<p><strong>ಅಮರಾವತಿ:</strong> ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಬಂದ ಕರೆ ಆಂಧ್ರ ಪ್ರದೇಶ ಪೊಲೀಸರನ್ನು ಪೇಚಿಗೆ ಸಿಲುಕಿಸಿದೆ.</p>.ಭಯೋತ್ಪಾದಕರು ನಸುಳುತ್ತಿದ್ದ ಮಾರ್ಗ ಪತ್ತೆ: ಪೊಲೀಸ್. <p>ಇಸ್ರೋ ಬಾಹ್ಯಾಕಾಶ ನಿಲ್ದಾಣ ಇರುವ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಭಯೋತ್ಪಾದಕನೊಬ್ಬ ಓಡಾಡುತ್ತಿದ್ದಾನೆಂದು ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಕರೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಆಂಧ್ರಪ್ರದೇಶ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಬಳಿಕ ಅದು ಹುಸಿ ಕರೆ ಎಂದು ಗೊತ್ತಾಗಿದೆ.</p><p>ಭಾನುವಾರ ತಡರಾತ್ರಿ ಕರೆ ಬಂದಿದೆ.</p>.60 ರಿಂದ 70 ಭಯೋತ್ಪಾದಕರು ದೇಶಕ್ಕೆ ನುಸುಳಲು ಕಾಯುತ್ತಿದ್ದಾರೆ: ಕಾಶ್ಮೀರ ಡಿಜಿಪಿ.<p>ಶ್ರೀಹರಿಕೋಟಾ ಶ್ರೇಣಿ ಎಂದು ಕರೆಯಲಾಗುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ಇಸ್ರೋದ ಪ್ರಮುಖ ಉಡಾವಣಾ ತಾಣವಾಗಿದ್ದು ಸುಧಾರಿತ ಉಡಾವಣಾ ಮತ್ತು ಟ್ರ್ಯಾಕಿಂಗ್ ಸೌಲಭ್ಯಗಳನ್ನು ಹೊಂದಿದೆ.</p><p>‘ನಮಗೆ ಪ್ರದೇಶದಲ್ಲಿ ಯಾವುದೇ ಅಸಾಮಾನ್ಯ ಚಟುವಟಿಕೆ ಕಂಡುಬಂದಿಲ್ಲ. ಇದು ವಂಚನೆಯ ಕರೆ ಎಂದು ತೋರುತ್ತದೆ, ಆದರೆ ನಾವು ನಮ್ಮ ಪರಿಶೀಲನೆಗಳನ್ನು ಮುಂದುವರಿಸುತ್ತಿದ್ದೇವೆ’ ಎಂದು ನಾಯ್ಡುಪೇಟ ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ. ಚಂಟಿಬಾಬು ತಿಳಿಸಿದ್ದಾರೆ.</p><p>ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯೊಂದಿಗೆ ಸಮನ್ವಯ ಸಾಧಿಸಿದ ಅಧಿಕಾರಿಗಳು ಪ್ರದೇಶದ ಸುತ್ತಲೂ ತೀವ್ರ ಶೋಧ ನಡೆಸಿದ್ದರು.</p> .ಪಾಕ್: ಪ್ರಯಾಣಿಕರಿಗೆ ಚಿತ್ರಹಿಂಸೆ, ಬಸ್ಗೆ ಬೆಂಕಿ ಹಚ್ಚಿದ ಭಯೋತ್ಪಾದಕರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ:</strong> ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಬಂದ ಕರೆ ಆಂಧ್ರ ಪ್ರದೇಶ ಪೊಲೀಸರನ್ನು ಪೇಚಿಗೆ ಸಿಲುಕಿಸಿದೆ.</p>.ಭಯೋತ್ಪಾದಕರು ನಸುಳುತ್ತಿದ್ದ ಮಾರ್ಗ ಪತ್ತೆ: ಪೊಲೀಸ್. <p>ಇಸ್ರೋ ಬಾಹ್ಯಾಕಾಶ ನಿಲ್ದಾಣ ಇರುವ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಭಯೋತ್ಪಾದಕನೊಬ್ಬ ಓಡಾಡುತ್ತಿದ್ದಾನೆಂದು ತಮಿಳುನಾಡು ಪೊಲೀಸರು ಎಂದು ಹೇಳಿಕೊಂಡು ಕರೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಆಂಧ್ರಪ್ರದೇಶ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಬಳಿಕ ಅದು ಹುಸಿ ಕರೆ ಎಂದು ಗೊತ್ತಾಗಿದೆ.</p><p>ಭಾನುವಾರ ತಡರಾತ್ರಿ ಕರೆ ಬಂದಿದೆ.</p>.60 ರಿಂದ 70 ಭಯೋತ್ಪಾದಕರು ದೇಶಕ್ಕೆ ನುಸುಳಲು ಕಾಯುತ್ತಿದ್ದಾರೆ: ಕಾಶ್ಮೀರ ಡಿಜಿಪಿ.<p>ಶ್ರೀಹರಿಕೋಟಾ ಶ್ರೇಣಿ ಎಂದು ಕರೆಯಲಾಗುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ಇಸ್ರೋದ ಪ್ರಮುಖ ಉಡಾವಣಾ ತಾಣವಾಗಿದ್ದು ಸುಧಾರಿತ ಉಡಾವಣಾ ಮತ್ತು ಟ್ರ್ಯಾಕಿಂಗ್ ಸೌಲಭ್ಯಗಳನ್ನು ಹೊಂದಿದೆ.</p><p>‘ನಮಗೆ ಪ್ರದೇಶದಲ್ಲಿ ಯಾವುದೇ ಅಸಾಮಾನ್ಯ ಚಟುವಟಿಕೆ ಕಂಡುಬಂದಿಲ್ಲ. ಇದು ವಂಚನೆಯ ಕರೆ ಎಂದು ತೋರುತ್ತದೆ, ಆದರೆ ನಾವು ನಮ್ಮ ಪರಿಶೀಲನೆಗಳನ್ನು ಮುಂದುವರಿಸುತ್ತಿದ್ದೇವೆ’ ಎಂದು ನಾಯ್ಡುಪೇಟ ಉಪ ಪೊಲೀಸ್ ವರಿಷ್ಠಾಧಿಕಾರಿ ಜಿ. ಚಂಟಿಬಾಬು ತಿಳಿಸಿದ್ದಾರೆ.</p><p>ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯೊಂದಿಗೆ ಸಮನ್ವಯ ಸಾಧಿಸಿದ ಅಧಿಕಾರಿಗಳು ಪ್ರದೇಶದ ಸುತ್ತಲೂ ತೀವ್ರ ಶೋಧ ನಡೆಸಿದ್ದರು.</p> .ಪಾಕ್: ಪ್ರಯಾಣಿಕರಿಗೆ ಚಿತ್ರಹಿಂಸೆ, ಬಸ್ಗೆ ಬೆಂಕಿ ಹಚ್ಚಿದ ಭಯೋತ್ಪಾದಕರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>