ಜಮ್ಮು ಮತ್ತು ಕಾಶ್ಮೀರಕ್ಕೆ ಉದ್ಯೋಗ, ಉತ್ತಮ ವ್ಯಾಪಾರ ಮತ್ತು ಪ್ರೀತಿ ಬೇಕಿದೆ. ಆದರೆ ಅವರಿಗೆ ಸಿಕ್ಕಿದ್ದೇನು? ಬಿಜೆಪಿಯ ಬುಲ್ಡೋಜರ್! ಹಲವು ದಶಕಗಳಿಂದ ಜನರು ಶ್ರಮದಿಂದ ಬೆಳೆಸಿದ ನಾಡನ್ನು ಅವರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜನರನ್ನು ವಿಭಜಿಸುವ ಮೂಲಕ ಅಲ್ಲ, ಜನರನ್ನು ಒಗ್ಗೂಡಿಸುವ ಮೂಲಕ ಕಾಶ್ಮೀರವನ್ನು ರಕ್ಷಿಸಲಾಗುವುದು ಎಂದು ಅವರು ಹೇಳಿದರು.