<p><strong>ಕಾನ್ಪುರ:</strong> ಉತ್ತರ ಪ್ರದೇಶದ ಕಾನ್ಪುರದ ಸಚೆಂಡಿ ಪ್ರದೇಶದಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಸ್ಥಳೀಯ ಯೂಟ್ಯೂಬರ್ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.ಉತ್ತರ ಪ್ರದೇಶ ಎಸ್ಐಆರ್: 2.89 ಕೋಟಿ ಜನರ ಹೆಸರನ್ನು ಕೈಬಿಟ್ಟ ಚುನಾವಣಾ ಆಯೋಗ.<p>ಪ್ರಕರಣ ಭಾರಿ ತೀವ್ರತೆ ಪಡೆದುಕೊಂಡಿದ್ದು, ಪೊಲೀಸ್ ಉಪ ಆಯುಕ್ತ (ಪಶ್ಚಿಮ) ದಿನೇಶ್ ಚಂದ್ರ ತ್ರಿಪಾಠಿಯನ್ನು ಪದಚ್ಯುತಗೊಳಿಸಿ ಡಿಸಿಪಿ ಪ್ರಧಾನ ಕಚೇರಿಗೆ ನಿಯೋಜಿಸಲಾಗಿದೆ. ಕರ್ತವ್ಯ ಲೋಪ ಹಾಗೂ ವಾಸ್ತವಾಂಶ ತಿರುಚಿದ ಆರೋಪದಲ್ಲಿ ಸಚೆಂಡಿ ಠಾಣಾಧಿಕಾರಿ ವಿಕ್ರಂ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.</p><p>7 ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವ ಸಂತ್ರಸ್ತೆಯನ್ನು ಮಹೀಂದ್ರಾ ಸ್ಕಾರ್ಪಿಯೊದಲ್ಲಿ ಸೋಮವಾರ ರಾತ್ರಿ 10 ಗಂಟೆ ವೇಳೆ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಸಂತ್ರಸ್ತೆಯನ್ನು ರೈಲು ಹಳಿ ಸಮೀಪದ ಮರುಭೂಮಿ ಪ್ರದೇಶಕ್ಕೆ ಕರೆದೊಯ್ದು, ಸುಮಾರು ಎರಡು ಗಂಟೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಪ್ರಜ್ಞಾಹೀನ ಅವಸ್ಥೆಯಲ್ಲಿದ್ದ ಆಕೆಯನ್ನು ಮನೆ ಮುಂದೆ ಎಸೆದು ಹೋಗಿದ್ದಾರೆ.</p>.ಉತ್ತರ ಪ್ರದೇಶ | ಒಂದೇ ವರ್ಷದಲ್ಲಿ 48 ಎನ್ಕೌಂಟರ್: 8 ವರ್ಷಗಳಲ್ಲೇ ಅಧಿಕ.<p>‘ಸಂತ್ರಸ್ತೆಯ ಹೇಳಿಕೆ ಆಧರಿಸಿ, ಸಬ್ ಇನ್ಸ್ಪೆಕ್ಟರ್ ಅಮಿತ್ ಕುಮಾರ್ ಮೌರ್ಯ ಹಾಗೂ ಯೂಟ್ಯೂಬರ್ ಶಿವಭರಣ್ ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಯಾದವ್ನನ್ನು ಬಂಧಿಲಾಗಿದ್ದು, ತಲೆ ಮರೆಸಿಕೊಂಡಿರುವ ಎಸ್ಐ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.</p><p>ಅಪರಾಧಕ್ಕೆ ಬಳಸಲಾದ, ಅಮಿತ್ ಕುಮಾರ್ಗೆ ಸೇರಿದ ಎಸ್ಯುವಿಯನ್ನು ದಸ್ತಗಿರಿ ಮಾಡಲಾಗಿದೆ.</p><p>ಬೈತೂರ್ ಪೊಲೀಸ್ ಠಾಣೆಗೆ ವರ್ಗಾವಣೆಯಾದರೂ, ಕೃತ್ಯ ನಡೆಯುವ ವೇಳೆ ಅಮಿತ್ ಕಮಾರ್, ಸಚೆಂಡಿಯಲ್ಲಿದ್ದರು.</p><p>ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಸಂತ್ರಸ್ತರ ಕುಟುಂಬದವರು ಆರೋಪಿಸಿದ್ದರಲ್ಲದೆ, ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಿದಾಗ ಅದನ್ನೂ ಆರಂಭದಲ್ಲಿ ನಿರಾಕರಿಸಿದರು ಎಂದು ದೂರಿದ್ದಾರೆ.</p>.ಉತ್ತರ ಪ್ರದೇಶ: ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಮಗುವನ್ನು ಕೊಂದ ತಂದೆ.