10ನೇ ತರಗತಿ ತನಕ ಉತ್ತರ ಬೆಂಗಳೂರಿನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ (ಡಿಪಿಎಸ್) ಅವರು ವಿದ್ಯಾಭ್ಯಾಸ ಮಾಡಿದ್ದಾರೆ. 11 ಮತ್ತು 12ನೇ ತರಗತಿಗೆ ನಾರಾಯಣ ಇ-ಟೆಕ್ನೋ ಸ್ಕೂಲ್ ಸೇರಿಕೊಂಡರು. ಗೌರವ್ ಅವರ ತಂದೆ ಗೌತಮ್ಕುಮಾರ್ ಅವರು ಶಿಕಾಗೋದಲ್ಲಿ ಯೋಜನಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಕೋವಿಡ್ ಸಂದರ್ಭದಲ್ಲಿ ತಂದೆಯಿಂದ ದೂರವಿದ್ದು ವ್ಯಾಸಂಗ ಮಾಡುವುದು ದೊಡ್ಡ ಸವಾಲಾಗಿತ್ತು. ನಿರಂತರ ಅಭ್ಯಾಸವೇ ಸಾಧನೆಗೆ ಸಹಾಯವಾಯಿತು’ ಎಂದು ಹೇಳಿದರು. ‘ತಾಯಿ ಬರ್ನಾಲಿ ದಾಸ್ ಅವರು ಶಾಲಾ ಶಿಕ್ಷಕಿಯಾಗಿದ್ದು, ಅವರ ಪ್ರೇರಣೆಯೂ ಈ ಸಾಧನೆಗೆ ಪ್ರಮುಖ ಕಾರಣ. ಸ್ವಂತ ಶಕ್ತಿಯಿಂದ ಅಧ್ಯಯನ ನಡೆಸಲು ಸಾಂಕ್ರಾಮಿಕ ರೋಗ ಸಹಾಯ ಮಾಡಿತು. ಆದರೆ, ಸ್ನೇಹಿತರು ಮತ್ತು ಶಿಕ್ಷಕರನ್ನು ಭೇಟಿಯಾಗದಂತೆ ಮಾಡಿತು’ ಎಂದು ತಿಳಿಸಿದರು.