<p><strong>ಮುಜಾಫರ್ನಗರ (ಉತ್ತರ ಪ್ರದೇಶ)</strong>: ಇಲ್ಲಿನ ಮದರಸಾದಲ್ಲಿ ಓದ್ದಿದ್ದ ಇಬ್ಬರು ಶಂಕಿತ ಉಗ್ರರನ್ನು ಗುಜರಾತ್ ಭಯೋತ್ಪಾದನಾ ವಿರೋಧಿ ದಳದ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ. </p><p>ಶಮ್ಲಿ ಜಿಲ್ಲೆಯ ಜಿಂಜನಾ ನಗರದ ಆಜಾದ್ ಸುಲೇಮಾನ್ ಶೇಖ್ (20) ಮತ್ತು ಲಖೀಂಪುರ ಖೇರಿಯ ಮೊಹಮ್ಮದ್ ಸುಹೇಲ್ ಕಾನ್ (23) ಬಂಧಿತರು.</p><p>ಬುಧಾನಾ ಮದರಸಾದ ಮುಖ್ಯಸ್ಥ ಪಿಟಿಐ ಜತೆ ಮಾತನಾಡಿ, ‘ಎಟಿಎಸ್ ಅಧಿಕಾರಿಗಳು ಬಂಧಿಸಿದ ಇಬ್ಬರೂ ಇದೇ ಮದರಾಸಾದಲ್ಲಿ ಓದಿದ್ದಾರೆ. ಆದರೆ ಬಹಳ ಹಿಂದೆಯೇ ಮದರಸಾ ತೊರೆದಿದ್ದಾರೆ. ಆಜಾದ್ ಶೇಖ್ 2018–19ರ ಸಮಯದಲ್ಲಿ ಓದುತ್ತಿದ್ದ. ಕೋವಿಡ್ ಲಾಕ್ಡೌನ್ ವೇಳೆ ಮದರಸಾ ಬಂದ್ ಆಗಿತ್ತು. ಆ ಸಂದರ್ಭದಲ್ಲಿ ಹೋದವನು ಮತ್ತೆ ಹಿಂತಿರುಗಲಿಲ್ಲ. ಸುಹೇಲ್ 3 ತಿಂಗಳ ಹಿಂದೆ ಸೇರಿಕೊಂಡಿದ್ದ. ದರೆ ತಂದೆಗೆ ಅನಾರೋಗ್ಯ ಎಂದು ನ.5ರಂದು ಹೋದವನು ಮತ್ತೆ ಬರಲಿಲ್ಲ. ಮಾಧ್ಯಮಗಳ ಮೂಲಕ ಇವರಿಬ್ಬರ ಬಂಧನವಾಗಿರುವುದು ತಿಳಿಯಿತು’ ಎಂದು ಮಾಹಿತಿ ನೀಡಿದ್ದಾರೆ.</p><p>ಆಜಾದ್ನನ್ನು ವಶಕ್ಕೆ ಪಡೆಯಲಾಗಿದ್ದು, ಗುಜರಾತ್ ಎಟಿಎಸ್ ವಿಚಾರಣೆ ನಡೆಸುತ್ತದೆ. ಇದೇ ವೇಳೆ ಉತ್ತರ ಪ್ರದೇಶ ಎಟಿಎಸ್ ಆತನ ಹಿನ್ನೆಲೆಯನ್ನು ವಿಚಾರಿಸುತ್ತಿದೆ ಎಂದು ಶಮ್ಲಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.</p>.'ವೈಟ್ಕಾಲರ್ ಭಯೋತ್ಪಾದನೆ': ಶಿಕ್ಷಿತ ವೃತ್ತಿಪರರ ಬಳಸಿ ಉಗ್ರ ಕೃತ್ಯಕ್ಕೆ ಪಿತೂರಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಾಫರ್ನಗರ (ಉತ್ತರ ಪ್ರದೇಶ)</strong>: ಇಲ್ಲಿನ ಮದರಸಾದಲ್ಲಿ ಓದ್ದಿದ್ದ ಇಬ್ಬರು ಶಂಕಿತ ಉಗ್ರರನ್ನು ಗುಜರಾತ್ ಭಯೋತ್ಪಾದನಾ ವಿರೋಧಿ ದಳದ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ. </p><p>ಶಮ್ಲಿ ಜಿಲ್ಲೆಯ ಜಿಂಜನಾ ನಗರದ ಆಜಾದ್ ಸುಲೇಮಾನ್ ಶೇಖ್ (20) ಮತ್ತು ಲಖೀಂಪುರ ಖೇರಿಯ ಮೊಹಮ್ಮದ್ ಸುಹೇಲ್ ಕಾನ್ (23) ಬಂಧಿತರು.</p><p>ಬುಧಾನಾ ಮದರಸಾದ ಮುಖ್ಯಸ್ಥ ಪಿಟಿಐ ಜತೆ ಮಾತನಾಡಿ, ‘ಎಟಿಎಸ್ ಅಧಿಕಾರಿಗಳು ಬಂಧಿಸಿದ ಇಬ್ಬರೂ ಇದೇ ಮದರಾಸಾದಲ್ಲಿ ಓದಿದ್ದಾರೆ. ಆದರೆ ಬಹಳ ಹಿಂದೆಯೇ ಮದರಸಾ ತೊರೆದಿದ್ದಾರೆ. ಆಜಾದ್ ಶೇಖ್ 2018–19ರ ಸಮಯದಲ್ಲಿ ಓದುತ್ತಿದ್ದ. ಕೋವಿಡ್ ಲಾಕ್ಡೌನ್ ವೇಳೆ ಮದರಸಾ ಬಂದ್ ಆಗಿತ್ತು. ಆ ಸಂದರ್ಭದಲ್ಲಿ ಹೋದವನು ಮತ್ತೆ ಹಿಂತಿರುಗಲಿಲ್ಲ. ಸುಹೇಲ್ 3 ತಿಂಗಳ ಹಿಂದೆ ಸೇರಿಕೊಂಡಿದ್ದ. ದರೆ ತಂದೆಗೆ ಅನಾರೋಗ್ಯ ಎಂದು ನ.5ರಂದು ಹೋದವನು ಮತ್ತೆ ಬರಲಿಲ್ಲ. ಮಾಧ್ಯಮಗಳ ಮೂಲಕ ಇವರಿಬ್ಬರ ಬಂಧನವಾಗಿರುವುದು ತಿಳಿಯಿತು’ ಎಂದು ಮಾಹಿತಿ ನೀಡಿದ್ದಾರೆ.</p><p>ಆಜಾದ್ನನ್ನು ವಶಕ್ಕೆ ಪಡೆಯಲಾಗಿದ್ದು, ಗುಜರಾತ್ ಎಟಿಎಸ್ ವಿಚಾರಣೆ ನಡೆಸುತ್ತದೆ. ಇದೇ ವೇಳೆ ಉತ್ತರ ಪ್ರದೇಶ ಎಟಿಎಸ್ ಆತನ ಹಿನ್ನೆಲೆಯನ್ನು ವಿಚಾರಿಸುತ್ತಿದೆ ಎಂದು ಶಮ್ಲಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.</p>.'ವೈಟ್ಕಾಲರ್ ಭಯೋತ್ಪಾದನೆ': ಶಿಕ್ಷಿತ ವೃತ್ತಿಪರರ ಬಳಸಿ ಉಗ್ರ ಕೃತ್ಯಕ್ಕೆ ಪಿತೂರಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>