<p><strong>ಕೋಯಿಕ್ಕೋಡ್</strong> (<strong>ಕೇರಳ</strong>):‘ಜಮಾತ್–ಇ–ಇಸ್ಲಾಮಿ’ ನಾಯಕರ ಮನವಿಯಂತೆ ನಾನು ಈ ಹಿಂದೆ ಅವರ ಜತೆ ಮಾತುಕತೆ ನಡೆಸಿದ್ದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.</p>.<p>ಕೋಯಿಕ್ಕೋಡ್ನಲ್ಲಿ ಭಾನುವಾರ ಪತ್ರಕರ್ತರ ಜೊತೆ ಸಂವಾದ ನಡೆಸಿದ ಅವರು,‘ಜಮಾತೆ ನಾಯಕರ ಜೊತೆಗೆ ಸಿಪಿಎಂ ರಾಜ್ಯ ಸಮಿತಿಯ ಕಚೇರಿಯಲ್ಲಿ ಸಭೆ ನಡೆಸಿದ್ದೆ. ಆದರೆ, ಆ ಸಭೆಯ ಕುರಿತಂತೆ ನಾನು ಯಾವುದೇ ಪ್ರಮಾಣಪತ್ರ ನೀಡಲು ಸಿದ್ಧನಿಲ್ಲ’ ಎಂದು ತಿಳಿಸಿದ್ದಾರೆ.</p>.<p class="title">‘ಜಮಾತೆ ನಾಯಕರು ಇಡೀ ಸಭೆಯಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಯುವ ಚಳವಳಿಯ ನಾಯಕರು ಹಾಜರಿದ್ದರು. ನೀವು ಸಮಾಜ ವಿರೋಧಿ ನಾಯಕರು ಎಂದು ಅವರಿಗೆ ನೇರವಾಗಿ ಹೇಳಿದ್ದೆ. ಇದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದರು’ ಎಂದು ಹೇಳಿದ್ದಾರೆ.</p>.<p class="title">‘ರಾಜ್ಯದ ವಿಚಾರದಲ್ಲಿ ಯಾವುದೇ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಜಮಾತೆ ಮುಖಂಡರು ವಿರೋಧಿಸುತ್ತಾರೆ. ನಾವು ಸತ್ಯ ಹೇಳಲು ಯಾವಾಗಲೂ ಹಿಂಜರಿಯಬಾರದು, ಈಗ ಅಥವಾ ಮುಂದೆಯೂ ಇರಬಹುದು’ ಎಂದು ತಿಳಿಸಿದ್ದಾರೆ.</p>.<p class="title">ಜಮಾತ್–ಇ–ಇಸ್ಲಾಮಿ ಸಂಘಟನೆಯು ಮುಸ್ಲಿಂ ಸಂಘಟನೆಯಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜೊತೆಗೆ ಉತ್ತಮ ಒಡನಾಟ ಹೊಂದಿದೆ. ಜಮಾತೆ ಸಂಘಟನೆಯು ಕೋಮುವಾದಿ ಸಂಘಟನೆಯಾಗಿದೆ ಎಂದು ಪಿಣರಾಯಿ ನಿರಂತರ ಟೀಕಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಿಕ್ಕೋಡ್</strong> (<strong>ಕೇರಳ</strong>):‘ಜಮಾತ್–ಇ–ಇಸ್ಲಾಮಿ’ ನಾಯಕರ ಮನವಿಯಂತೆ ನಾನು ಈ ಹಿಂದೆ ಅವರ ಜತೆ ಮಾತುಕತೆ ನಡೆಸಿದ್ದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.</p>.<p>ಕೋಯಿಕ್ಕೋಡ್ನಲ್ಲಿ ಭಾನುವಾರ ಪತ್ರಕರ್ತರ ಜೊತೆ ಸಂವಾದ ನಡೆಸಿದ ಅವರು,‘ಜಮಾತೆ ನಾಯಕರ ಜೊತೆಗೆ ಸಿಪಿಎಂ ರಾಜ್ಯ ಸಮಿತಿಯ ಕಚೇರಿಯಲ್ಲಿ ಸಭೆ ನಡೆಸಿದ್ದೆ. ಆದರೆ, ಆ ಸಭೆಯ ಕುರಿತಂತೆ ನಾನು ಯಾವುದೇ ಪ್ರಮಾಣಪತ್ರ ನೀಡಲು ಸಿದ್ಧನಿಲ್ಲ’ ಎಂದು ತಿಳಿಸಿದ್ದಾರೆ.</p>.<p class="title">‘ಜಮಾತೆ ನಾಯಕರು ಇಡೀ ಸಭೆಯಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಯುವ ಚಳವಳಿಯ ನಾಯಕರು ಹಾಜರಿದ್ದರು. ನೀವು ಸಮಾಜ ವಿರೋಧಿ ನಾಯಕರು ಎಂದು ಅವರಿಗೆ ನೇರವಾಗಿ ಹೇಳಿದ್ದೆ. ಇದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದರು’ ಎಂದು ಹೇಳಿದ್ದಾರೆ.</p>.<p class="title">‘ರಾಜ್ಯದ ವಿಚಾರದಲ್ಲಿ ಯಾವುದೇ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಜಮಾತೆ ಮುಖಂಡರು ವಿರೋಧಿಸುತ್ತಾರೆ. ನಾವು ಸತ್ಯ ಹೇಳಲು ಯಾವಾಗಲೂ ಹಿಂಜರಿಯಬಾರದು, ಈಗ ಅಥವಾ ಮುಂದೆಯೂ ಇರಬಹುದು’ ಎಂದು ತಿಳಿಸಿದ್ದಾರೆ.</p>.<p class="title">ಜಮಾತ್–ಇ–ಇಸ್ಲಾಮಿ ಸಂಘಟನೆಯು ಮುಸ್ಲಿಂ ಸಂಘಟನೆಯಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜೊತೆಗೆ ಉತ್ತಮ ಒಡನಾಟ ಹೊಂದಿದೆ. ಜಮಾತೆ ಸಂಘಟನೆಯು ಕೋಮುವಾದಿ ಸಂಘಟನೆಯಾಗಿದೆ ಎಂದು ಪಿಣರಾಯಿ ನಿರಂತರ ಟೀಕಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>