<p>ಬಾಲಕಿಯ ಮೊಬೈಲ್ ಫೋನ್ ವಶಪಡಿಸಿಕೊಂಡು, ನ್ಯಾಯಾಲಯದ ಹೇಳಿಕೆ ದಾಖಲಿಸುವವರೆಗೆ ಆಕೆಯನ್ನು ಮನೆಗೆ ಹಿಂತಿರುಗದಂತೆ ತಡೆದರು ಎಂದು ಬಾಲಕಿಯ ಸಹೋದರ ಹೇಳಿದ್ದಾರೆ.</p><p>ಘಟನೆ ಸಂಬಂಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸದ್ದಕ್ಕೆ ಹಾಗೂ ದಾಖಲೆಗಳಲ್ಲಿ ಸತ್ಯಗಳನ್ನು ತಪ್ಪಾಗಿ ನಿರೂಪಿಸಿದ ಆರೋಪದ ಮೇಲೆ ಎಸ್ಎಚ್ಒ ವಿಕ್ರಮ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. ದೀನನಾಥ್ ಮಿಶ್ರಾ ಅವರಿಗೆ ಸಚೆಂಡಿ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಲಾಗಿದೆ.</p>.ಉತ್ತರ ಪ್ರದೇಶ: ತಂದೆ–ತಾಯಿಯಿಂದ ದೂರವಾಗಿದ್ದ ಮಕ್ಕಳನ್ನು ಬೆಸೆದ ಎಸ್ಐಆರ್!.<p>ಪ್ರಕರಣದ ತನಿಖೆಯನ್ನು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಕಪಿಲ್ ದೇವ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.</p><p>ಈ ಘಟನೆಯು ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ‘ತನಿಖೆಯನ್ನು ಸಂಪೂರ್ಣ ಪಾರದರ್ಶಕತೆಯಿಂದ ನಡೆಸಲಾಗುತ್ತಿದೆ ಮತ್ತು ಎಲ್ಲಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ರಘುಬೀರ್ ಲಾಲ್ ಹೇಳಿದ್ದಾರೆ.</p> .ಉತ್ತರ ಪ್ರದೇಶ: ಶಂಕಿತ ಭಯೋತ್ಪಾದಕರಿಬ್ಬರ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ:</strong> ಉತ್ತರ ಪ್ರದೇಶದ ಕಾನ್ಪುರದ ಸಚೆಂಡಿ ಪ್ರದೇಶದಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಸ್ಥಳೀಯ ಯೂಟ್ಯೂಬರ್ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.ಉತ್ತರ ಪ್ರದೇಶ ಎಸ್ಐಆರ್: 2.89 ಕೋಟಿ ಜನರ ಹೆಸರನ್ನು ಕೈಬಿಟ್ಟ ಚುನಾವಣಾ ಆಯೋಗ.<p>ಪ್ರಕರಣ ಭಾರಿ ತೀವ್ರತೆ ಪಡೆದುಕೊಂಡಿದ್ದು, ಪೊಲೀಸ್ ಉಪ ಆಯುಕ್ತ (ಪಶ್ಚಿಮ) ದಿನೇಶ್ ಚಂದ್ರ ತ್ರಿಪಾಠಿಯನ್ನು ಪದಚ್ಯುತಗೊಳಿಸಿ ಡಿಸಿಪಿ ಪ್ರಧಾನ ಕಚೇರಿಗೆ ನಿಯೋಜಿಸಲಾಗಿದೆ. ಕರ್ತವ್ಯ ಲೋಪ ಹಾಗೂ ವಾಸ್ತವಾಂಶ ತಿರುಚಿದ ಆರೋಪದಲ್ಲಿ ಸಚೆಂಡಿ ಠಾಣಾಧಿಕಾರಿ ವಿಕ್ರಂ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.</p><p>7 ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವ ಸಂತ್ರಸ್ತೆಯನ್ನು ಮಹೀಂದ್ರಾ ಸ್ಕಾರ್ಪಿಯೊದಲ್ಲಿ ಸೋಮವಾರ ರಾತ್ರಿ 10 ಗಂಟೆ ವೇಳೆ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಸಂತ್ರಸ್ತೆಯನ್ನು ರೈಲು ಹಳಿ ಸಮೀಪದ ಮರುಭೂಮಿ ಪ್ರದೇಶಕ್ಕೆ ಕರೆದೊಯ್ದು, ಸುಮಾರು ಎರಡು ಗಂಟೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಪ್ರಜ್ಞಾಹೀನ ಅವಸ್ಥೆಯಲ್ಲಿದ್ದ ಆಕೆಯನ್ನು ಮನೆ ಮುಂದೆ ಎಸೆದು ಹೋಗಿದ್ದಾರೆ.