ತಡಬಡಾಯಿಸಿದ ಅಧ್ಯಕ್ಷ: ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ, ‘ಎಲ್ಲ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಿದ್ದೇವೆ’ ಎಂದರು. ಈ ಬಗ್ಗೆ ಪತ್ರಕರ್ತರು ಸ್ಪಷ್ಟನೆ ಕೋರಿದಾಗ, ‘ಅವರನ್ನು ಕರೆದಿದ್ದೇವೆ, ಇವರನ್ನು ಕರೆದಿದ್ದೇವೆ’ ಎಂದು ತಡಬಡಾಯಿಸಿದರು. ಸಿ.ಟಿ.ರವಿ ಅವರನ್ನು ಯಾವ ಮಾನದಂಡದ ಮೇಲೆ ಗೌರವಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗಲೂ ಸ್ಪಷ್ಟ ಉತ್ತರ ನೀಡಲಿಲ್ಲ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಅಲ್ಪಸಂಖ್ಯಾತ ನಾಯಕರ ಹಾಗೂ ಸಾಹಿತಿಗಳ ಹೆಸರು ಇಲ್ಲವಲ್ಲ ಎಂದು ಪ್ರಶ್ನಿಸಿದಾಗ, ‘ನಾನು 30 ವರ್ಷಗಳಿಂದ ದೆಹಲಿಯಲ್ಲಿದ್ದೇನೆ. ನೀವು ಬಂದು ಎಷ್ಟು ದಿನವಾಯಿತು’ ಎಂದು ಪತ್ರಕರ್ತರ ಮೇಲೆ ರೇಗಾಡಿದರು. ಈ ಮಾತಿಗೆ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ನಾಗರಾಜ ಕ್ಷಮೆಯಾಚಿಸಿದರು.