚಾರಣೆಯು ನಡೆಯಲಿರುವ ಆಗಸ್ಟ್ 2ರವರೆಗೂ ಚಾಲ್ತಿಯಲ್ಲಿರುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>