</p>.ಉತ್ತರ ಪ್ರದೇಶ | ಒಂದೇ ವರ್ಷದಲ್ಲಿ 48 ಎನ್ಕೌಂಟರ್: 8 ವರ್ಷಗಳಲ್ಲೇ ಅಧಿಕ.<p>‘ಸಂತ್ರಸ್ತೆಯ ಹೇಳಿಕೆ ಆಧರಿಸಿ, ಸಬ್ ಇನ್ಸ್ಪೆಕ್ಟರ್ ಅಮಿತ್ ಕುಮಾರ್ ಮೌರ್ಯ ಹಾಗೂ ಯೂಟ್ಯೂಬರ್ ಶಿವಭರಣ್ ಯಾದವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಯಾದವ್ನನ್ನು ಬಂಧಿಲಾಗಿದ್ದು, ತಲೆ ಮರೆಸಿಕೊಂಡಿರುವ ಎಸ್ಐ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.</p><p>ಅಪರಾಧಕ್ಕೆ ಬಳಸಲಾದ, ಅಮಿತ್ ಕುಮಾರ್ಗೆ ಸೇರಿದ ಎಸ್ಯುವಿಯನ್ನು ದಸ್ತಗಿರಿ ಮಾಡಲಾಗಿದೆ.</p><p>ಬೈತೂರ್ ಪೊಲೀಸ್ ಠಾಣೆಗೆ ವರ್ಗಾವಣೆಯಾದರೂ, ಕೃತ್ಯ ನಡೆಯುವ ವೇಳೆ ಅಮಿತ್ ಕಮಾರ್, ಸಚೆಂಡಿಯಲ್ಲಿದ್ದರು.</p><p>ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಸಂತ್ರಸ್ತರ ಕುಟುಂಬದವರು ಆರೋಪಿಸಿದ್ದರಲ್ಲದೆ, ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಿದಾಗ ಅದನ್ನೂ ಆರಂಭದಲ್ಲಿ ನಿರಾಕರಿಸಿದರು ಎಂದು ದೂರಿದ್ದಾರೆ.</p>.ಉತ್ತರ ಪ್ರದೇಶ: ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಮಗುವನ್ನು ಕೊಂದ ತಂದೆ.<p>ಬಾಲಕಿಯ ಮೊಬೈಲ್ ಫೋನ್ ವಶಪಡಿಸಿಕೊಂಡು, ನ್ಯಾಯಾಲಯದ ಹೇಳಿಕೆ ದಾಖಲಿಸುವವರೆಗೆ ಆಕೆಯನ್ನು ಮನೆಗೆ ಹಿಂತಿರುಗದಂತೆ ತಡೆದರು ಎಂದು ಬಾಲಕಿಯ ಸಹೋದರ ಹೇಳಿದ್ದಾರೆ.</p><p>ಘಟನೆ ಸಂಬಂಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸದ್ದಕ್ಕೆ ಹಾಗೂ ದಾಖಲೆಗಳಲ್ಲಿ ಸತ್ಯಗಳನ್ನು ತಪ್ಪಾಗಿ ನಿರೂಪಿಸಿದ ಆರೋಪದ ಮೇಲೆ ಎಸ್ಎಚ್ಒ ವಿಕ್ರಮ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. ದೀನನಾಥ್ ಮಿಶ್ರಾ ಅವರಿಗೆ ಸಚೆಂಡಿ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಲಾಗಿದೆ.</p>.ಉತ್ತರ ಪ್ರದೇಶ: ತಂದೆ–ತಾಯಿಯಿಂದ ದೂರವಾಗಿದ್ದ ಮಕ್ಕಳನ್ನು ಬೆಸೆದ ಎಸ್ಐಆರ್!.<p>ಪ್ರಕರಣದ ತನಿಖೆಯನ್ನು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಕಪಿಲ್ ದೇವ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.</p><p>ಈ ಘಟನೆಯು ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ‘ತನಿಖೆಯನ್ನು ಸಂಪೂರ್ಣ ಪಾರದರ್ಶಕತೆಯಿಂದ ನಡೆಸಲಾಗುತ್ತಿದೆ ಮತ್ತು ಎಲ್ಲಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ರಘುಬೀರ್ ಲಾಲ್ ಹೇಳಿದ್ದಾರೆ.</p> .ಉತ್ತರ ಪ್ರದೇಶ: ಶಂಕಿತ ಭಯೋತ್ಪಾದಕರಿಬ್ಬರ ಬಂಧನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>