ದ್ರಾಜಿಂಡಾದಿಂದ ಡೇರಾ ಇಸ್ಮಾಯಿಲ್ ಖಾನ್ಗೆ ಶನಿವಾರ ತೆರಳುತ್ತಿದ್ದ ಬಸ್ ಅನ್ನು ಟಿಟಿಪಿ ಭಯೋತ್ಪಾದಕರು ದಾರಬನ್ ತೆಹಸಿಲ್ ಪ್ರದೇಶದಲ್ಲಿ ತಡೆದು, ಪ್ರಯಾಣಿಕರನ್ನು ಬಲವಂತವಾಗಿ ಕಳೆಗಿಳಿಸಿದ್ದಾರೆ. ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದಲ್ಲದೆ, ಹಿಂಸೆಯನ್ನೂ ನೀಡಿದ್ದಾರೆ. ನಂತರ ಖಾಲಿ ಬಸ್ ಅನ್ನು ಸುಟ್ಟು, ಬೂದಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಆದಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.